Ayodhye ಬೀದಿ ಅಲೆಯುತ್ತಿದ್ದ ನನಗೆ ಪೇಜಾವರಶ್ರೀ ಸಿಕ್ಕರು!


Team Udayavani, Jan 7, 2024, 11:49 AM IST

2-karasevaka

ಕಮಲಾಕ್ಷ ಬಜಿಲಕೇರಿ ಅವರು ಹಿಂದೂ ಯುವಸೇನೆ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿದ್ದವರು. ಮಂಗಳೂರು ನೆಹರೂ ಮೈದಾನದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸ್ಥಾಪನಾ ಸಂಘಟನ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದವರು.

ಮಂಗಳೂರಿನ ಅತೀ ಹಳೆಯ ಹುಲಿವೇಷ ತಂಡವನ್ನು ಹೊಂದಿರುವವರು. ಬಜಿಲಕೇರಿಯಲ್ಲಿ ಸ್ವಾಮಿ ಅಯ್ಯಪ್ಪ ಸೇವಾ ಸಮಿತಿಯನ್ನು ಮುನ್ನಡೆಸುತ್ತಿರುವವರು. ಎರಡು ಬಾರಿ ಸೆಂಟ್ರಲ್‌ ಮಾರುಕಟ್ಟೆ ವಾರ್ಡನ್ನು ಪಕ್ಷೇತರ ಕಾರ್ಪೊರೇಟರ್‌ ಆಗಿ ಪ್ರತಿನಿಧಿಸಿದವರು.

ಮರುದಿನ ಕರಸೇವೆ ನಿಗದಿಯಾಗಿತ್ತು. ಮುಂಚಿನ ದಿನ ರಾತ್ರಿ ನನಗೆ ಅದೇನೋ ಚಡಪಡಿಕೆ ಆಗುತಿತ್ತು. ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ. ಎದ್ದು ಅಯೋಧ್ಯೆಯ ಬೀದಿಯಲ್ಲಿ ಅಲೆದಾಡುತ್ತಾ ಇದ್ದೆ. ಅಷ್ಟರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ತಿನ ಅಶೋಕ್‌ ಸಿಂಘಾಲ್‌, ಉಮಾಭಾರತಿ, ಗಿರಿರಾಜ್‌ ಕಿಶೋರ್‌ ಮುಂತಾದ ನಾಯಕರು ನಡೆದು ಬರುತ್ತಿರುವುದು ಕಂಡಿತು. ಪೇಜಾವರ ಸ್ವಾಮೀಜಿಯವರಿಗೆ ನನ್ನ ಮುಖ ಪರಿಚಯವಿತ್ತು. ನನ್ನನ್ನು ನೋಡಿ “”ಏನು ತಿರುಗಾಡುವುದು, ನಮ್ಮೊಂದಿಗೆ ಬಾ” ಎಂದು ನನ್ನನ್ನು ಒಂದೆಡೆಗೆ ಕರೆದೊಯ್ದರು. ಅಲ್ಲಿ ರಾತ್ರಿ ಪ್ರಮುಖ ಮುಖಂಡರ ಸಭೆ ನಡೆಯುತಿತ್ತು. ಮರುದಿನ ದಿನ ಕರಸೇವೆ ಹೇಗೆ ನಡೆಯಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ಗಹನ ಚರ್ಚೆ ನಡೆಯಿತು. ಡಿ. 6ರ ಬೆಳಗ್ಗೆ 11 ಗಂಟೆಯೊಳಗೆ ಕರಸೇವೆಯನ್ನು ಯಶಸ್ವಿಗೊಳಿಸುವ ನಿರ್ಧಾರಕ್ಕೆ ಬರಲಾಯಿತು.

ಡಿ.6ರಂದು ಕರಸೇವೆಯಲ್ಲಿ ಪಾಲ್ಗೊಳ್ಳಬೇಕಿದ್ದ ನಾಗಪುರದ ಶಿವಸೇನೆ, ಬಜರಂಗದಳದವರ ಪರಿಚಯವೂ ಇದ್ದ ಕಾರಣ ಅವರ ಜತೆ ಸೇರಿಕೊಂಡೆ. ಒಂದು ಬದಿಯಿಂದ ಸಾವಿರಾರು ಕರಸೇವಕರು ಸೇರಿದ್ದರು. ಕರಸೇವೆಗೆ ಮೊದಲು ಅಯೋಧ್ಯೆಯ ಒಂದು ಫೋನ್‌ಬೂತ್‌ನಿಂದ ಊರಿಗೆ ಫೋನ್‌ ಮಾಡಿದೆ. ನಾನು ಫೋನ್‌ ಮಾಡಿ ತಿಳಿಸುವ ಮೊದಲು ವಿಜಯೋತ್ಸವ ಆಚರಣೆ ಬೇಡ ಎಂದಿದ್ದೆ. ಬಳಿಕ ಅಂಗಡಿಯಾತನಿಗೂ 100 ರೂ. ಮುಂಗಡ ನೀಡಿ, ಮತ್ತೆ ಬಂದು ಫೋನ್‌ ಮಾಡಲು ಅವಕಾಶ ಕೊಡಬೇಕು ಎಂದು ಕೇಳಿಕೊಂಡಿದ್ದೆ.

