Ayodhya ರಾಮಮಂದಿರ ಲೋಕಾರ್ಪಣೆ: ಮನೆ ಮನೆಗೆ ಮಂತ್ರಾಕ್ಷತೆ

ಜ. 22: ಧಾರ್ಮಿಕ ಕೇಂದ್ರಗಳಲ್ಲಿ ನೇರಪ್ರಸಾರ

Team Udayavani, Dec 20, 2023, 11:47 PM IST

Ayodhya ರಾಮಮಂದಿರ ಲೋಕಾರ್ಪಣೆ: ಮನೆ ಮನೆಗೆ ಮಂತ್ರಾಕ್ಷತೆ

ಮಂಗಳೂರು: ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ, ಶ್ರೀರಾಮ ಲಲ್ಲಾನ ವಿಗ್ರಹ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆಯನ್ನು ಮನೆಮನೆಗೆ ವಿತರಿಸುವ ಮನೆ ಮನೆ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜನವರಿ 22ರ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ಸುಮುಹೂರ್ತದಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ನಡೆಯಲಿದೆ. ಇದನ್ನು ಪ್ರತೀ ರಾಮಭಕ್ತರು ತಮ್ಮತಮ್ಮ ಊರು, ಮನೆಗಳಲ್ಲಿ ಸಂಭ್ರಮದಿಂದ ಆಚರಿ ಸುವಂತಾಗಲು ಈ ಅಭಿಯಾನ ನಡೆಯಲಿದೆ. ಅಯೋಧ್ಯೆಯಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ನೇರಪ್ರಸಾರ ಮೂಲಕ ತೋರಿಸಲು ವ್ಯವಸ್ಥೆ ಮಾಡಲಾಗುತ್ತದೆ. ಜ. 1ರಿಂದ 15ರ ವರೆಗೆ ವಿಹಿಂಪ ಕಾರ್ಯಕರ್ತರು 8 ಲಕ್ಷ ಮನೆಗಳಿಗೆ ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ, ಆಮಂತ್ರಣ ಪತ್ರವನ್ನು ವಿತರಿಸಲಿದ್ದಾರೆ ಎಂದರು.

ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಮಾತನಾಡಿ, ಈಗಾಗಲೇ ಬೂತ್‌, ಗ್ರಾಮಗಳಿಗೆ ಮಂತ್ರಾಕ್ಷತೆ ತಲುಪಿದೆ. ಜ. 22ರಂದು ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆಯೊಂದಿಗೆ ಶ್ರೀರಾಮ ತಾರಕ ಮಂತ್ರ 108 ಬಾರಿ ಪಠಣ, ಹನುಮಾನ್‌ ಚಾಲೀಸಾ, ಭಜನೆ, ಸುಂದರಕಾಂಡ ಪಾರಾಯಣ, ರಾಮರûಾ ಸ್ತೋತ್ರ ಪಠಣ ಇತ್ಯಾದಿ ನಡೆಸಲು ತಿಳಿಸಲಾಗಿದೆ. ಸಾವಿರಾರು ಧಾರ್ಮಿಕ ಕ್ಷೇತ್ರಗಳಲ್ಲಿ ಇದಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಮತ್ತೆ ದೀಪಾವಳಿ
ಶ್ರೀರಾಮಲಲ್ಲಾನ ವಿಗ್ರಹ ಪ್ರತಿಷ್ಠೆಯ ದಿನ ಸೂರ್ಯಾಸ್ತದ ಬಳಿಕ ಎಲ್ಲ ಮನೆಗಳಲ್ಲಿ ಕನಿಷ್ಠ ಐದು ದೀಪ ಬೆಳಗಬೇಕು, ಮನೆಯವರೆಲ್ಲರೂ ಸೇರಿ ಅಯೋಧ್ಯೆ ಮಂದಿರ ಇರುವ ಉತ್ತರ ದಿಕ್ಕಿಗೆ ಮುಖ ಮಾಡಿ ಮಹಾ ಮಂಗಳಾರತಿ ಬೆಳಗಬೇಕು. ಆ ದಿನ ಸಮಸ್ತ ಹಿಂದೂಗಳಿಗೆ ದೀಪಾವಳಿಯಾಗಲಿದೆ. ಜ. 7ರಂದು ವಿಶೇಷ ಮಹಾಸಂಪರ್ಕ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ ಎಂದರು.

