Cricket: ಮಾನಸಿಕ ಸವಾಲು ಗೆದ್ದ ಸ್ಟಂಪರ್ ಸಂಜು ಸ್ಯಾಮ್ಸನ್
Team Udayavani, Dec 23, 2023, 12:02 AM IST
ಪಾರ್ಲ್: ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್ ಮೇಲೆ ಸದಾ ದೊಡ್ಡದೊಂದು ಅಪವಾದ ಇರುತ್ತಿತ್ತು. ಇವರು ಲಭಿಸಿದ ಅವಕಾಶವನ್ನು ಉಪಯೋಗಿಸಿಕೊಳ್ಳುವುದಿಲ್ಲ, ಸುಲಭದಲ್ಲಿ ವಿಕೆಟ್ ಕೈಚೆಲ್ಲುತ್ತಾರೆ, ಅಗ್ಗಕ್ಕೆ ಔಟಾಗುತ್ತಾರೆ… ಹೀಗೆ. ಈ ಕಾರಣಕ್ಕಾಗಿ ವಿಶ್ವಕಪ್ ತಂಡದಲ್ಲೂ ಇವರಿಗೆ ಸ್ಥಾನ ತಪ್ಪಿತ್ತು. ಆದರೆ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾಗುವುದರೊಂದಿಗೆ ಅಜ್ಞಾತವಾಸದಿಂದ ಮುಕ್ತರಾದರು. ಇದೀಗ ನಿರ್ಣಾಯಕ ಏಕದಿನದಲ್ಲಿ ಸೆಂಚುರಿ ಬಾರಿಸಿ ಭಾರತದ ಸರಣಿ ಗೆಲುವಿನ ಹೀರೋ ಆಗಿ ಮೂಡಿಬಂದಿದ್ದಾರೆ.
ಈ ಸಂದರ್ಭದಲ್ಲಿ ಮಾತಾಡಿದ ಸಂಜು ಸ್ಯಾಮ್ಸನ್, “ಕಳೆದ 3-4 ತಿಂಗಳು ನನ್ನ ಪಾಲಿಗೆ ದೊಡ್ಡ ಮಾನಸಿಕ ಸವಾಲಾಗಿ ಪರಿಣಮಿಸಿತ್ತು. ಈ ಒತ್ತಡವನ್ನೆಲ್ಲ ನಿಭಾಯಿಸಿ ಈ ಪ್ರವಾಸಕ್ಕೆ ಅಣಿಯಾದೆ. ಈಗ ನಿರಾಳನಾಗಿದ್ದೇನೆ, ಮಾನಸಿಕ ಸವಾಲು ಗೆದ್ದಿದ್ದೇನೆ. ಬಹಳ ಸಂತೋಷವಾಗಿದೆ’ ಎಂಬುದಾಗಿ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ ಸಂಜು ಸ್ಯಾಮ್ಸನ್ ಹೇಳಿದರು.
ಸಂಜು ಅವರ 108 ರನ್ ಸಾಹಸದಿಂದ ಪಾರ್ಲ್ ಪಂದ್ಯದಲ್ಲಿ ಭಾರತ 8 ವಿಕೆಟಿಗೆ 296 ರನ್ ಬಾರಿಸಿತು. ಜವಾಬಿತ್ತ ದಕ್ಷಿಣ ಆಫ್ರಿಕಾ 45.5 ಓವರ್ಗಳಲ್ಲಿ 218ಕ್ಕೆ ಕುಸಿಯಿತು. ಭಾರತ 2-1 ಅಂತರದಿಂದ ಸರಣಿ ಜಯಿಸಿತು. ಸಂಜು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
“ನನ್ನ ಜೀನ್ಸ್ನಲ್ಲೇ ಕ್ರೀಡೆ ಇದೆ. ತಂದೆ ಕೂಡ ಕ್ರೀಡಾಪಟು. ಎಷ್ಟೇ ಹಿನ್ನಡೆಯಾದರೂ “ಬೌನ್ಸ್ ಬ್ಯಾಕ್’ ಒಂದೇ ನಮ್ಮ ಮುಂದಿರುವ ಹಾದಿ’ ಎಂಬುದಾಗಿ ಹೇಳಿದರು.
“ನಾನು ಸ್ಕೋರ್ಬೋರ್ಡ್ ಕಡೆ ನೋಡಲೇ ಇಲ್ಲ. ಮೊದಲು ಇನ್ನಿಂಗ್ಸ್ ಬೆಳೆಸಬೇಕಿತ್ತು. ತಿಲಕ್ ಜತೆಗೂಡಿದ ಬಳಿಕ ಬ್ಯಾಟಿಂಗ್ ಸರಾಗವಾಗಿ ಸಾಗಿತು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Womens T20 World Cup: ಪಾಕ್ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ
INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್ ಯಾರು?
T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 57: ದುರ್ಯೋಧನನಲ್ಲಿ ಮಾನಸಿಕ ಸ್ಥೈರ್ಯ ಕುಸಿತ
Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ
BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!
By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್.ಡಿ.ಕುಮಾರಸ್ವಾಮಿ
Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್ಆರ್!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.