ಕೊಡುಗೈ ದಾನಿ,ಉದ್ಯಮಿ ನಾರ್ಬರ್ಟ್ ಸಾಲ್ಡಾನ ನಿಧನಕ್ಕೆ ಮಿಡಿದ ಜನಸಾಗರ
ಬಣಕಲ್ ಚರ್ಚ್ ಹಾಲ್ ನಲ್ಲಿ ಅಂತಿಮ ದರ್ಶನ, ರಸ್ತೆಯುದ್ದಕ್ಕೂ ಪುಷ್ಪಾರ್ಚನೆ
Team Udayavani, Jan 8, 2024, 8:58 PM IST
ಕೊಟ್ಟಿಗೆಹಾರ : ಶನಿವಾರ ನಿಧನ ಹೊಂದಿದ್ದ ಕೊಡುಗೈ ದಾನಿ,ಬಡವರ ಬಂಧು,ಉದ್ಯಮಿ ಕುಂದೂರು ನಾರ್ಬರ್ಟ್ ಸಾಲ್ಡಾನ ಅವರ ಅಂತಿಮ ಕ್ರಿಯೆ ಸೋಮವಾರ ಬಣಕಲ್ ನಲ್ಲಿ ನಡೆಸಲಾಯಿತು.ಬಣಕಲ್ ಚರ್ಚ್ ನಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಾತಿಮತಬೇದವೆನ್ನದೇ ಸಹಸ್ರಾರು ಮಂದಿ ಕೊಡುಗೈ ದಾನಿಯ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ಕುಂದೂರು ಸೇರಿದಂತೆ ಮೂಡಿಗೆರೆ,ಮಂಗಳೂರು, ಚಿಕ್ಕಮಗಳೂರು,ಅರೇಹಳ್ಳಿ.ಸಕಲೇಶಪುರ, ಹಾಸನ ಮತ್ತಿತರ ಕಡೆಯಿಂದ ಬಂಧುಗಳು,ಸಾರ್ವಜನಿಕರು ಅಂತಿಮ ದರ್ಶನದಲ್ಲಿ ಪಾಲ್ಗೊಂಡರು.ಮಧ್ಯಾಹ್ನ 1ಗಂಟೆಯಿಂದ 3.30 ವರೆಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ತಾರಾದೇವಿ, ಜೆಡಿಎಸ್ ಮುಖಂಡ ರಂಜನ್ ಅಜಿತ್ ಕುಮಾರ್,ಬಿಜೆಪಿ ಮುಖಂಡ ಕೆ.ಸಿ.ರತನ್, ಕಾಂಗ್ರೆಸ್ ಮುಖಂಡರಾದ ಬಿ.ಎಸ್ ಜಯರಾಮ್ ಗೌಡ,ಟಿ.ಎಂ. ಸುಬ್ರಹ್ಮಣ್ಯ,ಹರ್ಷ ಮೆಲ್ವಿನ್ ಲಸ್ರಾದೊ, ನಜರೆತ್ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಹಿಲ್ಡಾಲೋಬೊ,ಚಿಕ್ಕಮಗಳೂರು ಕ್ರೈಸ್ತ ಧರ್ಮಾಧ್ಯಕ್ಷ ಡಾ.ಅಂತೋನಿ ಸ್ವಾಮಿ ನೇತೃತ್ವದಲ್ಲಿ ಧರ್ಮಗುರು ಪ್ರೇಮ್ ಲಾರೆನ್ಸ್ ಡಿಸೋಜ, ಫಾ.ಥಾಮಸ್ ಕಲಘಟಗಿ, ಫಾ.ಎಲಿಯಾಸ್,ಫಾ.ಅಂತೋನಿ ವಾಸ್,ಜೆ.ಬಿ.ಗೊನ್ಸಾಲ್ವಿಸ್ ಸೇರಿದಂತೆ ವಿವಿಧ ಧರ್ಮಗುರುಗಳು ಬಲಿ ಪೂಜೆ ಅರ್ಪಿಸಿದರು.
