Vijay Hazare Trophy: ಹರ್ಯಾಣ ಚಾಂಪಿಯನ್
Team Udayavani, Dec 16, 2023, 11:05 PM IST
ರಾಜ್ಕೋಟ್: ರಾಜಸ್ಥಾನವನ್ನು 30 ರನ್ನುಗಳಿಂದ ಮಣಿಸಿದ ಹರ್ಯಾಣ 2023ನೇ ಸಾಲಿನ “ವಿಜಯ್ ಹಜಾರೆ ಟ್ರೋಫಿ” ಏಕದಿನ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದೆ.
ಶನಿವಾರದ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹರ್ಯಾಣ 8 ವಿಕೆಟಿಗೆ 287 ರನ್ ಪೇರಿಸಿದರೆ, ರಾಜಸ್ಥಾನ 48 ಓವರ್ಗಳಲ್ಲಿ 257ಕ್ಕೆ ಆಲೌಟ್ ಆಯಿತು.
ಹರ್ಯಾಣ ಪರ ಆರಂಭಕಾರ ಅಂಕಿತ್ ಕುಮಾರ್ ಸರ್ವಾಧಿಕ 88, ನಾಯಕ ಅಶೋಕ್ ಮೆನೇರಿಯಾ 70 ರನ್ ಬಾರಿಸಿದರು. ರಾಜಸ್ಥಾನದ ಅನಿಕೇತ್ ಚೌಧರಿ 4 ವಿಕೆಟ್ ಕೆಡವಿದರು.
ರಾಜಸ್ಥಾನದ ಚೇಸಿಂಗ್ ಅತ್ಯಂತ ಆಘಾತಕಾರಿಯಾಗಿತ್ತು. 12 ರನ್ ಆಗುವಷ್ಟರಲ್ಲಿ 3 ವಿಕೆಟ್ ಉರುಳಿ ಹೋಯಿತು. ಇದರಲ್ಲಿ, ಕರ್ನಾಟಕ ವಿರುದ್ಧ 180 ರನ್ ಬಾರಿಸಿ ಮಿಂಚಿದ್ದ ದೀಪಕ್ ಹೂಡಾ ವಿಕೆಟ್ ಕೂಡ ಸೇರಿತ್ತು. ಹೂಡಾ ಅವರದು ಇಲ್ಲಿ ಶೂನ್ಯ ಸಂಪಾದನೆ.
ಈ ಕುಸಿತದ ನಡುವೆಯೂ ಓಪನರ್ ಅಭಿಜಿತ್ ತೋಮರ್ 106 ರನ್ ಬಾರಿಸಿ ರಾಜಸ್ಥಾನಕ್ಕೆ ಭರವಸೆ ಮೂಡಿಸಿದರು. ಇವರಿಗೆ ಕೀಪರ್ ಕುಣಾಲ್ ಸಿಂಗ್ ರಾಥೋಡ್ (79) ಉತ್ತಮ ಬೆಂಬಲ ನೀಡಿದರು. ಆದರೆ ಇವರಿಬ್ಬರನ್ನು ಹೊರತುಪಡಿಸಿ ಉಳಿದವರಿಗೆ ಹರ್ಯಾಣದ ಬೌಲಿಂಗ್ ಆಕ್ರಮಣವನ್ನು ನಿಭಾಯಿಸಿ ನಿಲ್ಲಲಾಗಲಿಲ್ಲ. ಸುಮಿತ್ ಕುಮಾರ್ ಮತ್ತು ಹರ್ಷಲ್ ಪಟೇಲ್ ತಲಾ 3 ವಿಕೆಟ್; ಅಂಶುಲ್ ಕಾಂಬೋಜ್ ಮತ್ತು ರಾಹುಲ್ ತೆವಾಟಿಯಾ ತಲಾ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಹರ್ಯಾಣ-8 ವಿಕೆಟಿಗೆ 287 (ಅಂಕಿತ್ ಕುಮಾರ್ 88, ಅಶೋಕ್ ಮೆನೇರಿಯಾ 70, ನಿಶಾಂತ್ ಸಿಂಧು 29, ಅನಿಕೇತ್ ಚೌಧರಿ 49ಕ್ಕೆ 4, ಅರಾಫತ್ ಖಾನ್ 59ಕ್ಕೆ 2). ರಾಜಸ್ಥಾನ-48 ಓವರ್ಗಳಲ್ಲಿ 257 (ಅಭಿಜಿತ್ ತೋಮರ್ 106, ಕುಣಾಲ್ ಸಿಂಗ್ ರಾಥೋಡ್ 79, ಸುಮಿತ್ ಕುಮಾರ್ 34ಕ್ಕೆ 3, ಹರ್ಷಲ್ ಪಟೇಲ್ 47ಕ್ಕೆ 3). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಸುಮಿತ್ ಕುಮಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್ ಮರೆತಿದ್ದಾರೆ: ಬಬಿತಾ ಫೋಗಾಟ್
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್ ಹಾದಿ ಹೀಗಿದೆ
Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್
Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್ ಪುನಾರಂಭ.. ಡಿ.28ಕ್ಕೆ ಕೂಟ ಶುರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Theft Case: ಬ್ಯಾಂಕಿನಿಂದ ಹಣದ ಬ್ಯಾಗ್ ಕಳವು ಪ್ರಕರಣ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.