Sri Vithoba Rakhumai Temple; ಧಾರ್ಮಿಕ ಆಚರಣೆ ಕಾನೂನಿನ ಉಲ್ಲಂಘನೆಯಲ್ಲ: ತೀರ್ಪು
Team Udayavani, Jan 11, 2024, 2:07 AM IST
ಮಂಗಳೂರು: ಮಂಗಳೂರಿನ ವಿ.ಟಿ.ರಸ್ತೆಯಲ್ಲಿರುವ ಶ್ರೀ ವಿಠೊಭ ರುಕುಮಾಯಿ ದೇವಸ್ಥಾನಕ್ಕೆ ಸಂಬಂಧಿಸಿದ ವ್ಯಾಜ್ಯದ ಕುರಿತು ನ್ಯಾಯಾಲಯ ತೀರ್ಪು ನೀಡಿದ್ದು “ಧಾರ್ಮಿಕ ಆಚರಣೆ ನಡೆಸುವುದು ಕಾನೂನಿನ ಉಲ್ಲಂಘನೆಯಾಗುವುದಿಲ್ಲ’ ಎಂದು ತೀರ್ಪಿನಲ್ಲಿ ಹೇಳಿದೆ.
2018ರ ಅ. 12ರಂದು ವರದರಾಯ್ ಪ್ರಭು ಅವರು ದೇಗುಲದ ಆಡಳಿತ ಮೊಕ್ತೇಸರ ಮರೋಳಿ ಸುರೇಂದ್ರ ಕಾಮತ್ ಅವರ ಮೇಲೆ ದಾವೆ ಹೂಡಿದ್ದರು. ದೇಗುಲದಲ್ಲಿ ನಡೆದಿರುವ ಪ್ರಶ್ನಾ ಕಾರ್ಯಕ್ರಮ, ಪವಮಾನ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಪೂಜೆ, ಕುಂಕುಮಾರ್ಚನೆಯನ್ನು ಮಾಡಿಸಲು ಆಡಳಿತ ಮೊಕ್ತೇಸರರಿಗೆ ಅವಕಾಶವಿಲ್ಲ. ಅವರು ಅದನ್ನು ಮಾಡಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆಪಾದಿಸಿದ್ದರು.
5 ವರ್ಷಗಳ ಕಾಲ ವಿಚಾರಣೆ ನಡೆದ ಬಳಿಕ ಜ. 5ರಂದು ಪ್ರಥಮ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು ಅಂತಿಮ ಆದೇಶ ನೀಡಿದ್ದು “ದೇವಸ್ಥಾನದಲ್ಲಿ ಆಯೋಜಿಸಲಾದ ಪ್ರಶ್ನಾ ಕಾರ್ಯಕ್ರಮ, ಪವಮಾನ ಅಭಿಷೇಕ ಮತ್ತು ವಿಶೇಷ ಪೂಜೆಗಳು ಧಾರ್ಮಿಕ ಆಚರಣೆಗಳಾಗಿವೆ. ಇದು ದೇವಸ್ಥಾನದ ಆಡಳಿತಕ್ಕೆ ಸಂಬಂಧಪಟ್ಟ ವಿಷಯ ಆಗಿಲ್ಲದೇ ಇರುವುದರಿಂದ ಇದಕ್ಕೂ ದೇವಸ್ಥಾನದ ಆಡಳಿತ ಮಂಡಳಿಗೂ ಯಾವುದೇ ಸಂಬಂಧವಿಲ್ಲ. ಅದು ದೇವಸ್ಥಾನದ ಧಾರ್ಮಿಕ ಆಚರಣೆಗಳಿಗೆ ಸಂಬಂಧಪಟ್ಟ ವಿಷಯಗಳಾಗಿರುವುದರಿಂದ ಕಾಲಕಾಲಕ್ಕೆ ನಡೆದುಕೊಂಡು ಬರಲೇಬೇಕಾಗಿದೆ. ಇಂತಹ ಆಚರಣೆಗಳನ್ನು ಅಥವಾ ಧಾರ್ಮಿಕ ಸಂಪ್ರದಾಯಗಳನ್ನು ನಡೆಸುವುದು ಕಾನೂನಿನ ಉಲ್ಲಂಘನೆಗಳಾಗುವುದಿಲ್ಲ’ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.
ದೇಣಿಗೆ ಕಾನೂನಿನ ಉಲ್ಲಂಘನೆಯಲ್ಲ
ಶ್ರೀನಿವಾಸ್ ಕಾಮತ್ ಅವರಿಂದ ದೇವಸ್ಥಾನದಲ್ಲಿ 150 ರೂ. ಗಳನ್ನು ಸೇವಾ ಕಾಣಿಕೆ ಪಡೆದಿರುವುದು ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದು ಹೇಳಿರುವ ನ್ಯಾಯಾಲಯ ದೇವಸ್ಥಾನಕ್ಕೆ ದೇಣಿಗೆ, ಕಾಣಿಕೆಯನ್ನು ಭಕ್ತರು ನೀಡುವುದು ಸಾಮಾನ್ಯ ಪ್ರಕ್ರಿಯೆ. ದೇಣಿಗೆಯನ್ನು ದೇವಸ್ಥಾನಕ್ಕೆ ನೀಡುವಾಗ ಅದನ್ನು ಸ್ವೀಕರಿಸಿ ರಶೀದಿಯನ್ನು ನೀಡಲು ಯಾರನ್ನಾದರೂ ನಿಯುಕ್ತಿಗೊಳಿಸಬೇಕಾಗುತ್ತದೆ. ಅದು ಕೂಡ ಕಾನೂನಿನ ಉಲ್ಲಂಘನೆಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ವರದರಾಯ ಪ್ರಭು ಆರೋಪ ಮಾಡಿರುವಂತೆ ಮರೋಳಿ ಸುರೇಂದ್ರ ಕಾಮತ್ ಅವರು ದೇಣಿಗೆ, ಕಾಣಿಕೆಯನ್ನು ಪಡೆದಿರುವುದು ತಪ್ಪಲ್ಲ ಎಂದು ಕೂಡ ತೀರ್ಪಿನಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ
Mangaluru: ಕದ್ರಿ ಪಾರ್ಕ್ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ
Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್ ಅಧಿಕಾರಿ: ಪುಷ್ಪಾ ಅಮರನಾಥ್
Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ
Mangaluru: ಮಾದಕವಸ್ತು ಸಹಿತ ಮೂವರ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.