Kannada; ಕನ್ನಡಿಗರ ಸಹನೆ ಪರೀಕ್ಷಿಸುವ ದುಸ್ಸಾಹಸಕ್ಕೆ ಅವಕಾಶ ನೀಡದಿರಿ


Team Udayavani, Dec 28, 2023, 5:30 AM IST

1-vsddfsf

ರಾಜ್ಯದಲ್ಲಿ ಮತ್ತೆ ಕನ್ನಡ ಉಳಿಸಿ ಅಭಿಯಾನ ಆರಂಭಗೊಂಡಿದೆ. ಬುಧವಾರ ರಾಜ್ಯ ರಾಜಧಾನಿಯಲ್ಲಿ ಕನ್ನಡ ರಕ್ಷಣ ವೇದಿಕೆಯ ಹೋರಾಟಗಾರರು ಬೀದಿಗಿಳಿದು ವಿವಿಧ ಮಳಿಗೆ, ಅಂಗಡಿಗಳಲ್ಲಿನ ಕನ್ನಡೇತರ ಭಾಷೆಯ ನಾಮ ಫ‌ಲಕ­ಗಳನ್ನು ತೆರವುಗೊಳಿಸುವ ಅಭಿಯಾನ­ವನ್ನು ಹಮ್ಮಿಕೊಳ್ಳುವ ಮೂಲಕ ಮತ್ತೆ ಕನ್ನಡದ ಪರ ಹೋರಾಟದ ಕಹಳೆ ಊದಿದ್ದಾರೆ. ಬೆಳಗಾವಿ, ದಾವಣ­ಗೆರೆ, ಚಿತ್ರದುರ್ಗ, ಹುಬ್ಬಳ್ಳಿ ಸಹಿತ ರಾಜ್ಯದ ಹಲವೆಡೆಯೂ ರಕ್ಷಣ ವೇದಿಕೆ ಕಾರ್ಯ ಕರ್ತರು ಇದೇ ತೆರನಾದ ಪ್ರತಿಭಟನೆ ನಡೆಸಿ, ಕನ್ನಡೇತರ ಭಾಷೆಗಳಲ್ಲಿ ನಾಮಫ‌ಲಕಗಳನ್ನು ಅಳವಡಿಸಿರುವ ವಾಣಿಜ್ಯ ಮಳಿಗೆಗಳು ಮತ್ತು ಅಂಗಡಿಗಳ ಮಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ನಾಡಭಾಷೆಯಾದ ಕನ್ನಡವನ್ನು ಆಡಳಿತದಲ್ಲಿ ಕಡ್ಡಾಯಗೊಳಿಸಿ ಸರಕಾರ ಆದೇಶ ಹೊರಡಿಸಿ ದಶಕಗಳೇ ಕಳೆದಿವೆ. ಅಷ್ಟು ಮಾತ್ರವಲ್ಲದೆ ರಾಜ್ಯದ ಎಲ್ಲ ಸರಕಾರಿ ಕಚೇರಿಗಳು, ಸಂಘ, ಸಂಸ್ಥೆಗಳು, ಉದ್ಯಮಗಳು, ವಾಣಿಜ್ಯ ಮಳಿಗೆಗಳ ನಾಮಫ‌ಲಕಗಳು ಕನ್ನಡದಲ್ಲಿಯೇ ಇರಬೇಕು ಎಂಬ ಆದೇಶವೂ ಜಾರಿಯಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ನಗರಾಡಳಿತ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಕಾಲಕಾಲಕ್ಕೆ ಸೂಚನೆಗಳನ್ನು ನೀಡುತ್ತಲೇ ಬರುತ್ತಿವೆ. ಇಷ್ಟಾದರೂ ರಾಜ್ಯದೆಲ್ಲೆಡೆ ನಾಮಫ‌ಲಕಗಳು, ಜಾಹೀರಾತು ಫ‌ಲಕಗಳಲ್ಲಿ ಇಂಗ್ಲಿಷ್‌, ಹಿಂದಿ ಸಹಿತ ವಿವಿಧ ಪರಭಾಷೆಗಳನ್ನು ಬಳಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದವರ ಮಾಲಕತ್ವದ ಮಳಿಗೆಗಳ ನಾಮಫ‌ಲಕಗಳಲ್ಲಿ ಹೆಚ್ಚಾಗಿ ಇಂಗ್ಲಿಷ್‌, ಹಿಂದಿ ಭಾಷೆಗಳನ್ನೇ ಬಳಸುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಹಲವು ವರ್ಷಗಳಿಂದ ಸರಕಾರ ಮತ್ತು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡುತ್ತಲೇ ಬಂದಿದ್ದರೂ ಇದನ್ನು ನಿರ್ಲಕ್ಷಿಸಲಾಗುತ್ತಿದೆ. ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಥವಾ ವ್ಯಾಪಾರ ನಡೆಸುತ್ತಿರುವ ಹೊರ ರಾಜ್ಯದವರ ಈ ಧೋರಣೆ ನಿಜವಾಗಿಯೂ ಖಂಡನೀಯ. ಹಾಗೆಂದು ನಾಮಫ‌ಲಕದಲ್ಲಿ ಬೇರೆ ಭಾಷೆಗಳನ್ನು ಬಳಸಬೇಡಿ ಎಂದು ಸರಕಾರವಾಗಲೀ, ಕನ್ನಡ ಪರ ಸಂಘಟನೆಗಳಾಗಲೀ ಬಲವಂತ ಮಾಡಿಲ್ಲ. ಆದರೆ ನಾಮಫ‌ಲಕ, ಜಾಹೀರಾತು ಫ‌ಲಕ ಸಹಿತ ವಿವಿಧ ಫ‌ಲಕಗಳಲ್ಲಿ ಶೇ.60ರಷ್ಟು ಭಾಗದಲ್ಲಿ ಕನ್ನಡವನ್ನೇ ಆದ್ಯತೆಯ ಮೇಲೆ ಬಳಸುವಂತೆ ಸೂಚಿಸಲಾಗಿದೆ. ಇಷ್ಟಿದ್ದರೂ ಕೂಡ ಹೊರ ರಾಜ್ಯಗಳ ವ್ಯಾಪಾರಸ್ಥರು ಮತ್ತು ಮಳಿಗೆಗಳ ಮಾಲಕರು ಸರಕಾರದ ಆದೇಶವನ್ನು ಸಂಪೂರ್ಣವಾಗಿ ಅಲಕ್ಷಿಸುತ್ತಲೇ ಬಂದಿರುವುದು ಸಹಜವಾಗಿ ಕನ್ನಡಾಭಿಮಾನಿಗಳನ್ನು ಕೆರಳಿಸಿದೆ.
ನಿರಂತರ ಎಚ್ಚರಿಕೆಯ ಬಳಿಕ ಕನ್ನಡ ಪರ ಹೋರಾಟಗಾರರು ಹೊರ ರಾಜ್ಯದ ವ್ಯಾಪಾರಸ್ಥರು ಮತ್ತು ಮಳಿಗೆಗಳ ಮಾಲಕರಿಗೆ ಒಂದಿಷ್ಟು ಜೋರಾಗಿಯೇ ಬಿಸಿ ಮುಟ್ಟಿಸಿದ್ದಾರೆ. ಕೆಲವೆಡೆ ಕನ್ನಡ ಪರ ಹೋರಾಟಗಾರರ ವರ್ತನೆ ಅತಿರೇಕಕ್ಕೆ ತಲುಪಿದ್ದೂ ಸಹ್ಯವಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದೂ ಅಕ್ಷಮ್ಯ. ಯಾವುದೇ ಹೋರಾಟದ ಹೆಸರಲ್ಲಿ ಅಮಾಯಕರಿಗೆ ತೊಂದರೆಯಾಗುವುದನ್ನು ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗೆ ಧಕ್ಕೆಯಾಗುವುದನ್ನು ಸಹಿಸಲು ಅಸಾಧ್ಯ. ಸ್ಥಿತಿ ಪ್ರಕೋಪಕ್ಕೆ ಹೋಗದಂತೆ ನೋಡಿಕೊಳ್ಳಬೇಕಿರುವುದು ಸರಕಾರದ ಹೊಣೆ.

