Spices: ಸಂಬಾರು ಪದಾರ್ಥಗಳು ಮತ್ತು ಆರೋಗ್ಯ

ಜೀವನದ ವೈವಿಧ್ಯಮಯ ಮಸಾಲೆಯ ಘಮ...

Team Udayavani, Dec 17, 2023, 3:07 PM IST

12-desiswara

ಮೆಣಸು, ಜೀರಿಗೆ, ಏಲಕ್ಕಿ, ಲವಂಗ ಮುಂತಾದ ಸಾಂಬಾರು ಪದಾರ್ಥಗಳು ಇಲ್ಲದಿದ್ದರೆ ಬದುಕು ಹೇಗಿರುತ್ತಿತ್ತು? ಬಹುಶಃ ಅದು ಬಲು ಬರಡಾಗುತ್ತಿತ್ತು. ನಮ್ಮ ಆಹಾರದಲ್ಲಿ ಸ್ವಾರಸ್ಯವೇ ಇರುತ್ತಿರಲಿಲ್ಲ. ಆಹಾರವನ್ನು ರುಚಿಕಟ್ಟಾಗಿ ಮಾಡುವ, ಸತ್ವ ಸಂಪನ್ನವಾಗಿಸುವ ಸಾಧನ ಸಾಂಬಾರು ಮಸಾಲೆ.  ಆದ್ದರಿಂದಲೇ ಕವಿ ಹೇಳಿದ್ದಾನೆ: “ಅನುಭವದ ವೈವಿಧ್ಯವೇ ಜೀವನದ ಮಸಾಲೆ’.  ವಿವಿಧ ಸಾಂಬಾರು ಪದಾರ್ಥಗಳು ಬಾಯಿಗೆ ರುಚಿಕರ ಮಾತ್ರವಲ್ಲ, ಹೊಟ್ಟೆಗೂ ಆರೋಗ್ಯಕರ ಮತ್ತು ಹಲವಾರು ಔಷಧಗಳಿಗೆ ಆಗರ.

ಜಗತ್ತಿನ ಇತಿಹಾಸವನ್ನೇ ರಚಿಸಿದ ಖ್ಯಾತಿ ಸಾಂಬಾರಿಗಿದೆ. ಪ್ರಪಂಚದ 70ಕ್ಕೂ ಹೆಚ್ಚು ಸಾಂಬಾರು ಪದಾರ್ಥಗಳಲ್ಲಿ ಅರ್ಧಕ್ಕೂ ಹೆಚ್ಚು ಭಾರತದಲ್ಲಿ ಬೆಳೆಯುತ್ತವೆ. ಭಾರತದಲ್ಲಿ ಬೆಳೆಯುವ ಸಾಂಬಾರು ಪದಾರ್ಥಗಳು ಒಂದು ರೀತಿಯ ವಿಶಿಷ್ಟವಾದ ಗುಣಗಳನ್ನು ಹೊಂದಿ ಜನಪ್ರಿಯವಾಗಿದೆ.

ಸುಗಂಧ ಬರಿತ ಏಲಕ್ಕಿ, ಮೈ ನಿಮಿರಿಸುವ ಮೆಣಸು, ಹೊಸತು ತುಂಬವ ಶುಂಠಿ, ಸುಂದರ ಬಣ್ಣದ ಅರಿಶಿನ, ಬಾಯಿ ಚಪ್ಪರಿಸುವಂತೆ ಮಾಡುವ ಲವಂಗ, ಅಡುಗೆಗೆ ರುಚಿ ಕೊಡುವ ದಾಲಿcನ್ನಿ, ಮೈ ನಡುಗಿಸುವ ಮೆಣಸಿನ ಕಾಯಿ, ತಂಪಾಗಿಸುವ ಮೆಂತ್ಯೆ, ಘಮಘಮಿಸುವ ಸಾಸುವೆ, ಅಡುಗೆಗೆ ಬೇಕಾದ ಜಾಕಾಯಿ ಜಾಪತ್ರೆ, ಸುವಾಸನಾಭರಿತವಾದ ಜೀರಿಗೆ, ಮಸಾಲೆಗೆ ಮುಖ್ಯವಾದ ಬೆಳ್ಳಗಿನ ಬೆಳ್ಳುಳ್ಳಿ, ಊಟವಾದ ಮೇಲೆ ನೆನಪಾಗುವ ಬಡಾಸೋಂಪು… ಒಂದೇ ಎರಡೇ ಲೆಕ್ಕವಿಲ್ಲದಷ್ಟು!

