![TN-BSP-Armstrong](https://www.udayavani.com/wp-content/uploads/2024/07/TN-BSP-Armstrong-415x249.jpg)
Sirsi:ಕಾರ್ಮಿಕರ ಮೂಲಕ ಮಲ ಸಾಗಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
Team Udayavani, Jan 8, 2024, 9:21 PM IST
![police crime](https://www.udayavani.com/wp-content/uploads/2024/01/police-crime-1-620x382.jpg)
ಶಿರಸಿ: ಶೌಚಾಲಯದ ಮಲವನ್ನು ಸ್ಥಳದಿಂದ ಕಾರ್ಮಿಕರ ಮೂಲಕ ಸಾಗಿಸಿದ ಕಟ್ಟಡದ ಮಾಲೀಕನ ವಿರುದ್ಧ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ದೇವಿಕೇರಿ ಹತ್ತಿರದ ಗೌಡಳ್ಳಿ ಹೊಟೇಲ್ ಹಿಂಭಾಗ ದಲ್ಲಿರುವ ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡವು ಮಹಾಬಲೇಶ್ವರ ಬಿ.ಬೈಂದೂರು ಮಾಲಕತ್ವದ್ದಾಗಿದ್ದು, ಅವರು ತಮ್ಮ ಕಟ್ಟಡವನ್ನು ನಿರ್ಮಿಸಲು ಬಂದ ಕಾರ್ಮಿಕರನ್ನು ಬಳಸಿಕೊಂಡು ಸ್ಥಳದಲ್ಲಿರುವ ತಮ್ಮ ಹಳೆಯ ಶೌಚಾಲಯದ ಗುಂಡಿಯನ್ನು ಜ. 4 ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಸ್ವಚ್ಛಗೊಳಿಸಿದ ಕುರಿತು ಆ ವೇಳೆ ಸ್ಥಳದಲ್ಲಿದ್ದ ಬಲ್ಲ ಸಾರ್ವಜನಿಕರಿಂದ ತಿಳಿದು ಬಂದಿದೆ.
ಜ.8 ರಂದು ಬೆಳಗ್ಗೆ 10.45 ಕ್ಕೆ ಸ್ಥಳಕ್ಕೆ ತೆರಳಿ ಪರಿಶೀಸಿದಾಗ ಆ ಸ್ಥಳದಲ್ಲಿ ಶೌಚಾಲಯದ ಗುಂಡಿ ಇರುವುದು ಹಾಗೂ ಅದರಲ್ಲಿರುವ ಶೌಚಾಲಯದ ಮಲವನ್ನು ಸ್ಥಳದಿಂದ ಕಾರ್ಮಿಕರ ಮೂಲಕ ಸಾಗಿಸಿರುವುದು ಮತ್ತು ಆ ಸ್ಥಳದ ಅಕ್ಕಪಕ್ಕದಲ್ಲಿ ಬಿದ್ದಿದ್ದ ಮಲದ ಕುರುಹುಗಳಿಂದ ಸ್ಪಷ್ಟವಾಗಿ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಕಟ್ಟಡದ ಮಾಲೀಕ ಪಡ್ತಿಗಲ್ಲಿಯ ಮಹಾಬಲೇಶ್ವರ ಬಿ ಬೈಂದೂರು (60) ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಮಂಜುನಾಥ ವೆರ್ಣೀಕರ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸ್.ಐ ರತ್ನಾ ಕುರಿ ತನಿಖೆ ನಡೆಸಿದ್ದಾರೆ.
ಮಲ ಹೊರುವ ಪದ್ಧತಿಗೆ ನಿಷೇಧವಿದ್ದರೂ ಶಿರಸಿಯಲ್ಲಿ ಇದು ಬೆಳಕಿಗೆ ಬಂದಂತಾಗಿದೆ.
ಟಾಪ್ ನ್ಯೂಸ್
![TN-BSP-Armstrong](https://www.udayavani.com/wp-content/uploads/2024/07/TN-BSP-Armstrong-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Heavy Rain ಯಲ್ಲಾಪುರ: ಬಾಗಿನಕಟ್ಟಾ ಬಳಿ ಭೂಕುಸಿತ; ಸಂಚಾರ ಸ್ಥಗಿತ](https://www.udayavani.com/wp-content/uploads/2024/07/Heavy-Rain-150x91.jpg)
Heavy Rain ಯಲ್ಲಾಪುರ: ಬಾಗಿನಕಟ್ಟಾ ಬಳಿ ಭೂಕುಸಿತ; ಸಂಚಾರ ಸ್ಥಗಿತ
![11-honnavara](https://www.udayavani.com/wp-content/uploads/2024/07/11-honnavara-150x90.jpg)
Honnavara: ಭಾರೀ ಮಳೆ; ಹಲವು ಮನೆಗಳಿಗೆ ನೆರೆ ನೀರು
![Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ](https://www.udayavani.com/wp-content/uploads/2024/07/kumata-150x93.jpg)
Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ
![10-honanvar](https://www.udayavani.com/wp-content/uploads/2024/07/10-honanvar-150x90.jpg)
ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ
![7-sirsi](https://www.udayavani.com/wp-content/uploads/2024/07/7-sirsi-150x90.jpg)
ತುಂಬಿ ಹರಿಯುತ್ತಿರುವ ಚಂಡಿಕಾನದಿ;ಶಿರಸಿಯಿಂದ ತೆರಳುವ ವಾಹನಗಳಿಗೆ ಬದಲಿ ಮಾರ್ಗ ವ್ಯವಸ್ಥೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.