Desi Swara:ತಾಯ್ನಾಡಿನ ಪರಂಪರೆಯನ್ನು ಉಳಿಸುತ್ತಿರುವ ಯು.ಎ.ಇ. ಕನ್ನಡಿಗರು


Team Udayavani, Jan 13, 2024, 3:35 PM IST

Desi Swara:ತಾಯ್ನಾಡಿನ ಪರಂಪರೆಯನ್ನು ಉಳಿಸುತ್ತಿರುವ ಯು.ಎ.ಇ. ಕನ್ನಡಿಗರು

ಸಂಪಾದನೆ ಮತ್ತು ಸಾಧನೆಗಳ ಸಾಧ್ಯತೆಗಳನ್ನು ಹರಸುತ್ತಾ ತಾಯ್ನಾಡಾದ ಕರ್ನಾಟಕದಿಂದ ಯು.ಎ.ಇ.ಯಲ್ಲಿ ನೆಲೆಸಿರುವವರಾಗಿದ್ದಾರೆ ಯು.ಎ.ಇ. ಕನ್ನಡಿಗರು. ಅರಬ್‌ ರಾಷ್ಟ್ರ ಮತ್ತು ಭಾರತದ ಸಂಬಂಧವು ಬಹಳ ಹಳೆಯದ್ದೇ ಆಗಿದೆ. ಯು.ಎ.ಇ.ಯಲ್ಲಿ ಕ್ರಿ.ಶ. 1970ರ ಅನಂತರದಲ್ಲಾದ ಅತೀವೇಗದ ಅಭಿವೃದ್ಧಿಯ ಬದಲಾವಣೆಯಿಂದಾಗಿ ಈ ರಾಷ್ಟ್ರಕ್ಕೆ ಉದ್ಯೋಗವನ್ನು ಹರಸುತ್ತಾ ವಿಶ್ವದ ನಾನಾ ಭಾಗದಿಂದ ಜನರು ಆಗಮಿಸುತ್ತಿದ್ದಾರೆ. ಅದರಲ್ಲಿ ಬಹುತೇಕ ಮಂದಿ ಭಾರತೀಯರೇ ಆಗಿದ್ದಾರೆ.

ಅಧಿಕೃತ ಮಾಹಿತಿ ಪ್ರಕಾರ ಸುಮಾರು ಶೇಕಡ 38ಕ್ಕಿಂತಲೂ ಅಧಿಕ ನಾಗರಿಕರು ಭಾರತೀಯರಾಗಿದ್ದಾರೆ. 34,20,000 ನಾಗರಿಕರೊಂದಿಗೆ ಯು.ಎ.ಇ.ಯಲ್ಲಿ ಭಾರತದ ಡಯಾನ್ಪೋರಾವೂ 2ನೇ ಸ್ಥಾನದಲ್ಲಿದೆ. ಯು.ಎ.ಇ.ಯಲ್ಲಿ ಭಾರತೀಯರ ಪೈಕಿ ಮೊದಲ ಸ್ಥಾನದಲ್ಲಿ ಮಲಯಾಳಿಗಳಾದರೆ ಮೂರನೇ ಅಥವಾ ನಾಲ್ಕನೇ ಸ್ಥಾನದಲ್ಲಿ ಕನ್ನಡಿಗರಿದ್ದಾರೆ.

ಅದಾಗ್ಯೂ ಸಂಘಟಿತ ಕಾರ್ಯಗಳಲ್ಲಿ ಕನ್ನಡಿಗರು ಸೈ ಎನಿಸಿಕೊಂಡಿದ್ದಾರೆ. ಬೇರೆ ಬೇರೆ ನಾಮದಡಿ ಅಬುಧಾಬಿ, ದುಬೈ, ಅಲ್‌ಐನ್‌, ಶಾರ್ಜಾ ಕಡೆಗಳಲ್ಲಿ ಕನ್ನಡಿಗರು ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಮುಂದಿದ್ದಾರೆ. ಇದರಿಂದಾಗಿ ಊರಲ್ಲಿ ನಡೆಯುವ ಪ್ರತೀ ಉತ್ಸವಗಳನ್ನೂ ಇಲ್ಲಿಯೂ ಅದೇ ಉತ್ಸಾಹದೊಂದಿಗೆ ಯು.ಎ.ಇ. ಕನ್ನಡಿಗರು ಆಚರಿಸಲು ಸಾಧ್ಯವಾಗುತ್ತಿದೆ.

