ವಿಶ್ವ ಗೀತಾ ಪರ್ಯಾಯೋತ್ಸವ ; ಸಾಫ್ಟ್ ವೇರ್ ನಿಂದ ಸ್ಪಿರಿಚುವಲ್‌ ಎಂಜಿನಿಯರಿಂಗ್‌‌ ವರೆಗೆ

ಸನ್ಯಾಸಾಶ್ರಮ ಸ್ವೀಕರಿಸುವ ಒಂದು ವಾರದ ಮೊದಲಷ್ಟೇ ತಂದೆ, ತಾಯಿಗೆ ತಿಳಿದದ್ದು

Team Udayavani, Jan 16, 2024, 2:47 PM IST

ವಿಶ್ವ ಗೀತಾ ಪರ್ಯಾಯೋತ್ಸವ ; ಸಾಫ್ಟ್ ವೇರ್ ನಿಂದ ಸ್ಪಿರಿಚುವಲ್‌ ಎಂಜಿನಿಯರಿಂಗ್‌‌ ವರೆಗೆ

ಉಡುಪಿ: ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಮೂಲತಃ ಒಬ್ಬ ಸಾಫ್ಟ್ ವೇರ್ ಎಂಜಿನಿಯರ್‌. ಅವರು ಸ್ವಾಮೀಜಿಯಾಗುವ ಮುನ್ನ ಏಳು ವರ್ಷ ಬೆಂಗಳೂರಿನಲ್ಲಿ ಎಚ್‌ಪಿ, ಕಾಗ್ನಿಜೆಂಟ್‌, ಎರಿಕ್ಸನ್‌ ಕಂಪೆನಿಗಳಲ್ಲಿ ಸಾಫ್ಟ್ ವೇರ್ ಎಂಜಿನಿಯರ್‌ ಆಗಿ ಕೆಲಸ ಮಾಡಿದವರು. ಸಾಫ್ಟ್ ವೇರ್ ಎಂಜಿನಿಯರ್‌ ಒಬ್ಬರು ಅಷ್ಟಮಠದ ಯತಿಗಳಾಗಿರುವುದು ಇದೇ ಪ್ರಥಮ.

ಗುರುರಾಜ ಆಚಾರ್ಯ ಮತ್ತು ವಿನುತಾ ಆಚಾರ್ಯರ ಮೊದಲ ಮಗನೇ ಕಿರಿಯ ಯತಿಯಾಗಿರುವ ಪ್ರಶಾಂತ ಆಚಾರ್ಯ. ಗುರುರಾಜ ಆಚಾರ್ಯರ ಪೂರ್ವಜರು ಕಾಪು ತಾಲೂಕಿನ ಅಡ್ವೆಯವರು. ಆದರೆ ಗುರುರಾಜ ಆಚಾರ್ಯರು ಜೀವನೋಪಾಯಕ್ಕಾಗಿ ಉಡುಪಿ ಕುಂಜಿಬೆಟ್ಟಿನಲ್ಲಿ ಸ್ವಸ್ತಿಕ್‌ ಹೊಟೇಲ್‌ ಎಂಬ ಹೊಟೇಲ್‌ ಉದ್ಯಮ ನಡೆಸುತ್ತಿದ್ದರು. ಸುಮಾರು 15 ವರ್ಷಗಳಿಂದ ಆರೋಗ್ಯದ ಕಾರಣಕ್ಕಾಗಿ ಹೊಟೇಲ್‌ ನಡೆಸುವುದನ್ನು ಬಿಟ್ಟರು.

11.8.1989ರಲ್ಲಿ ಜನಿಸಿದ ಪ್ರಶಾಂತ ಆಚಾರ್ಯರು ಇಂದ್ರಾಳಿ ಹೈಸ್ಕೂಲ್‌, ಅಳಿಕೆ ವಿದ್ಯಾಲಯ, ಮಣಿಪಾಲ ಪ.ಪೂ. ಕಾಲೇಜು, ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದಿದರು. ಇಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌ನಲ್ಲಿ ಬಿಇ ಪದವಿ ಪಡೆದ ಇವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾಗ ಆಧ್ಯಾತ್ಮದತ್ತ ವಾಲಿ ಬೆಂಗಳೂರು ಬಸವನಗುಡಿಯಲ್ಲಿರುವ ಪುತ್ತಿಗೆ ಮಠದಲ್ಲಿ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಸಂಪರ್ಕಕ್ಕೆ ಬಂದರು.