ಆಹಾರ ಪದಾರ್ಥಗಳಿಗೆ ಒಂದು ರೀತಿಯ ಸ್ವಾಧನೀಯ ರುಚಿ ಕೊಡುವ ಶಕ್ತಿ ಸಾಂಬಾರು ಪದಾರ್ಥಗಳಿಗಿದೆ. ಹೆಚ್ಚಾಗಿ ಚಿರಪರಿಚಿತವಾಗಿರುವುದು ಹಸಿವನ್ನು ಉಂಟು ಮಾಡುವ ವಸ್ತು ಎಂದು. ಸಾಮಾನ್ಯ ಮನುಷ್ಯನ ದೇಹಕ್ಕೆ ಬೇಕಾದ ಸಸಾರ ಜನಕ,  ಖನಿಜ ವಸ್ತುಗಳು, ಲವಣ ಸತ್ವ, ಸಾಧಾರಣ ತೈಲ ಇತ್ಯಾದಿ ಯಥೇತ್ಛವಾಗಿ ದೊರಕಿಸಿ ಕೊಡುತ್ತವೆ.

ಸಾಮಾನ್ಯವಾಗಿ ಸಾಂಬಾರ ಪದಾರ್ಥಗಳನ್ನು ಆಹಾರ ವಸ್ತುಗಳನ್ನು ಕೆಡದಂತೆ ಕಾಪಾಡಲು ಮತ್ತು ಸುರಕ್ಷಿತವಾಗಿಡುವಲ್ಲಿ ಬಳಸುವರು. ಕೆಲವು ಸಾಂಬಾರು ವಸ್ತುಗಳು ಶಿಲೀಂದ್ರ ನಾಶಕ ಗುಣಲಕ್ಷಣಗಳನ್ನು ಒಳಗೊಂಡಿದೆ. ಮನುಷ್ಯನ ದೇಹದ ಲಾಲಾರಸ ಮತ್ತು ಜಠರ ರಸಗಳನ್ನು ಹೆಚ್ಚಾಗಿ ಉತ್ಪಾದಿಸಿ ದೇಹವನ್ನು ಉದ್ರೇಕಿಸುವ ಮೂಲಕ ಜೀರ್ಣಶಕ್ತಿಯನ್ನು ಕರುಳಿನ ದ್ವಾರಗಳನ್ನು ತೀಕ್ಷ್ಣಗೊಳಿಸುತ್ತದೆ.

 ಕರಿಮೆಣಸು

ದೇಹಕ್ಕೆ ಶೃಂಗಾರ ಸಾರಿಗೆ ಸಾಂಬಾರು ಮೆಣಸು. ಇದು ಸಾಂಬಾರು ಪ್ರಪಂಚದ ರಾಜ. ಸಾವಿರಾರು ವರ್ಷ ಗಳಿಂದಲೂ ವಿಶ್ವದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಲ ಜನಾಂಗದವರೂ ಉಪಯೋಗಿಸುತ್ತಿರುವುದರಲ್ಲಿ ಕರಿಮೆಣಸಿಗೆ ಪ್ರಪ್ರಥಮ ಸ್ಥಾನ. ಹಿಂದಿನ ಕಾಲದಲ್ಲಿ ಆರ್ಯ ಜನಾಂಗದವರು ಮೆಣಸನ್ನು ಶಕ್ತಿ ಸಾಮರ್ಥ್ಯವುಳ್ಳ ಔಷಧ ಎಂದು ಉಪಯೋಗಿಸುತ್ತಿದ್ದರು. ಮನಸ್ಸಿನಲ್ಲಿ ಒಂದು ವಿಧವಾದ ಜಿಗುಟಾದ, ಖಾರದ ಗುಣವುಳ್ಳ ಪೈಪರಿನ್‌ ಎಂಬ ರಾಸಾಯನಿಕ ಪದಾರ್ಥ ಹೊಂದಿದೆ.

