Kantara: ನೀನು ಮುನ್ನಗ್ಗು..ʼಕಾಂತಾರʼ ಸಿನಿಮಾದ ಕುರಿತು ರಿಷಬ್ ಶೆಟ್ಟಿಗೆ ಅಭಯ ನೀಡಿದ ದೈವ
Team Udayavani, Jan 6, 2024, 12:29 PM IST
ಮಂಗಳೂರು: ರಿಷಬ್ ಶೆಟ್ಟಿ ಅವರ ʼಕಾಂತಾರ -1ʼ ಸಿನಿಮಾದ ಮುಹೂರ್ತ ಇತ್ತೀಚೆಗೆ ಕುಂದಾಪುರದ ಆನೆಗುಡ್ಡೆಯಲ್ಲಿ ನೆರವೇರಿದೆ. ಆ ಬಳಿಕ ಸಿನಿಮಾದ ವಿಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.
ʼಕಾಂತಾರ ಅಧ್ಯಾಯ -1ʼ ರಲ್ಲಿ ನಟಿಸಲು ಕಲಾವಿದರು ಬೇಕಾಗಿದ್ದಾರೆ ಎನ್ನುವ ಪೋಸ್ಟರ್ ನ್ನು ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಹೊರಬಿಟ್ಟಿತ್ತು. ಸಿನಿಮಾದಲ್ಲಿ ನಟಿಸಲು ಸಾವಿರಾರು ಮಂದಿ ಅಡಿಷನ್ ನೀಡಿದ್ದಾರೆ. ಚಿತ್ರೀಕರಣ ಆರಂಭಿಸುವ ತಯಾರಿಯಲ್ಲಿ ರಿಷಬ್ ಮತ್ತು ಅವರ ತಂಡ ಸಿದ್ದತೆಯನ್ನು ನಡೆಸುತ್ತಿದೆ.
ತುಳುನಾಡಿನ ದೈವ ಹಾಗೂ ನೆಲೆಯ ಕಥೆಯನ್ನು ʼಕಾಂತಾರʼ ಸಿನಿಮಾ ಹೇಳಿತ್ತು. ಪ್ರೀಕ್ವೆಲ್ ನಲ್ಲೂ ತುಳುನಾಡಿನ ಪಂಜುರ್ಲಿ ದೈವದ ಕಥೆ ಇರಲಿದೆ ಎನ್ನಲಾಗಿದೆ. ನಟ – ನಿರ್ದೇಶಕ ರಿಷಬ್ ʼಕಾಂತಾರʼ ಪ್ರೀಕ್ವೆಲ್ ಶುರು ಮಾಡುವ ಮುನ್ನ ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲೂ ಕೂಡ ತುಳುನಾಡಿನ ಆಚಾರ – ವಿಚಾರ ಹಾಗೂ ದೈವಗಳಿಗೆ ಅಪಮಾನವಾಗುವ ರೀತಿಯಲ್ಲಿ ಯಾವ ಸನ್ನಿವೇಶಗಳು ಇರಬಾರದೆನ್ನುವ ನಿಟ್ಟಿನಲ್ಲಿ ಎಚ್ಚರಿಕೆಯನ್ನು ಚಿತ್ರತಂಡ ವಹಿಸುತ್ತಿದೆ.
ಮಂಗಳೂರಿನ ವಜ್ರದೇಹಿ ಮಠದ ಸ್ವಾಮೀಜಿ ವಜ್ರದೇಹಿ ಶ್ರೀ ಅವರು, ರಿಷಬ್ ಅವರನ್ನು ದೈವ ಕೋಲಕ್ಕೆ ಆಹ್ವಾನಿಸಿದ ನಿಟ್ಟಿನಲ್ಲಿ ದೈವ ಕೋಲಕ್ಕೆ ರಿಷಬ್ ಶೆಟ್ಟಿ ಭೇಟಿ ಕೊಟ್ಟಿದ್ದಾರೆ. ಈ ವೇಳೆ ʼಕಾಂತಾರʼ ಸಿನಿಮಾದ ಬಗ್ಗೆ ಕೇಳಿದ್ದಾರೆ. ಇದಕ್ಕೆ ಮಹಿಷಂದಾಯ ದೈವ ನೀನು ಮುನ್ನುಗ್ಗು, ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಅಭಯವನ್ನು ನೀಡಿದೆ.
ʼಕಾಂತಾರʼ ಸಿನಿಮಾದ ಬಳಿಕ ಎಲ್ಲೆಡೆ ದೈವಗಳ ವೇಷಭೂಷಣವನ್ನು ಹಾಕಿ, ಅಪಮಾನವಾಗುವ ರೀತಿಯಲ್ಲಿ ಕೆಲವರು ಆಡಂಬರವಾಗಿಸಿದ್ದರು. ಆ ನಿಟ್ಟಿನಲ್ಲಿ ʼಕಾಂತಾರʼ ಪ್ರೀಕ್ವೆಲ್ ನ್ನು ತೆರೆಮೇಲೆ ತರುವಾಗ ಬಹಳ ಎಚ್ಚರಿಕೆ ಹೆಜ್ಜೆಯನ್ನಿಡುತ್ತಾ ರಿಷಬ್ ಸಾಗುತ್ತಿದ್ದಾರೆ.
ಸದ್ಯ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಬೇಕಿದ್ದು, ಕಲಾವಿದರ ಪರಿಚಯ ಇನ್ನಷ್ಟೇ ಆಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Royal; ಟಾಂಗ್ ಕೊಡಲು ವಿರಾಟ್ ರೆಡಿ: ದಿನಕರ್ ನಿರ್ದೇಶನದ ಸಿನಿಮಾ
Billa Ranga Baashaa: ಬಿಆರ್ಬಿಗೆ ಕಿಚ್ಚ ರೆಡಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…
Anish Tejeshwar: ‘ಮುಂದೆ ಹೇಗೋ ಏನೋ..’: ಆರಾಮ್ ಅರವಿಂದ ಸ್ವಾಮಿ ಹಾಡು ಹಬ್ಬ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.