Ayodhya Shri Ram: ಪ್ರಭು ಶ್ರೀರಾಮ ಪ್ರೇರಕ ಶಕ್ತಿ
Team Udayavani, Jan 7, 2024, 1:17 PM IST
ಶ್ರೀರಾಮನ ಜನ್ಮ ಮತ್ತು ಕರ್ಮಭೂಮಿಯಾದ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮತ್ತು ಶ್ರೀರಾಮಮಂದಿರ ಲೋಕಾರ್ಪಣೆ ಆಗುತ್ತಿರುವುದು ಐತಿಹಾಸಿಕ ಘಟನೆಯಾಗಿದೆ.
ಅಂದು ರಾವಣನ ಸಂಹಾರಕ್ಕಾಗಿ, ದೇವತೆಗಳ ಶಾಂತಿಗಾಗಿ, ಅಹಲ್ಯೆಯ ಮುಕ್ತಿಗಾಗಿ, ಶಬರಿಯ ಮೋಕ್ಷಕ್ಕಾಗಿ ಮುಂತಾದ ಚಾರಿತ್ರಿಕ ಧರ್ಮ ಸಂಸ್ಥಾಪನೆಯ ಕಾರಣಗಳಿಗಾಗಿ “ಧರ್ಮೋ ಹಿ ಪರಮೋ ಲೋಕೇ…’ ಅಂದರೆ ಧರ್ಮವು ಜಗತ್ತಿನಲ್ಲಿ (ಜೀವನದಲ್ಲಿ) ಶ್ರೇಷ್ಠವಾದುದ್ದು ಎಂದು ನಡೆ-ನುಡಿಯಲ್ಲಿ ಅಕ್ಷರಶಃ ಅನುಷ್ಠಾನ ಮಾಡಿದ ಧರ್ಮಜ್ಞ, ಮಾತಾ-ಪಿತೃವಾಕ್ಯ ಪರಿ ಪಾಲಕ, ಆದರ್ಶ ಗುಣಸಾರ್ವಭೌಮ, ಸಂಪತ್ತು- ಅಧಿಕಾರದ ವ್ಯಾಮೋಹ ಇಲ್ಲದ ನಿರ್ಮೋಹಿ, ಭಕ್ತರನ್ನೇ ಭಗವಂತನ ಸ್ಥಾನಕ್ಕೇರಿಸಿದ ಸಮಾನತೆಯ ಹರಿಕಾರ, ಪವಾಡಕ್ಕಿಂತ ವಾಸ್ತವತೆಯ ಅಪ್ಪಿ ಒಪ್ಪಿಕೊಂಡ ಸೌಜನ್ಯ ಮೂರ್ತಿ, ನಂಬಿದವರ ಅಭಯಂಕರ, ಶರಣಾಗತರ ವತ್ಸಲ, ಮರ್ಯಾದಾ ಪುರುಷೋತ್ತಮ, ಪ್ರಜಾಹಿತ ನಿರತ, ಪರತತ್ತÌ ಸಹಿಷ್ಣು ಶ್ರೀರಾಮನ ಆರ್ವಿಭಾವಕ್ಕಾಗಿ ಕಾಯುತ್ತಿದ್ದರು.
ಇಂದು ಅದೇ ಭಗವಾನ್ ಶ್ರೀರಾಮ ಜೀವನದ ಆದರ್ಶ ಮತ್ತು ವ್ಯಕ್ತಿತ್ವ , ಅವನ ಸತ್ ಕಾರ್ಯಗಳು ಹಾಗೂ ಅವನ ಧರ್ಮ ತತ್ತÌ ಚಿಂತನೆಗಳ ಅನುಷ್ಠಾನಕ್ಕಾಗಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದೆ. ಶ್ರೀರಾಮ… ಎಂಬ ನಾಮವೇ ಸರ್ವರನ್ನೂ ಪ್ರಭಾವಿಸುವ ಪ್ರೇರಕ ಶಕ್ತಿಯಾಗಿರುವುದರಿಂದ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮತ್ತು ಶ್ರೀರಾಮ ಮಂದಿರ ಲೋಕಾರ್ಪಣೆಯ ಕೀರ್ತಿ ಹರಡುವ ಜತೆ ಜತೆಗೆ ಶ್ರೀರಾಮನ ನೀತಿಯು ಸರ್ವ ಭಕ್ತರ ಮನಗಳನು ತಲುಪಲಿ ಎಂದು ಶುಭ ಹಾರೈಸುತ್ತೇವೆ.
ನಿರಂಜನಾನಂದಪುರಿ ಮಹಾಸ್ವಾಮೀಜಿ
ಕನಕ ಗುರುಪೀಠ, ಕಾಗಿನೆಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.