ಕರಸೇವೆಗೆ ಎಲ್ಲರೂ ಸೇರಿಕೊಂಡೆವು. ಇತರ ಕರಸೇವಕರ ಜತೆ ನನ್ನೊಂದಿಗೆ ಬಂದ ಗಣೇಶ್‌, ಫ್ರಾನ್ಸಿಸ್‌, ಎಕ್ಕೂರು ಸೀನ, ವಿಟuಲ ಇಷ್ಟು ಮಂದಿ ನಾವು ಮೇಲೆ ಹೋಗಿ ವಿವಾದಿತ ಕಟ್ಟಡವನ್ನು ಕೆಡವುವ ಕಾರ್ಯದಲ್ಲಿ ಪಾಲ್ಗೊಂಡೆವು. ಒಂದೇ ದಿನದಲ್ಲಿ ವಿವಾದಿತ ಕಟ್ಟಡ ಭಗ್ನವಾಯಿತು. ಕರಸೇವೆ ಯಶಸ್ವಿಯಾಯಿತು. ಆ ದಿನದ ನಮ್ಮ ಉತ್ಸಾಹಕ್ಕೆ ಪಾರವಿರಲಿಲ್ಲ.

ಅಯೋಧ್ಯೆಯಲ್ಲಿ ನಡೆದ 1990, 1992ರ ಎರಡೂ ಸಲದ ಕರಸೇವೆಯಲ್ಲಿ ತೊಡಗಿಸಿಕೊಂಡ ಭಾಗ್ಯ ನನ್ನದು. ಡಿ.6ರಂದು ನಮ್ಮ ರಾಜ್ಯದ ಕೆಲವು ಕಾರ್ಯಕರ್ತರಿಗೆ ಸಿಕ್ಕ ಅಪೂರ್ವ ಅವಕಾಶ ನನಗೂ ಸಿಕ್ಕಿತ್ತು. ಮಂಗಳೂರಿನಿಂದ 1992ರ ನವೆಂಬರ್‌ ಕೊನೆವಾರ ನಾವು ಹೊರಟಿದ್ದೆವು. ಹಿಂದೂ ಯುವಸೇನೆಯ ಪ್ರತ್ಯೇಕ ತಂಡವಾಗಿ ಸುಮಾರು 15 ಜನರು ತೆರಳಿದ್ದೆವು. ಝಾನ್ಸಿ ಜಂಕ್ಷನ್‌ ಸೇರಿದೆವು. ಅಲ್ಲಿಂದ ಸಿಕ್ಕ ಸಿಕ್ಕ ವಾಹನ, ಪಾದಯಾತ್ರೆ ಮೂಲಕ ಅಯೋಧ್ಯೆ ಹತ್ತಿರ ಸೇರಿಕೊಂಡೆವು. ನನ್ನೊಂದಿಗೆ ಎಕ್ಕೂರು ಸೀನ, ಫ್ರಾನ್ಸಿಸ್‌, ಪದ್ಮನಾಭ ಪುತ್ರನ್‌, ಪದ್ಮನಾಭ ಯಾನೆ ಪದ್ದು ಗರೋಡಿ, ಗಣೇಶ್‌ ಕರ್ಮಾರ್‌, ಎಕ್ಕೂರು ಬಾಬಾ, ನವೀನ್‌ ವಿಟ್ಠಲ್‌ ಹೊಯ್ಗೆಬಜಾರ್‌ ಮುಂತಾದವರಿದ್ದರು. ಅವರಲ್ಲಿ ಅನೇಕರು ಈಗ ನಮ್ಮೊಂದಿಗೆ ಇಲ್ಲ.

ನನಗೀಗ 73 ವರ್ಷ. ಅಂದಿನ ನಮ್ಮ ಕರಸೇವೆ ಬಳಿಕ ಅನ್ನಿಸಿದ್ದೆಂದರೆ ಮಂದಿರ ನಿರ್ಮಾಣ ಇಷ್ಟು ಸುದೀರ್ಘ‌ವಾಗಬಾರದಿತ್ತು. ಏನೇ ಆಗಲಿ, ಈಗಲಾದರೂ ಮಂದಿರ ನಿರ್ಮಾಣಗೊಳ್ಳುತ್ತಿದೆ ಎನ್ನುವ ಖುಷಿಯೂ ಇದೆ.

ಕರಸೇವೆಗೆ ಮೊದಲು ಅಯೋಧ್ಯೆಯ:

ಒಂದು ಫೋನ್‌ಬೂತ್‌ನಿಂದ ಊರಿಗೆ ಫೋನ್‌ ಮಾಡಿದೆ. ನಾನು ಫೋನ್‌ ಮಾಡಿ ತಿಳಿಸುವ ಮೊದಲು ವಿಜಯೋತ್ಸವ ಆಚರಣೆ ಬೇಡ ಎಂದಿದ್ದೆ. ಬಳಿಕ ಅಂಗಡಿಯಾತನಿಗೂ 100 ರೂ. ಮುಂಗಡ ನೀಡಿ, ಮತ್ತೆ ಬಂದು ಫೋನ್‌ ಮಾಡಲು ಅವಕಾಶ ಕೊಡಬೇಕು ಎಂದು ಕೇಳಿಕೊಂಡಿದ್ದೆ.

 ಕಮಲಾಕ್ಷ ಬಜಿಲಕೇರಿ, ಮಂಗಳೂರು

 ನಿರೂಪಣೆ: ವೇಣುವಿನೋದ್‌

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.