 ಏಲಕ್ಕಿ

ಏಲಕ್ಕಿ ಸಾಂಬಾರ ಸಾಮ್ರಾಜ್ಯದಲ್ಲಿ ಹಸುರು ಚಿನ್ನ, ಸುಗಂಧರಾಣಿ ಮುಂತಾದ ಹೆಸರುಗಳಿಂದ ವಿಶ್ವವಿಖ್ಯಾತ ವಾಗಿದೆ. ನಾಗರಿಕತೆಯ ಕಾಲದಿಂದಲೂ ಇದು ಪ್ರಖ್ಯಾತಿ ಗಳಿಸಿತ್ತು. ಔಷಧ ಪ್ರಪಂಚದಲ್ಲಿ ಏಲಕ್ಕಿ ಒಂದು ಹೊಸ ಅಧ್ಯಾಯವನ್ನೇ ಸ್ಥಾಪಿಸಿದೆ. ಏಲಕ್ಕಿ ಶಕ್ತಿಶಾಲಿ, ಸುರಭಿಯುಕ್ತ, ವಾತಹರ, ಮೂತ್ರವರ್ಧಕ, ಹೊಟ್ಟೆ ನೋವು ವಾಂತಿ ಮತ್ತ ಹೊಟ್ಟೆ ತೊಳಸುವಿಕೆಗಳಿಗೆ ಅತ್ಯಂತ ಪರಿಣಾಮಕಾರಿ. ಹೃದ್ರೋಗ ಮತ್ತು ಶ್ವಾಸ ನಲಿಕೆಗೆ ಒಳ್ಳೆಯ ಔಷಧ. ಇದು ಕಾಮೋತೇಜಕಾರಿ ಹಾಗೂ ಜೀರ್ಣಕಾರಿ ಕೂಡ.

 ದಾಲಿcನ್ನಿ

ಮಸಾಲ ಪ್ರಪಂಚದಲ್ಲಿ ಸರ್ವ ಶ್ರೇಷ್ಠ ಸಾಂಬಾರು ದಾಲಿcನ್ನಿ. ಲೋರೇಸಿಯಾ ಕುಟುಂಬಕ್ಕೆ ಸೇರಿದ ದಾಲಿcನ್ನಿ, ಮರದ ತೊಗಟೆಯನ್ನು ಸೀಳಿ ಒಣಗಿಸಿಟ್ಟ ಸಂಬಾರ ಪದಾರ್ಥ. ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು ಹೃದಯೋತ್ತೇಜಕವಾದ ಔಷಧ ತಯಾರಿಸಲು, ಅಜೀರ್ಣ, ಅತಿಸಾರ, ಭೇದಿ, ವಾಂತಿ ಮುಂತಾದ ರೋಗಗಳನ್ನು ಗುಣಪಡಿಸಲು, ಹೊಟ್ಟೆಯೂಬ್ಬರ ಮತ್ತು ಹೊಟ್ಟೆ ತುಳಸುವಿಕೆಯನ್ನು ನಿವಾರಿಸಲು ಹಾಗೂ ಶುಕ್ಲ ದೋಷ ಕಾಯಿಲೆಗೆ ಕೊಡುವ ಚುಚ್ಚುಮದ್ದಿನಲ್ಲಿ ಆಂಟಿಸೆಪ್ಟಿಕ್‌ ಆಗಿಯೂ ಉಪಯೋಗಿಸಲಾಗುತ್ತಿದೆ.

 ಲವಂಗ

ಮಸಾಲೆಗಳ ಮುಕುಟಮಣಿ ಲವಂಗ. ಒಂದು ಬಿರಿಯುವ ಮೊಗ್ಗುಗಳ ಒಣಗಿದ ರೂಪಕವಾಗಿದೆ. ಲವಂಗವು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚಿನಿಂದಲೂ ಚಿರಪರಿಚಿತ. ಇದನ್ನು ಔಷಧ ತಯಾರಿಕೆ, ಸೌಂದರ್ಯ ಸಾಧನಗಳಲ್ಲಿ, ಟೂತ್‌ಪೇಸ್ಟ್‌ ತಯಾರಿಕೆಯಲ್ಲಿ ಭಕ್ಷ ಭೋಜನಗಳಲ್ಲಿ, ಜೀರ್ಣಶಕ್ತಿಯನ್ನು ಉತ್ತೇಜಿಸುವಲ್ಲಿ, ವಾತಹರವಾಗಿ, ಹಲ್ಲು ನೋವು ನಿವಾರಣೆಗಾಗಿ, ಹೊಟ್ಟೆಯುಬ್ಬರ ತಡೆಯುವಲ್ಲಿ, ಗರ್ಭಿಣಿಯರಿಗೆ ವಾಂತಿನಿಲ್ಲಿಸಲು ಮತ್ತು ಹಲ್ಲು ನೋವಿನ ನಿವಾರಣೆಗೆ ಲವಂಗದ ಎಣ್ಣೆಯನ್ನು ಬಳಸಲಾಗುತ್ತಿದೆ.

