Australian Open; ಶ್ರೇಯಾಂಕಿತ ಆಟಗಾರನ ವಿರುದ್ಧ ಗೆದ್ದು ಇತಿಹಾಸ ಬರೆದ ಸುಮಿತ್ ನಾಗಲ್
Team Udayavani, Jan 16, 2024, 1:29 PM IST
ಮೆಲ್ಬೋರ್ನ್: ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಭಾರತದ ಯುವ ಆಟಗಾರ ಸುಮಿತ್ ನಾಗಲ್ ಅವರು ಮೊದಲ ಸುತ್ತು ಜಯಿಸಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಮೊದಲ ಸುತ್ತಿನಲ್ಲಿ ಸಮಿತ್ ಅವರು 27ನೇ ಕ್ರಮಾಂಕದ ಆಟಗಾರ ಅಲೆಕ್ಸಂಡರ್ ಬಬ್ಲಿಕ್ ಅವರನ್ನು ಮಣಿಸಿದರು.
ಆರಂಭದಿಂದಲೇ ಎದುರಾಳಿಯ ಮೇಲೆ ಮುನ್ನುಗ್ಗಿ ಸಾಗಿದ ಸುಮಿತ್ ನಾಗಲ್ ಮೊದಲೆರಡು ಸೆಟ್ ಗಳನ್ನು ಸುಲಭದಲ್ಲಿ ಗೆದ್ದರು. 6-4, 6-2 ಅಂತರದಿಂದ ಮೊದಲೆರಡು ಸೆಟ್ ಗಳು ಹರ್ಯಾಣ ಮೂಲದ ಭಾರತೀಯ ಆಟಗಾರನಿಗೆ ಒಲಿಯಿತು.
ಮೂರನೇ ಸೆಟ್ ಉಭಯ ಆಟಗಾರರ ತೀವ್ರ ಪೈಪೋಟಿಗೆ ಸಾಕ್ಷಿಯಾಯಿತು. ಮೊದಲ ಆರು ಗೇಮ್ ಗಳಲ್ಲಿ ಇಬ್ಬರು ಆಟಗಾರರು ಜಿದ್ದಾಜಿದ್ದಿನಿಂದ ಸಾಗಿದರು. ನಾಗಲ್ ಬಳಿಕ 5-3 ಅಂತರದ ಮುನ್ನಡೆ ಸಾಧಿಸಿದರು. ಆದರೆ ಮುಂದಿನ ಸೆಟ್ ಗೆದ್ದ ಬಬ್ಲಿಕ್ ಪಂದ್ಯವನ್ನು ಸುಲಭದಲ್ಲಿ ಸುಮಿತ್ ಕೈಗಿಡಲಿಲ್ಲ. ಒಂದು ಹಂತದಲ್ಲಿ ಬಲಾಢ್ಯ ಆಟ ಪ್ರದರ್ಶಿಸಿದ ಕಜಕಿಸ್ತಾನದ ಬಬ್ಲಿಕ್ ಆಟವನ್ನು 5-5ರ ಸಮಬಲಕ್ಕೆ ತಂದರು.
ಮುಂದೆ ಪಂದ್ಯ ಟೈ ಬ್ರೇಕರ್ ಗೆ ಸಾಗಿ, ಅಲ್ಲಿ ನಾಗಲ್ 7-5 ರಿಂದ ವಿಜಯಶಾಲಿಯಾದರು. ಈ ಮೂಲಕ ಅಲೆಕ್ಸಾಂಡರ್ ಬಬ್ಲಿಕ್ ವಿರುದ್ಧ ಸುಮಿತ್ ನಾಗಲ್ 6-4, 6-2, 7-6 ರ ನೇರ ಸೆಟ್ ಗಳಲ್ಲಿ ಸೋಲಿಸಿದರು.
ಆಸ್ಟ್ರೇಲಿಯನ್ ಓಪನ್ ಇತಿಹಾಸದಲ್ಲಿ 1989 ರ ನಂತರ ಮೊದಲ ಬಾರಿಗೆ ಭಾರತೀಯ ಆಟಗಾರ ಶ್ರೇಯಾಂಕ ಹೊಂದಿದ ಆಟಗಾರನನ್ನು ಸೋಲಿಸಿದರು.
ಇದನ್ನೂ ಓದಿ:Threat: ಪಂಜಾಬ್ ಸಿಎಂ ಮತ್ತು DGP ಗೆ ಜೀವ ಬೆದರಿಕೆ ಹಾಕಿದ ಖಾಲಿಸ್ತಾನಿ ಭಯೋತ್ಪಾದಕ ಪನ್ನೂನ್
ನಾಗಲ್ ಅವರ ಎರಡನೇ ಸುತ್ತಿನ ಅರ್ಹತೆ ಭಾರತೀಯರಿಗೆ ಟೆನಿಸ್ ಇತಿಹಾಸದಲ್ಲಿ ಸ್ಮರಣೀಯ ಸಾಧನೆಯಾಗಿದೆ. ಪುರುಷರ ಸಿಂಗಲ್ಸ್ ಕೂಟಗಳಲ್ಲಿ, ಆಸ್ಟ್ರೇಲಿಯನ್ ಓಪನ್ ನಲ್ಲಿ ಯಾವುದೇ ಭಾರತೀಯ ಟೆನಿಸ್ ಆಟಗಾರನ ದೊಡ್ಡ ಸಾಧನೆಯೆಂದರೆ ಮೂರನೇ ಸುತ್ತನ್ನು ತಲುಪಿರುವುದು.
ಭಾರತೀಯ ದಂತಕತೆ ರಮೇಶ್ ಕೃಷ್ಣನ್ ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ತಮ್ಮ ವೃತ್ತಿಜೀವನದಲ್ಲಿ ಒಟ್ಟು ಐದು ಬಾರಿ ಮೂರನೇ ಸುತ್ತಿಗೆ ಅರ್ಹತೆ ಪಡೆದಿದ್ದರು. ಅವರು 1983, 1984, 1987, 1988 ಮತ್ತು 1989 ರ ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ್ದರು. ಅವರು 1989 ರಲ್ಲಿ ಎರಡನೇ ಸುತ್ತಿನಲ್ಲಿ ವಿಶ್ವದ ನಂ. 1 ಮ್ಯಾಟ್ಸ್ ವಿಲಾಂಡರ್ ಅವರನ್ನು ಸೋಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್: ದ.ಆಫ್ರಿಕಾಗೆ 177 ರನ್ ಅಂತರದ ಸೋಲು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ
Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು
Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ
Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ
Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.