Joyalukkas ಹರಿಹರಸುಧನ್ಗೆ ಬಂಪರ್ ಬಹುಮಾನ 1 ಕೆಜಿ ಚಿನ್ನ
ಜುವೆಲರಿ ಫೆಸ್ಟಿವಲ್'ನ 2ನೇ ಆವೃತ್ತಿ
Team Udayavani, Dec 30, 2023, 5:59 AM IST
ಮಂಗಳೂರು: ಜುವೆಲರಿ ಅಸೋಸಿಯೇಶನ್ ಬೆಂಗಳೂರು ವತಿಯಿಂದ ಅ. 15ರಿಂದ ನ. 30 ವರೆಗೆ ನಡೆದ ಜುವೆಲರಿ ಫೆಸ್ಟಿವಲ್’ನ 2ನೇ ಆವೃತ್ತಿಯಲ್ಲಿ ಒಂದು ಕೆಜಿ ಚಿನ್ನದ ಬಂಪರ್ ಬಹುಮಾನವು ಜೋಯಾಲುಕ್ಕಾಸ್ ಗ್ರಾಹಕ ಹರಿಹರಸುಧನ್ ಅವರ ಕೈಸೇರಿತು.
ಎಂ.ಜಿ. ರಸ್ತೆಯಲ್ಲಿನ ಜೋಯಾಲುಕ್ಕಾಸ್ ಮಳಿಗೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಜುವೆಲರಿ ಅಸೋಸಿಯೇಶನ್ ಅಧ್ಯಕ್ಷ ಡಾ| ಚೇತನ್ ಕುಮಾರ್ ಮೆಹ್ತಾ ಮಾತನಾಡಿ, ಇಡೀ ಭಾರತದಲ್ಲಿ ನಕಾಶ್ ಜುವೆಲರಿ, ಟೆಂಪಲ್, ಆ್ಯಂಟಿಕ್ ಜುವೆಲರಿ ಉತ್ಪಾದನೆ ಆಗುತ್ತಿರುವುದು ನಮ್ಮ ರಾಜ್ಯದಲ್ಲಿ. ಜೀವನದಲ್ಲಿ ಏನೇ ಕಷ್ಟ ಬಂದರೂ ನಮ್ಮ ಕೈ ಹಿಡಿಯುವುದು ಚಿನ್ನ. ಇತರ ಯಾವುದೇ ವಸ್ತುವಿನ ಮೇಲೆ ಹೂಡಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಅದರ ಬೆಲೆ ಕಡಿಮೆಯಾಗುತ್ತದೆ. ಆದರೆ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಒಂದು ವರ್ಷಕ್ಕೆ ಅದರ ಬೆಲೆ ಶೇ. 20ರಿಂದ 25ರಷ್ಟು ಹೆಚ್ಚಾಗಿರುತ್ತದೆ ಎಂದು ಹೇಳಿದರು.
ಜುವೆಲರಿ ಫೆಸ್ಟಿವಲ್ನ ವಿಜೇತರಲ್ಲಿ 72 ಮಂದಿ ಜೋಯಾಲುಕ್ಕಾಸ್ನ ಗ್ರಾಹ ಕರು ಆಗಿದ್ದಾರೆ. ಮುಂಬರುವ ವರ್ಷ ದಲ್ಲಿ ಬಂಪರ್ ಬಹುಮಾನವನ್ನು ಒಂದು ಕೆ.ಜಿ.ಯಿಂದ 2 ಕೆಜಿ ಚಿನ್ನಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಆದ್ದರಿಂದ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಈ ಹಬ್ಬದಲ್ಲಿ ಭಾಗವಹಿಸಿ ಚಿನ್ನವನ್ನು ಪಡೆಯಿರಿ ಎಂದರು.
ಬೆಂಗಳೂರು ಗೋಲ್ಡ್ ಫೆಸ್ಟಿವಲ್ ಅಧ್ಯಕ್ಷ ಡಿ.ವಿ. ರಮೇಶ್ ಮಾತನಾಡಿ, ಗೋಲ್ಡ್ ಫೆಸ್ಟಿವಲ್ ಕೇವಲ ಬಹುಮಾನ ವಿತರಣೆ ಮಾಡುವುದು ಮಾತ್ರವಲ್ಲದೇ, ಬಂಗಾರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ಆಗಿರುತ್ತದೆ. ಮುಖ್ಯ ವಾಗಿ ಯುವಜನತೆ, ಎಲೆಕ್ಟ್ರಾನಿಕ್ ವಸ್ತು ಗಳ ಮೇಲೆ ಹಣ ಹೂಡಿಕೆ ಮಾಡುವ ಬದಲು ಬಂಗಾರದ ಮೇಲೆ ಹೂಡಿಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಜುವೆಲರಿ ಅಸೋಸಿಯೇಶನ ಉಪಾಧ್ಯಕ್ಷ ಸುರೇಶ್ ಕುಮಾರ್ ಗನ್ನಾ, ಗೌರವ ಕಾರ್ಯದರ್ಶಿ ಅಶೋಕ್ ರಾಥೋಡ್, ಆರ್ಟ್ ಆಫ್ ಜುವೆಲರಿ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ವಡೇರಾ, ಜೋಯಾಲುಕ್ಕಾಸ್ನ ರೀಟೇಲ್ ಮ್ಯಾನೇಜರ್ ರಾಜೇಶ್ ಕೃಷ್ಣನ್, ಕರ್ನಾಟಕ ಸ್ಥಳೀಯ ನಿರ್ದೇಶಕ ವಿ.ಎಸ್. ಜಿನೇಶ್ ಉಪಸ್ಥಿತರಿದ್ದರು.
ಬಹುಮಾನ ವಿಜೇತರು
ಬಂಪರ್ ಬಹುಮಾನ ವಿಜೇತರು ಹರಿಹರಸುಧನ್ (1 ಕೆಜಿ ಚಿನ್ನ), ಸತೀಶ್ ಕುಮಾರ್ ರೆಡ್ಡಿ (50 ಗ್ರಾಂ ಬೆಳ್ಳಿ), ಅರುಲ್ವುಣಿ (2 ಗ್ರಾಂ ಚಿನ್ನ), ಪ್ರಿಯಾಂಕ, ಅಲ್ಲಪಲ್ಲಿ ಗುಲ್ಫಾಂ ಅರ, ದೀಪಕ್ ಡಿ. ಅವರು ತಲಾ 1 ಗ್ರಾಂ ಚಿನ್ನವನ್ನು ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ
Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್ ಆರೋಪ
Kadaba: ಕಾರು – ಬೈಕ್ ಅಪಘಾತ; ಸವಾರ ಮೃತ್ಯು
Kinnigoli ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ
illegal Sand: ತುಂಬೆ, ಮಾರಿಪಳ್ಳ: ಮರಳು ಅಡ್ಡೆಗೆ ದಾಳಿ; 20 ಬೋಟ್ಗಳ ವಶ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ
Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.