 ಶುಂಠಿ

ಬಹುಮುಖ ಬೇಡಿಕೆಯ ಸಾಂಬಾರುಗಳಲ್ಲಿ ಶುಂಠಿ ಒಂದು. ಆಹಾರ ಪದಾರ್ಥಗಳಿಗೆ ಪರಿಮಳ ಕೊಡಲು, ನಾನಾ ರೋಗ ರುಜಿನಗಳನ್ನು ಗುಣಪಡಿಸಲು ಉಪಯೋಗಿಸುವ ಶುಂಠಿ ಸುವಾಸನೆಯಿಂದ ಮತ್ತು ರುಚಿಯಿಂದ ಕೂಡಿರುವ ನೆಲದೊಳಗೆ ಬಿಡುವ ಗೆಡ್ಡೆ. ಔಷಧಗಳಲ್ಲಿ ವಾತಹರ, ಉತ್ತೇಜಕ ಅಜೀರ್ಣವ್ಯಾಧಿ, ವಾಯು ರೋಗಗಳ ನಿವಾರಕ ಔಷಧಿಯಾಗಿ ಇದನ್ನು ಉಪಯೋಗಿಸುತ್ತಾರೆ.

 ಅರಿಶಿನ

ಪ್ರಾಕೃತಿಕ ಬಣ್ಣದ ಸಾಂಬಾರು ಅರಿಶಿನ. ಸಾಂಬಾರ ಪದಾರ್ಥವಾಗಿ, ಬಣ್ಣಗಳನ್ನು ಅಧಿಕವಾಗಿ ವರ್ಧಿಸುವ ಗಿಡಮೂಲಿಕೆಯಾಗಿ, ಆಂಟಿಸೆಪ್ಟಿಕ್‌ ಮತ್ತು ಚರ್ಮದ ಕಾಂತಿಯನ್ನು ವರ್ಧಿಸುವ ವಸ್ತುವಾಗಿ – ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಬೆಳೆಯಲಾಗುವ ಒಂದು ಗೆಡ್ಡೆ . ವೈದ್ಯಕೀಯ ಕ್ಷೇತ್ರದಲ್ಲಿ ರಕ್ತವನ್ನು ಶುದ್ಧೀಕರಿಸುವುದು, ಕೆಮ್ಮು, ನೆಗಡಿ, ಗಂಟಲು ನೋವು, ಹೊಟ್ಟೆನೋವು, ಅನೇಕ ಚರ್ಮ ವ್ಯಾಧಿಗಳು, ಸಿಡುಬು, ಉಳುಕಿದ ಕೀಲುಗಳಿಗೆ ಎಣ್ಣೆ, ಮುಲಾಮು ಸಿದೌœಶಧವಾಗಿ ಉಪಯೋಗಿಸುತ್ತಾರೆ.

 ಮೆಣಸಿನಕಾಯಿ

ನವರಸಗಳಲ್ಲಿ ಒಂದು ಮೆಣಸಿನಕಾಯಿ. ಇದನ್ನು ಹಸಿ ಅಥವಾ ಒಣಗಿದ ರೂಪದಲ್ಲಿ ಉಪಯೋಗಿಸುತ್ತಾರೆ. ಉತ್ತೇಜಕವಾದ ಈ ಸಾಂಬಾರವನ್ನು ತಿಂದಾಗ ಸಲೈವ ರಸವು ಹೆಚ್ಚಾಗಿ ಜೀರ್ಣ ಶಕ್ತಿಗೆ ಉಪಕಾರಿಯಾಗುವುದು. ಹೊಟ್ಟೆ ಹಸುವನ್ನುಂಟು ಮಾಡುವ ಮೆಣಸಿನಕಾಯಿಯನ್ನು ಹಣ್ಣಾದ, ಒಣಗಿದ ಮತ್ತು ಪುಡಿ ಮಾಡಿದ ರೀತಿಯಲ್ಲಿ ಬಳಸಬಹುದು.