ವಿವಿಧ ರಾಜಕೀಯ, ಸಂಘ ಸಂಸ್ಥೆಗಳ ಮುಖಂಡರು ಅಂತಿಮ ದರ್ಶನ ಪಡೆದರು.ನಂತರ ಬಣಕಲ್ ಬಾಲಿಕಾ ಮರಿಯ ಚರ್ಚಿನಲ್ಲಿ ಪೂಜಾವಿಧಿಗಳು ನಡೆದವು.ನಂತರ ಬಣಕಲ್ ಕ್ರೈಸ್ತರ ಸ್ಮಶಾನದಲ್ಲಿ ಜನಸಾಗರದ ನಡುವೆ ಅಂತ್ಯಕ್ರೀಯೆ ನಡೆಯಿತು.ಸಂದರ್ಭದಲ್ಲಿ ಪತ್ನಿ ಜೆಸಿಂತಾ,ಪುತ್ರರಾದ ಕ್ರೈಸಲ್,ನೆನ್ಸನ್,ರೊಚೆಲ್,ರಿಚಿ,ನೈಜಿಲ್,ಹಾಗೂ ಸೊಸೆ, ಹಾಗೂ ಮೊಮ್ಮಕ್ಕಳು ಇದ್ದರು.
ಕೊಟ್ಟಿಗೆಹಾರದಲ್ಲಿ ಅಂಗಡಿಮುಂಗಟ್ಟು ಮುಚ್ಚಿ ಪುಷ್ಪಾರ್ಚನೆ
ಕೊಟ್ಟಿಗೆಹಾರದಲ್ಲಿ ಸಾರ್ವಜನಿಕರು,ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿ ಅವರ ಅಂಬುಲೆನ್ಸ್ ಬಂದಾಗ ಅವರ ಅಂಬುಲೆನ್ಸ್ ಗೆ ಪುಷ್ಪಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸಿದರು. ಆಮರ್ ರಹೇ ಕೂಗು ಯುವಕರಿಂದ ಮೊಳಗಿತು.
ಸಮಾಜಕ್ಕೆ ನಾರ್ಬಟ್ ಸಲ್ಡಾನ ಆಸ್ತಿಯಾಗಿದ್ದರು.ಅವರ ಅಕಾಲಿಕ ಮರಣ ಸಮಾಜಕ್ಕೆ ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷಕ್ಕೂ ತುಂಬಲಾರದ ನಷ್ಟ.ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ದಯಾಪಾಲಿಸಲಿ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ನಾರ್ಬರ್ಟ್ ಸಲ್ಡಾನರು ಜನರಿಗೆ ತೋರಿದ ಪ್ರೀತಿ ಈ ಲೋಕದಲ್ಲಿ ಹೇಗಿತ್ತು ಎನ್ನುವುದು ಜನಸಾಗರವೇ ಸಾರಿ ಹೇಳುತ್ತಿದೆ.ಸಾವಿನಿಂದ ನಮ್ಮ ಜೀವನ ಅಂತ್ಯವಾಗಲ್ಲ.ಪುನರುತ್ಥಾನವಾಗುತ್ತದೆ.ಏಸು ತೋರಿದ ದಾರಿಯನ್ನು ಇವರು ಅನುಸರಿಸಿ ನಮ್ಮಲ್ಲಿ ಅಮರರಾಗಿದ್ದಾರೆ ಎಂದು ಫಾ.ಎಲಿಯಾಸ್ ಸಿಕ್ವೇರಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಬದಲು: ಸುದೀಪ್ ಜಾಗಕ್ಕೆ ಇವರು ಎಂಟ್ರಿ…
Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ
Revenge Strikes: ಇರಾನ್ ಸೇನಾ ನೆಲಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ…
Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ
Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.