ಕುಟುಂಬ ಸಮೇತ ಇಲ್ಲಿ ನೆಲೆಸಿರುವವರು ಮತ್ತು ಕುಟುಂಬ ಹಾಗೂ ಬಂಧುಮಿತ್ರಾದಿಗಳನ್ನು ತೊರೆದು ನೆಲೆಸಿರುವವರೆಲ್ಲರೂ ಸಹ ಯುಗಾದಿ, ಕ್ರಿಸ್ಮಸ್‌, ದೀಪಾವಳಿ, ಈದ್‌, ಕನ್ನಡ ರಾಜ್ಯೋತ್ಸವ ಮುಂತಾದ ಎಲ್ಲ ಹಬ್ಬಗಳಲ್ಲಿ ಪಾಲ್ಗೊಂಡು ನಮ್ಮೂರ ಪರಂಪರೆಯನ್ನು ಉಳಿಸುವ ಧನಾತ್ಮಕ ಪ್ರವೃತಿ ಆಗುತ್ತಿದೆ. ಪ್ರಾಚೀನ ಗ್ರೀಕ್‌ ತತ್ತ್ವಜ್ಞಾನಿ ಅರಿಸ್ಟಾಟಲ್‌ ಹೇಳಿರುವಂತೆ ಮಾನವನು ಸಮಾಜ ಜೀವಿಯಾಗಿದ್ದಾನೆ. ಸಮೂಹ ಜೀವಿಗಳು ಪರಸ್ಪರ ಒಗ್ಗಟ್ಟಿನಿಂದ ಇರಬೇಕಾಗಿರುವುದು ಅನಿವಾರ್ಯ.

ಆದಿ ಯುಗದ ಪಳಯುಳಿಯುವಿಕೆಯಾಗಿ ಬಂದಿರುವ ಸಂಘಟನಾತ್ಮಕ ಅಲೆಮಾರಿ ಚಿಂತನೆ ಈಗಲೂ ವಿಭಿನ್ನ ರೂಪದಲ್ಲಿ ಪ್ರತ್ಯಕ್ಷವಾಗುತ್ತಿದೆ. ಇಂತಹ ಸಂಘದಲ್ಲಿ ದುಬೈ ಹೆಮ್ಮೆಯ ಕನ್ನಡಿಗರು ಸಂಘವು ಒಂದು ಪ್ರಮುಖ ಸಂಘಟನೆಯಾಗಿ ಖ್ಯಾತಿ ಪಡೆದಿದೆ. ಪ್ರತೀ ವರ್ಷವು ಸಮಾಜಮುಖಿ ಚಿಂತನೆಗಳಿರುವ ನಾಯಕರನ್ನು ಈ ಸಂಘದ ಪದಾಧಿಕಾರಿಯಾಗಿ ನೇಮಿಸಿ ನವೀನ ಪದ್ಧತಿಗಳೊಂದಿಗೆ ಇದನ್ನು ಅವರು ಮುನ್ನಡೆಸುತ್ತಿದ್ದಾರೆ.

ಕೇವಲ ಹಬ್ಬಾಚರಣೆಗಳಿಗೆ ಮಾತ್ರ ಸೀಮಿತವಾಗಿರಿಸಿದೆ ದುಬೈ ಹೆಮ್ಮೆಯ ಕನ್ನಡಿಗರ ಕೂಟವು ದುಃಖತಪ್ತರಾಗಿರುವ ಯು.ಎ.ಇ. ಕನ್ನಡಿಗರ ಕಣ್ಣೀರೊರೆಸುವ ಸಾಂತ್ವನ ಕಾರ್ಯದಲ್ಲೂ ಮುಂದಿದೆ. ರಕ್ತದಾನ, ಯಾರಾದರೂ ಮರಣ ಹೊಂದಿದರೆ ಮೃತ ಶರೀರವನ್ನು ತಾಯ್ನಾಡಿಗೆ ಮರಳಿಸುವ, ಊರಿಂದ ಉದ್ಯೋಗಕ್ಕೆಂದು ಏಜೆಂಟರು ಕರೆತಂದು ವಂಚನೆಗೊಳಪಟ್ಟವರ ಬಿಡುಗಡೆಗೊಳಿಸುವ… ಇತ್ಯಾದಿ ಸಾಮಾಜಿಕ ಸಾಂತ್ವನ ಕಾರ್ಯಗಳಲ್ಲೂ ಮಾದರಿಯಾಗಿ ಬೆಳೆದು ನಿಂತಿದೆ.