ವಾತಹರ, ಅಗ್ನಿಮಾನ್ಯ ಹೊಟ್ಟೆಯುಬ್ಬರ, ಗಂಟಲು ಕೆರೆತಕ್ಕೆ ಇದು ಗುಣಕಾರಿ, ಇತ್ತೀಚಿಗೆ ಕ್ಯಾನ್ಸರ್‌ ಸಂಶೋಧನ ಕೇಂದ್ರವು ಮೆಣಸಿನಕಾಯಿ ಕ್ಯಾನ್ಸರ್‌ ಗುಣಪಡಿಸುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದೆ.

 ಕೊತ್ತಂಬರಿ

ಎಲ್ಲರ ಮನೆಯ ಅಂಗಳದಲ್ಲಿ ಬೆಳೆಯುವ ಕೊತ್ತಂಬರಿ ಎಲ್ಲರಿಗೂ ಪ್ರಿಯವಾದ ಲಾಭದಾಯಕ ಸಾಂಬಾರ ಸೊಪ್ಪು, ಅಡಿಗೆ ಮಾತ್ರವಲ್ಲದೆ ಔಷಧ ಪ್ರಪಂಚದಲ್ಲಿ ಅಜೀರ್ಣವಾದಾಗ, ಜಠರದಲ್ಲಿ ವಾಯು ಸೇರಿದಾಗ, ವಾಂತಿಯಾಗುವಾಗ ಮತ್ತು ಮತ್ತಿತರ ಹೊಟ್ಟೆಯ ತೊಂದರೆಯಾದಾಗ ಸೇವಿಸುತ್ತಾರೆ.

 ಮೆಂತ್ಯ

ಎಲ್ಲರ ಮನೆಯ ಹಿತ್ತಲಲ್ಲಿ ಬೆಳೆಯುವ ಮತ್ತು ತಂಪೆರಯುವ ಸಾಂಬಾರ ಮೆಂತ್ಯದಿಂದಾಗುವ ಪ್ರಯೋಜನಗಳು ಅಪಾರ. ಈಜಿಪ್ಟ್ ದೇಶದವರು ಜ್ವರದ ತಾಪವನ್ನು ಕಡಿಮೆ ಮಾಡಲು ಉಪಯೋಗಿಸುತ್ತಿದ್ದರು. ಇದು ಪಚನ ಕ್ರಿಯೆಯನ್ನು ಸುಲಭಗೊಳಿಸುವುದಲ್ಲದೆ ಉತ್ತೇಜನ ಕ್ರಿಯೆಯನ್ನು ಪರಿವರ್ತನೆಗೊಳಿಸುವುದು. ಮೆಂತ್ಯ ಬೀಜಗಳು ಭೇದಿ, ಕೆಮ್ಮು, ಬೆಳೆದ ಪಿತ್ತ ಜನಕಾಂಗ, ಜಠರ ಪ್ಲೀಹ, ಮೂಳೆ ರೋಗ, ಮಧುಮೇಹ, ಆಮಶಂಕೆ, ಅಜೀರ್ಣವ್ಯಾದಿ ಇನ್ನು ಮುಂತಾದ ರೋಗಗಳಿಗೆ ಸೂಕ್ತ ಪರಿಹಾರ ನೀಡುತ್ತದೆ.