ಈ ಅಚಾನಕ್‌ ಸಂಪರ್ಕವೇ ಮುಂದೆ ಮಠಾಧಿಪತಿಯಾಗಲು ಕಾರಣವಾಯಿತು. ಉಡುಪಿಯಲ್ಲಿ ಹುಟ್ಟಿ ಬೆಳೆದ ಪರಿಣಾಮ
ಶ್ರೀಕೃಷ್ಣಮಠ, ಅಷ್ಟಮಠಗಳ ಪರಿಚಯವೂ ಇತ್ತು. ತಮ್ಮೊಳಗೆ ಇದ್ದ ಅಧ್ಯಾತ್ಮ ಆಸಕ್ತಿಯನ್ನು ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಬಳಿ ಹೇಳಿಕೊಳ್ಳುತ್ತಲೂ ಇದ್ದರು. ಲೌಕಿಕ ಶಿಕ್ಷಣದ ಜತೆ ಧಾರ್ಮಿಕ ಶಿಕ್ಷಣವನ್ನೂ ಪಡೆಯುತ್ತಿದ್ದರು.

ತಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸಬೇಕೆಂದು ಪ್ರಶಾಂತರು ಪ್ರಾರ್ಥಿಸಿದಾಗಲೂ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಪ್ರಶಾಂತರ ಗುಣನಡತೆಗಳನ್ನು ಗಮನಿಸುತ್ತಿದ್ದ ಗುರುಗಳು ಜಾತಕ ಪರಿಶೀಲನೆ ಮಾಡಿ ಕೊನೆಗೆ 22.04.2019ರಂದು ಪುತ್ತಿಗೆ ಮೂಲಮಠದಲ್ಲಿ ಸನ್ಯಾಸಾಶ್ರಮ ನೀಡಿ ಶ್ರೀಸುಶ್ರೀಂದ್ರತೀರ್ಥರೆಂದು ನಾಮಕರಣ ಮಾಡಿದರು. ಆಶ್ರಮ ಸ್ವೀಕರಿಸುವಾಗ ಇವರಿಗೆ 29 ವರ್ಷ.

ಸನ್ಯಾಸಾಶ್ರಮ ಸ್ವೀಕರಿಸುವ ಒಂದು ವಾರದ ಮೊದಲಷ್ಟೇ ತಂದೆ, ತಾಯಿಗೆ ತಿಳಿದದ್ದು. “ಅವರಿಗೆ ಶ್ರೀಕೃಷ್ಣನ ಪೂಜೆ ಮಾಡುವ ಆಸಕ್ತಿ ಇತ್ತು. ಆದ್ದರಿಂದ ನಾವೇನೂ ಆಕ್ಷೇಪಿಸಲಿಲ್ಲ’ ಎನ್ನುತ್ತಾರೆ ಗುರುರಾಜ ಆಚಾರ್ಯರು. ಸನ್ಯಾಸ ಸ್ವೀಕರಿಸಿದ ದಿನದಿಂದ ಐದು ವರ್ಷ ಎಲ್ಲಿಗೂ ಹೋಗದೆ ಪುತ್ತಿಗೆ ವಿದ್ಯಾಪೀಠದಲ್ಲಿಯೇ ಶಾಸ್ತ್ರಾಧ್ಯಯನ ನಡೆಸಿದರು. ಇದೀಗ ಗುರುಗಳು ಪರ್ಯಾಯ ಪೂರ್ವಭಾವಿ ಸಂಚಾರ ನಡೆಸುವಾಗ ಅವರಿಗೆ ಸಹಾಯಕರಾಗಿ ಸಂಚಾರ ನಡೆಸಿದ್ದಾರೆ. ಕಿರಿಯ ಶ್ರೀಗಳು ಸಂಪೂರ್ಣ ಗುರುಗಳ ಆಶ್ರಯದಲ್ಲಿ, ಅವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿದ್ದಾರೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.