ಪ್ರತೀ ವರ್ಷ ಕರ್ನಾಟಕದ ಕ್ರೀಡಾ ಸಾಧಕರನ್ನು ಪರಿಗಣಿಸಿ ದುಬೈ ಕ್ರೀಡಾ ರತ್ನ ಪ್ರಶಸ್ತಿ, ಕನ್ನಡಿಗ ಸಂಗೀತ ಕಲೆಗಾರರನ್ನು ಗೌರವಿಸಿ ಅವರಿಗೂ ವೇದಿಕೆಗಳನ್ನು ಒದಗಿಸಿ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ಉದ್ಯೋಗವನ್ನು ಹರಸಿ ಬಂದ ತಾಯ್ನಾಡಿನ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಮೇಳವನ್ನು ಸಂಘಟಿಸಿ ಅವರಿಗೆ ಅಸರೆಯಾಗಿ ಬೆಳೆದಿದೆ. ಕನ್ನಡಿಗ ವ್ಯಾಪಾರಸ್ಥರಿಗಾಗಿ ಕನ್ನಡಿಗ ವ್ಯಾಪಾರಸ್ಥ ವೇದಿಕೆಯನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಇವೆಲ್ಲವೂ ಹುಟ್ಟಿ ಇನ್ನೂ ಹತ್ತು ವರ್ಷ ಪೂರ್ತಿಯಾಗದ ದುಬೈ ಹೆಮ್ಮೆಯ ಕನ್ನಡಿಗರು ಸಂಘದ ಮಹತ್ತರ ಸಾಧನೆಯಾಗಿದೆ. ಇದು ಇಲ್ಲಿ ನೆಲೆಸಿರುವ ಕನ್ನಡಿಗರ ಶಕ್ತಿಯನ್ನು ತೋರಿಸುತ್ತದೆ. ಮಾತ್ರವಲ್ಲದೆ ದಶಮಾನೋತ್ಸವದ ಹೊಸ್ತಿಲಲ್ಲಿರುವ ದುಬೈ ಹೆಮ್ಮೆಯ ಕನ್ನಡಿಗರು ಸಂಘವು ಹಸುಗೂಸಿನ ಪ್ರಾಯದಲ್ಲೇ ಯು.ಎ.ಇ.ಯಲ್ಲಿರುವ ಕನ್ನಡಿಗರ ಅಧಿಕೃತ ಶಬ್ಧವಾಗಿ ಬೆಳೆದು ನಿಂತಿದೆ.

ಅದೇ ರೀತಿ ವಿಶ್ವದಲ್ಲೇ ಖ್ಯಾತಿ ಪಡೆದಿರುವ ಶಾರ್ಜಾ ಪುಸ್ತಕ ಮೇಳದಲ್ಲಿ ಕನ್ನಡದ ಹೆಸರಾಂತ ಪ್ರಕಾಶಮಾನವಾದ ಶಾಂತಿ ಪ್ರಕಾಶನವು ಅವಕಾಶ ಪಡೆದು ಕನ್ನಡಿಗರ ಪ್ರತಿನಿಧಿಯಾಗಿ ಕನ್ನಡದ ಕಂಪನ್ನು ಪಸರಿಸುತ್ತಿದೆ. ಇವುಗಳ ಹೊರತಾಗಿ ವಾಣಿಜ್ಯ ಕ್ಷೇತ್ರ, ವೈದ್ಯಕೀಯ, ಶೈಕ್ಷಣಿಕ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಕನ್ನಡಿಗರು ಸಾಧನೆ ಮಾಡುತ್ತಿದ್ದಾರೆ.

*ಮಹಮ್ಮದ್‌ ಫೈಸಲ್‌ ಎ.ಕೆ., ಯುಎಇ

 

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.