 ಜೀರಿಗೆ

ಪ್ರಧಾನ ಸಂಬಾರ ಪದಾರ್ಥಗಳಲ್ಲಿ  ಚಮತ್ಕಾರಿ ಸಂಬಾರ ಪದಾರ್ಥ ಜೀರಿಗೆ.  ಜೀರಿಗೆಯ ತೈಲವನ್ನು ಸುಗಂಧದ ದ್ರವ್ಯಗಳಲ್ಲಿ ಮತ್ತು ಮಾದಕ ಪಾನೀಯಗಳಲ್ಲಿ ಬಲವರ್ಧಕ ದ್ರವ್ಯಗಳಲ್ಲಿ ಉಪಯೋಗಿಸುತ್ತಾರೆ. ಜೀರಿಗೆಯ ಕಾಳುಗಳು ಜಟರೋತ್ತೇಜಕ, ಮೂತ್ರಸ್ರಾವ ಉತ್ತೇಜಕ, ವಾತಹರ ಉತ್ತೇಜಕ, ಅಜೀರ್ಣ ವ್ಯಾಧಿ, ರಕ್ತವನ್ನು ಹೆಪ್ಪು ಕಟ್ಟಿಸುವ ಗುಣಗಳಿಗೆ ಪ್ರತಿಬಂಧಕವಾಗಿ ಕೆಲಸ ಮಾಡಲು ಉಪಯೋಗಿಸುತ್ತಾರೆ. ಪಶು ವೈದ್ಯಕೀಯ ಔಷಧಗಳಲ್ಲೂ ಸಹ ಇದನ್ನು ಬಹಳವಾಗಿ ಉಪಯೋಗಿಸುತ್ತಾರೆ.

 ಕೇಸರಿ

ವಿಶ್ವದಲ್ಲಿ ಅತ್ಯಂತ ಬೆಳೆಬಾಳುವ ಕಾಶ್ಮೀರದ ರಾಜ ಸಾಂಬಾರು ಕುಸುಮ ಕೇಸರಿ. ಸುಗಂಧ ಸೂಸುವ ಕಟುವಾದ ಸ್ವಾದ ಹೊಂದಿದ ಪ್ರಶಂಸನೀಯ ಸಂಬಾರು ಪದಾರ್ಥ. ಇದನ್ನು ಅನೇಕ ರೋಗಗಳ ನಿವಾರಣೆಗಾಗಿ ಉಪಯೋಗಿಸುತ್ತಾರೆ. ಗರ್ಭಿಣಿಯರಿಗೆ ಇದನ್ನು ಔಷಧ ಪತ್ಯವಾಗಿ ಕೊಡುತ್ತಾರೆ. ಮೂತ್ರ ವಿಸರ್ಜನೆಯ ತೊಂದರೆ, ಮಧುಮೇಹ ರೋಗ, ಜ್ವರ, ಮನೋರೋಗ ಪರಿಹಾರ ಮತ್ತು ಮಕ್ಕಳಿಗೆ ಶೀತ ಶಮನಕ್ಕಾಗಿ ಬಳಸುತ್ತಾರೆ. ನಿತ್ಯವೂ ಬಿಸಿ ಹಾಲಿಗೆ ಒಂದೆರಡು ಕೇಸರಿ ಎಳೆಗಳನ್ನು ಹಾಕಿ ಕುಡಿದರೆ ಉತ್ತಮ ಆರೋಗ್ಯ ದೊರಕುತ್ತದೆ.

ಇಷ್ಟೇ ಅಲ್ಲದೆ ಕರಿಬೇವು, ಜಾಜಿ ಕಾಯಿ, ಜಾಪತ್ರೆ, ಸಾಸಿವೆ, ಬಡಾ ಸೋಂಪು, ಓಮ, ಬೆಳ್ಳುಳ್ಳಿ, ಈರುಳ್ಳಿ , ಆಲ್‌ ಸ್ಪೈಸ್‌, ವೆನಿಲ್ಲಾ ಮುಂತಾದ ಇತರ ಸಂಬಾರು ಪದಾರ್ಥಗಳು ಸಹ ಬಳಕೆಯಲ್ಲಿ ಇವೆ. ಅಬ್ಟಾ! ನೋಡಿದಿರಾ ಹೇಗೆ ಸಂಬಾರು ಪದಾರ್ಥಗಳು ನಮ್ಮ ಬಾಳಿನ ಅವಿಭಾಜ್ಯ ಅಂಗವಾಗಿ ಬೆರೆತಿದೆ. ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿ ಮತ್ತು ಆರೋಗ್ಯವನ್ನು ಅಭಿವೃದ್ಧಿ ಪಡಿಸಿ ಕಾಪಾಡಿಕೊಳ್ಳಿ.

-ನಂದಾ ಸುರೇಂದ್ರ,

ನ್ಯೂಯಾರ್ಕ್‌

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.