IAF: 2016ರಲ್ಲಿ ನಾಪತ್ತೆಯಾದ ಐಎಎಫ್ ವಿಮಾನದ ಅವಶೇಷ ಈಗ ಪತ್ತೆ
ಬಂಗಾಳಕೊಲ್ಲಿಯಲ್ಲಿ ಏಳೂವರೆ ವರ್ಷದ ಬಳಿಕ ನಡೆದ ಶೋಧ ಯಶಸ್ವಿ
Team Udayavani, Jan 12, 2024, 10:36 PM IST
ನವದೆಹಲಿ: ಏಳೂವರೆ ವರ್ಷಗಳ ಹಿಂದೆ ಭಾರತೀಯ ವಾಯುಪಡೆಯ 29 ಸಿಬ್ಬಂದಿ ಸಮೇತವಾಗಿ ನಾಪತ್ತೆಯಾಗಿದ್ದ ಸಾರಿಗೆ ವಿಮಾನದ ಅವಶೇಷವೂ ಇದೀಗ ಬಂಗಾಳಕೊಲ್ಲಿ ಸಮುದ್ರದ 3.4ಕಿ.ಮೀ. ಆಳದಲ್ಲಿ ಪತ್ತೆಯಾಗಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯನ್ ಟೆಕ್ನಾಲಜಿ ಸಂಸ್ಥೆಯು ಸಮುದ್ರದ ಆಳದಲ್ಲಿ ನಿಯೋಜಿಸಿರುವ ಅಟಾನಾಮಸ್ (ಸ್ವಾಯತ್ತ) ಅಂಡರ್ ವಾಟರ್ ವೆಹಿಕಲ್ (ಎಯುವಿ) ವಿಮಾನದ ಅವಶೇಷಗಳ ಚಿತ್ರವನ್ನು ಸೆರೆ ಹಿಡಿದಿದೆ. ಅದನ್ನು ಪರಿಶೀಲಿಸಿದಾಗ ಚೆನ್ನೈ ಕರಾವಳಿಯಿಂದ 310 ಕಿ.ಮೀ.ದೂರದಲ್ಲಿ ಪತ್ತೆಯಾಗಿರುವ ಅವಶೇಷ ಏಳೂವರೆ ವರ್ಷದ ಹಿಂದೆ ಕಾಣೆಯಾದ ಎಎನ್-32 ವಿಮಾನದ್ದು ಎಂಬುದು ದೃಢಪಟ್ಟಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
2016ರ ಜುಲೈ 22ರಂದು ಕೆ-2743 ನೋಂದಣಿ ಹೊಂದಿರುವ ಎಎನ್-32 ವಿಮಾನವು ಬಂಗಾಳಕೊಲ್ಲಿ ಕಾರ್ಯಾಚರಣೆ ಸಂದರ್ಭದಲ್ಲಿ 29 ಸಿಬ್ಬಂದಿಯೊಂದಿಗೆ ನಾಪತ್ತೆಯಾಗಿತ್ತು. ಆ ಬಳಿಕ ಸಿಬ್ಬಂದಿಯನ್ನಾಗಲಿ, ವಿಮಾನದ ಅವಶೇಷವನ್ನಾಗಲಿ ಹುಡುಕಲು ಸಾಧ್ಯವಾಗಿರಲಿಲ್ಲ. ಇದೀಗ ಅದೇ ಪ್ರದೇಶದಲ್ಲಿ ಅವಶೇಷ ಪತ್ತೆಯಾಗಿದ್ದು, ಬೇರೆ ಯಾವುದೇ ವಿಮಾನಗಳು ಈ ಪ್ರದೇಶದಲ್ಲಿ ಪತನಗೊಂಡಿರುವುದು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯನ್ ಟೆಕ್ನಾಲಜಿ ಕಾರ್ಯನಿರ್ವಹಿಸಿದ್ದು, ಮಲ್ಟಿಬೀಮ್ ಸೊನಾರ್, ಸಿಂಥೆಟಿಕ್ ಅಪೆಂಚರ್ ಸೊನಾರ್ನಂಥ ವಿವಿಧ ಪೆಲೋಡ್ಗಳನ್ನು ಬಳಸಿ ಆಳ ಸಮುದ್ರದ ಶೋಧ ನಡೆಸಿ ಅವಶೇಷ ಪತ್ತೆ ಹಚ್ಚಿದೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ ವಿಫಲ… ಹಳಿ ಮೇಲೆ ಮಣ್ಣು ಸುರಿದ ಕಿಡಿಗೇಡಿಗಳು
Jani Master: ಲೈಂಗಿಕ ಕಿರುಕುಳ ಕೇಸು; ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಪ್ರಶಸ್ತಿ ರದ್ದು!
Digital arrest ವಂಚನೆಗೆ ಬಲಿಯಾಗಬೇಡಿ: ಕೇಂದ್ರ ಎಚ್ಚರಿಕೆ ಸಂದೇಶ
Sabarimala;ಅಯ್ಯಪ್ಪ ದರ್ಶನಕ್ಕೆ ಇನ್ನು ಆನ್ಲೈನ್ ನೋಂದಣಿ ಕಡ್ಡಾಯ
Controversial Maldives President ಭಾರತಕ್ಕೆ !; ಇಂದು ರಾಷ್ಟ್ರಪತಿ, ಪ್ರಧಾನಿ ಮೋದಿ ಭೇಟಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
INDvsBAN: ಗ್ವಾಲಿಯರ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಹಾರ್ದಿಕ್ ಪಾಂಡ್ಯ
Fraud: ಪಾರ್ಟ್ಟೈಮ್ ಜಾಬ್ ಹೆಸರಿನಲ್ಲಿ ಯುವಕನಿಗೆ 2.58 ಲಕ್ಷ ರೂ. ವಂಚನೆ
Shimoga: ಪೊಲೀಸರ ಮೇಲೆ ಹಲ್ಲೆಗೆ ಯತ್ನ; ರೌಡಿಶೀಟರ್ ಕಾಲಿಗೆ ಗುಂಡೇಟು
Darshan; ಡಿ ಬಾಸ್ಗೆ ಯಾರೂ ಏನು ಮಾಡೋಕೆ ಆಗಲ್ಲ: ದಿನಕರ್ ತೂಗುದೀಪ
ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ ವಿಫಲ… ಹಳಿ ಮೇಲೆ ಮಣ್ಣು ಸುರಿದ ಕಿಡಿಗೇಡಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.