ಸೀಮಿತ ಅವಕಾಶ
ಸ್ಥಳಾವಕಾಶ, ಭದ್ರತೆ ಇತ್ಯಾದಿ ಕಾರಣಗಳಿಂದಾಗಿ ಪ್ರತಿಷ್ಠೆಯ ದಿನ ಸೀಮಿತ ಮಂದಿಗೆ ಮಾತ್ರವೇ ಅಯೋಧ್ಯೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ. ರಾಜ್ಯದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಉಡುಪಿಯ ಅಷ್ಟಮಠಾಧಿಪತಿಗಳು, ಪ್ರೊ| ಪುರಾಣಿಕ್‌ ಸಹಿತವಾಗಿ ತೆರಳಲಿ ದ್ದಾರೆ. ಮುಂದೆ ಆಸಕ್ತರೆಲ್ಲರಿಗೂ ತೆರಳುವುದಕ್ಕೆ ಅವಕಾಶ ಸಿಗಲಿದೆ.

ವಿಹಿಂಪ ಜಿಲ್ಲಾಧ್ಯಕ್ಷ ಎಚ್‌.ಕೆ. ಪುರುಷೋತ್ತಮ, ಶ್ರೀರಾಮ ಮಂದಿರ ಅಭಿಯಾನ ಪ್ರಾಂತ ಸಹಸೇವಾ ಪ್ರಮುಖ್‌ ಗೋಪಾಲ್‌ ಕುತ್ತಾರ್‌, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್‌, ಬಜರಂಗದಳ ವಿಭಾಗ ಸಹ ಸಂಯೋಜಕ ಪುನೀತ್‌ ಅತ್ತಾವರ ಉಪಸ್ಥಿತರಿದ್ದರು.

 

ಟಾಪ್ ನ್ಯೂಸ್

America Election: ಯಾರಿಗೆ ಬೆಂಬಲ- 2 ಲಕ್ಷ ಚಂದಾದಾರರನ್ನು ಕಳೆದುಕೊಂಡ Washington Post

America Election: ಯಾರಿಗೆ ಬೆಂಬಲ- 2 ಲಕ್ಷ ಚಂದಾದಾರರನ್ನು ಕಳೆದುಕೊಂಡ Washington Post

INDvsNZ: ಪ್ರಮುಖ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ; 3ನೇ ಪಂದ್ಯಕ್ಕೆ ಟೀಂ ಇಂಡಿಯಾಗೆ ಹೊಸ ವೇಗಿ

INDvsNZ: ಪ್ರಮುಖ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ; 3ನೇ ಪಂದ್ಯಕ್ಕೆ ಟೀಂ ಇಂಡಿಯಾಗೆ ಹೊಸ ವೇಗಿ

ಇಬ್ಬರು ಪತ್ನಿಯರಿದ್ದರೂ ರಹಸ್ಯವಾಗಿ ಮನೆ ಕೆಲಸದಾಕೆಯನ್ನು ಮದುವೆಯಾದ್ರಾ ಖ್ಯಾತ ಯೂಟ್ಯೂಬರ್?

ಇಬ್ಬರು ಪತ್ನಿಯರಿದ್ದರೂ ರಹಸ್ಯವಾಗಿ ಮನೆ ಕೆಲಸದಾಕೆಯನ್ನು ಮದುವೆಯಾದ್ರಾ ಖ್ಯಾತ ಯೂಟ್ಯೂಬರ್?

