Cricket: ವೈಭವ್ ಸೂರ್ಯವಂಶಿ 12ನೇ ವಯಸ್ಸಲ್ಲೇ ರಣಜಿ ಪದಾರ್ಪಣೆ
Team Udayavani, Jan 6, 2024, 11:04 PM IST
ಪಾಟ್ನಾ: ಬಿಹಾರದ ಎಡಗೈ ಆರಂಭಕಾರ ವೈಭವ್ ಸೂರ್ಯವಂಶಿ ಪ್ರಸಕ್ತ ರಣಜಿ ಋತುವಿನ ಮೊದಲ ದಿನವೇ ಸುದ್ದಿಯಾಗಿದ್ದಾರೆ. ಮುಂಬಯಿ ವಿರುದ್ಧ ರಣಜಿ ಪದಾರ್ಪಣೆಗೈದಾಗ ಇವರ ವಯಸ್ಸು ಕೇವಲ 12 ವರ್ಷ ಎಂಬುದು ತೀವ್ರ ಕೌತುಕಕ್ಕೆ ಕಾರಣವಾಗಿದೆ. ಅರ್ಥಾತ್, 7ನೇ ತರಗತಿಯಲ್ಲಿ ಓದಬೇಕಿರುವ ವಿದ್ಯಾರ್ಥಿಯೊಬ್ಬ ರಾಜ್ಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ವಿಶಿಷ್ಟ ವಿದ್ಯಮಾನವಿದು!
ರಣಜಿ ಕ್ಯಾಪ್ ಧರಿಸುವಾಗ ವೈಭವ್ ಸೂರ್ಯವಂಶಿ ವಯಸ್ಸು 12 ವರ್ಷ, 284 ದಿನ. ರಣಜಿ ಇತಿಹಾಸದ 4ನೇ ಕಿರಿಯ ಆಟಗಾರನೆಂಬುದು ಇವರ ಹೆಗ್ಗಳಿಕೆ. ಶನಿವಾರದ ದ್ವಿತೀಯ ದಿನದಾಟದಲ್ಲಿ ಇನ್ನಿಂಗ್ಸ್ ಆರಂಭಿಸಿದ ವೈಭವ್, 28 ಎಸೆತಗಳಿಂದ 19 ರನ್ ಗಳಿಸಿ ಶಿವಂ ದುಬೆ ಎಸೆತದಲ್ಲಿ ಔಟಾದರು. ಇದರಲ್ಲಿ 4 ಬೌಂಡರಿ ಸೇರಿತ್ತು.
ವೈಭವ್ ಸೂರ್ಯವಂಶಿ ಈ ಶತಮಾನದಲ್ಲಿ ರಣಜಿ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ.
ಕಿರಿಯ ರಣಜಿ ಕ್ರಿಕೆಟಿಗರು
ರಣಜಿ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ರಜಪೂತಾನ ತಂಡದ ಅಲಿಮುದ್ದೀನ್ ಅವರದ್ದಾಗಿದೆ. 1942-43ರಲ್ಲಿ ಬರೋಡ ವಿರುದ್ಧ ರಣಜಿಗೆ ಕಾಲಿಡುವಾಗ ಅಲಿಮುದ್ದೀನ್ ವಯಸ್ಸು 12 ವರ್ಷ, 73 ದಿನ. ಇದು ಕೇವಲ ಭಾರತೀಯ ದಾಖಲೆ ಆಗಷ್ಟೇ ಉಳಿದಿಲ್ಲ, ಪ್ರಥಮ ದರ್ಜೆ ಪಂದ್ಯವಾಡಿದ ವಿಶ್ವದ ಅತೀ ಕಿರಿಯ ಆಟಗಾರನೆಂಬ ದಾಖಲೆಯೂ ಆಗಿದೆ.
ಬಿಹಾರದ ಎಸ್.ಕೆ. ಬೋಸ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಇವರು 1959-60ರಲ್ಲಿ ಅಸ್ಸಾಮ್ ವಿರುದ್ಧ ರಣಜಿ ಆಡಲಿಳಿದಿದ್ದರು. ಆಗ ವಯಸ್ಸು 12 ವರ್ಷ, 76 ದಿನವಾಗಿತ್ತು.
1937-38ರಲ್ಲಿ ನಾರ್ದರ್ನ್ ಇಂಡಿಯಾದ ಮೊಹಮ್ಮದ್ ರಮ್ಜಾನ್ 12 ವರ್ಷ, 247ನೇ ದಿನದಲ್ಲಿ ಯುನೈಟೆಡ್ ಪ್ರಾವಿನ್ಸ್ ವಿರುದ್ಧ ರಣಜಿ ಆಡಲಿಳಿದಿದ್ದರು. ಈ ಯಾದಿಯಲ್ಲಿ ಅವರಿಗೆ 3ನೇ ಸ್ಥಾನ. ವೈಭವ್ ಸೂರ್ಯವಂಶಿ 4ನೇ ಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್ ಮರೆತಿದ್ದಾರೆ: ಬಬಿತಾ ಫೋಗಾಟ್
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್ ಹಾದಿ ಹೀಗಿದೆ
Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್
Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್ ಪುನಾರಂಭ.. ಡಿ.28ಕ್ಕೆ ಕೂಟ ಶುರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ
Puttur: ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ದುಷ್ಕರ್ಮಿಗಳ ದಾಳಿ
Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್ ಧ್ವನಿ; ಹೀರೋ ಮೇಲೆ ಆರೋಪ
JDS: ಎಡಿಜಿಪಿ ವಿರುದ್ಧ ಜೆಡಿಎಸ್ ಪ್ರತಿಭಟನೆ
Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.