ಇನ್ನು ಸರಕಾರ ಮತ್ತು ನಗರಾಡಳಿತ ಸಂಸ್ಥೆಗಳು ಕೂಡ ನಾಮಫ‌ಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯವನ್ನು ಕೇವಲ ಆದೇಶಕ್ಕಷ್ಟೇ ಸೀಮಿತಗೊಳಿಸದೆ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಬೇಕು. ಈ ವಿಚಾರದಲ್ಲಿ ಯಾವುದೇ ಮರ್ಜಿಗೆ ಒಳಗಾಗದೆ ಆದೇಶವನ್ನು ಪಾಲಿಸದವರಿಗೆ ಭಾರೀ ಪ್ರಮಾಣದ ದಂಡ ಅಥವಾ ಕ್ರಮಗಳನ್ನು ಕೈಗೊಳ್ಳಬೇಕು. ಕನ್ನಡಾಭಿಮಾನಿಗಳ ತಾಳ್ಮೆಯ ಕಟ್ಟೆ ಒಡೆ ಯುವವರೆಗೆ ಕಾಯದೆ ಸರಕಾರ ಈ ದಿಸೆಯಲ್ಲಿ ತುರ್ತಾಗಿ ಕಾರ್ಯೋ ನ್ಮುಖವಾಗಬೇಕು.

