![Mangaluru: ರಾಹುಲ್ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್](https://www.udayavani.com/wp-content/uploads/2024/07/padmaraj-415x291.jpg)
Ranji; ಮುಂಬಯಿ ತಂಡಕ್ಕೆ ಅಜಿಂಕ್ಯ ರಹಾನೆ ನಾಯಕ
Team Udayavani, Jan 1, 2024, 11:32 PM IST
![1-sadasdsad](https://www.udayavani.com/wp-content/uploads/2024/01/1-sadasdsad-620x310.jpg)
ಮುಂಬಯಿ: ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಅವರನ್ನು ಮುಂಬಯಿ ರಣಜಿ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ನೂತನ ಋತುವಿನ ಮೊದಲೆರಡು ಪಂದ್ಯಗಳಿಗೆ ಈ ಆಯ್ಕೆ ಮಾಡಲಾಗಿದೆ.
ಮುಂಬಯಿ ತಂಡ ಈ ಪಂದ್ಯಗಳನ್ನು ಬಿಹಾರ ಮತ್ತು ಆಂಧ್ರಪ್ರದೇಶ ವಿರುದ್ಧ ಆಡಲಿದೆ. ಬಿಹಾರ ವಿರುದ್ಧ ಜ. 5ರಂದು, ಆಂಧ್ರ ವಿರುದ್ಧ ಜ. 12ರಂದು ಪಂದ್ಯ ಆರಂಭವಾಗಲಿದೆ.
ಟೀಮ್ ಇಂಡಿಯಾದಲ್ಲಿರುವ ಕಾರಣ ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ಮುಂಬಯಿ ತಂಡಕ್ಕೆ ಆಯ್ಕೆಯಾಗಿಲ್ಲ. ಆರಂಭಕಾರ ಪೃಥ್ವಿ ಶಾ ಅವರನ್ನು ಕೈಬಿಡಲಾಗಿದೆ.
ಮುಂಬಯಿ ತಂಡ: ಅಜಿಂಕ್ಯ ರಹಾನೆ (ನಾಯಕ), ಜಾಯ್ ಬಿಸ್ಟಾ, ಭೂಪೆನ್ ಲಾಲ್ವಾನಿ, ಹಾರ್ದಿಕ್ ತಮೋರೆ, ಸರ್ಫರಾಜ್ ಖಾನ್, ಶಿವಂ ದುಬೆ, ಸುವೇದ್ ಪಾರ್ಕರ್, ಪ್ರಸಾದ್ ಪವಾರ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ, ಧವಳ್ ಕುಲಕರ್ಣಿ, ರಾಯ್ಸ್ಟನ್ ಡಾಯಸ್, ಅಥರ್ವ ಅಂಕೋಲೆಕರ್.
ಟಾಪ್ ನ್ಯೂಸ್
![Mangaluru: ರಾಹುಲ್ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್](https://www.udayavani.com/wp-content/uploads/2024/07/padmaraj-415x291.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.