Gaziyabad1

Ghaziabad: ನ್ಯಾಯಾಲಯದಲ್ಲಿ ನ್ಯಾಯಾಧೀಶರ ಜತೆ ವಕೀಲರ ಘರ್ಷಣೆ… ಪೊಲೀಸರಿಂದ ಲಾಠಿ ಚಾರ್ಜ್

Renukaswamy Case: ದರ್ಶನ್‌ ವಿಚಾರಣೆ ಅಂತ್ಯ; ಬುಧವಾರ ಜಾಮೀನು ಭವಿಷ್ಯ ನಿರ್ಧಾರ

Renukaswamy Case: ದರ್ಶನ್‌ ವಿಚಾರಣೆ ಅಂತ್ಯ; ಬುಧವಾರ ಜಾಮೀನು ಭವಿಷ್ಯ ನಿರ್ಧಾರ

5

Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್

2-bantwala

Bantwala: ಉಸಿರಾಟದ ತೊಂದರೆಯಿಂದ ಹಿರಿಯ ಕಾರು ಚಾಲಕ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Urwa: ಫುಟ್‌ಪಾತ್‌ನಲ್ಲಿ ಬಾಯ್ದೆರೆದಿದೆ ಚೇಂಬರ್‌!

6

Bandaru: ದಕ್ಕೆಯ 1,2ನೇ ಮೀನುಗಾರಿಕೆ ಜೆಟ್ಟಿಗಳು ಶೀಘ್ರ ಮೇಲ್ದರ್ಜೆಗೆ

3(1)

Bajpe: 3 ಅಸೆಂಬ್ಲಿ ಕ್ಷೇತ್ರಗಳಿಗೆ ಇನ್ನು ಫ‌ಲ್ಗುಣಿಯೇ ಜೀವನದಿ!

2(1)

Mangaluru: ಪ್ಲಾಸ್ಟಿಕ್‌ಗಿದೆ ಪರ್ಯಾಯ, ಮನಸು ಬೇಕಷ್ಟೆ!

arrested

Mangaluru; ರೈಲಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ : ಅಪರಾಧಿಗೆ 20 ವರ್ಷ ಜೈಲು

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

America Election: ಯಾರಿಗೆ ಬೆಂಬಲ- 2 ಲಕ್ಷ ಚಂದಾದಾರರನ್ನು ಕಳೆದುಕೊಂಡ Washington Post

America Election: ಯಾರಿಗೆ ಬೆಂಬಲ- 2 ಲಕ್ಷ ಚಂದಾದಾರರನ್ನು ಕಳೆದುಕೊಂಡ Washington Post

INDvsNZ: ಪ್ರಮುಖ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ; 3ನೇ ಪಂದ್ಯಕ್ಕೆ ಟೀಂ ಇಂಡಿಯಾಗೆ ಹೊಸ ವೇಗಿ

INDvsNZ: ಪ್ರಮುಖ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ; 3ನೇ ಪಂದ್ಯಕ್ಕೆ ಟೀಂ ಇಂಡಿಯಾಗೆ ಹೊಸ ವೇಗಿ

10

Sagara: ಒಂಬತ್ತನೇ ದಿನಕ್ಕೆ ಕಾಲಿರಿಸಿದ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

ಇಬ್ಬರು ಪತ್ನಿಯರಿದ್ದರೂ ರಹಸ್ಯವಾಗಿ ಮನೆ ಕೆಲಸದಾಕೆಯನ್ನು ಮದುವೆಯಾದ್ರಾ ಖ್ಯಾತ ಯೂಟ್ಯೂಬರ್?

ಇಬ್ಬರು ಪತ್ನಿಯರಿದ್ದರೂ ರಹಸ್ಯವಾಗಿ ಮನೆ ಕೆಲಸದಾಕೆಯನ್ನು ಮದುವೆಯಾದ್ರಾ ಖ್ಯಾತ ಯೂಟ್ಯೂಬರ್?

9

Sagara: ಕರ್ತವ್ಯ ಮಾಡಲು ಇಷ್ಟ ಇಲ್ಲ ಎಂದರೆ ಬೇರೆಡೆ ಹೋಗಿ; ಶಾಸಕ ಗೋಪಾಲಕೃಷ್ಣ ಬೇಳೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.