ಟಾಪ್ ನ್ಯೂಸ್

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ

Udupi: ವ್ಯಾಪಕ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ.. ವಿದ್ಯಾರ್ಥಿಗಳು ಸೇರಿ ಸ್ಥಳೀಯರ ರಕ್ಷಣೆ

Udupi: ಭಾರಿ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ… ವಿದ್ಯಾರ್ಥಿಗಳ ರಕ್ಷಣೆ

10

ಸಾಕುನಾಯಿ ಹುಟ್ಟುಹಬ್ಬಕ್ಕೆ 2.5 ಲಕ್ಷ ರೂ. ಮೌಲ್ಯದ ಗೋಲ್ಡ್‌ ಚೈನ್‌ ಗಿಫ್ಟ್‌ ಕೊಟ್ಟ ಮಹಿಳೆ

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

Team India: How much money is given to whom by BCCI in ₹125 crore?

Team India: ಅಗರ್ಕರ್ ಗೆ 1 ಕೋಟಿ!; ಬಿಸಿಸಿಐ ನೀಡಿದ ₹125 ಕೋಟಿಯಲ್ಲಿ ಯಾರಿಗೆ ಎಷ್ಟು ಹಣ?

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Nandini Milk: ನಂದಿನಿ ಹಾಲು, ಮೊಸರಿನ ಜತೆ ಶೀಘ್ರ ದೋಸೆ ಹಿಟ್ಟು 

Nandini Milk: ನಂದಿನಿ ಹಾಲು, ಮೊಸರಿನ ಜತೆ ಶೀಘ್ರ ದೋಸೆ ಹಿಟ್ಟು 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Editorial: ಕೇರಳದಲ್ಲಿ ಅಮೀಬಾ ಸೋಂಕು- ರಾಜ್ಯದಲ್ಲೂ ಮುಂಜಾಗ್ರತೆ ಅಗತ್ಯ

Editorial: ಕೇರಳದಲ್ಲಿ ಅಮೀಬಾ ಸೋಂಕು- ರಾಜ್ಯದಲ್ಲೂ ಮುಂಜಾಗ್ರತೆ ಅಗತ್ಯ

Vidhana-Soudha

State Government ವ್ಯಾಜ್ಯಮುಕ್ತ ಗ್ರಾಮ: ಸರಕಾರದ ವಿನೂತನ ಚಿಂತನೆ

Dengue

Dengue ಹಾವಳಿ: ಚಿಕಿತ್ಸೆ ಜತೆಗೆ ಮುನ್ನೆಚ್ಚರಿಕೆ ಅಗತ್ಯ

ಸಮಾವೇಶಗಳ ಆಯೋಜನೆ: ರಾಷ್ಟ್ರೀಯ ಮಾರ್ಗಸೂಚಿ ಅಗತ್ಯ

ಸಮಾವೇಶಗಳ ಆಯೋಜನೆ: ರಾಷ್ಟ್ರೀಯ ಮಾರ್ಗಸೂಚಿ ಅಗತ್ಯ

job for kannadigas

Editorial; ಕನ್ನಡಿಗರಿಗೆ ಉದ್ಯೋಗ: ಸರಕಾರ ಗಮನಹರಿಸಲಿ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ

Udupi: ವ್ಯಾಪಕ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ.. ವಿದ್ಯಾರ್ಥಿಗಳು ಸೇರಿ ಸ್ಥಳೀಯರ ರಕ್ಷಣೆ

Udupi: ಭಾರಿ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ… ವಿದ್ಯಾರ್ಥಿಗಳ ರಕ್ಷಣೆ

10

ಸಾಕುನಾಯಿ ಹುಟ್ಟುಹಬ್ಬಕ್ಕೆ 2.5 ಲಕ್ಷ ರೂ. ಮೌಲ್ಯದ ಗೋಲ್ಡ್‌ ಚೈನ್‌ ಗಿಫ್ಟ್‌ ಕೊಟ್ಟ ಮಹಿಳೆ

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

Team India: How much money is given to whom by BCCI in ₹125 crore?

Team India: ಅಗರ್ಕರ್ ಗೆ 1 ಕೋಟಿ!; ಬಿಸಿಸಿಐ ನೀಡಿದ ₹125 ಕೋಟಿಯಲ್ಲಿ ಯಾರಿಗೆ ಎಷ್ಟು ಹಣ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.