Australian Open: ನೊವಾಕ್ ಜೊಕೋವಿಕ್, ಸ್ಟೆಫನಸ್ ಸಿಸಿಪಸ್ 3ನೇ ಸುತ್ತು ಪಾಸ್
Team Udayavani, Jan 20, 2024, 12:07 AM IST
ಮೆಲ್ಬರ್ನ್: ಹಾಲಿ ಚಾಂಪಿ ಯನ್ ನೊವಾಕ್ ಜೊಕೋವಿಕ್, ಸ್ಟೆಫನಸ್ ಸಿಸಿಪಸ್, ಕೊಕೊ ಗಾಫ್ ಆಸ್ಟ್ರೇಲಿಯನ್ ಓಪನ್ 3ನೇ ಸುತ್ತು ದಾಟಿದ್ದಾರೆ.
ಶುಕ್ರವಾರದ 3ನೇ ಸುತ್ತಿನ ಪಂದ್ಯದಲ್ಲಿ ಜೊಕೋವಿಕ್ 6-3, 6-3, 7-6 (2)ರಿಂದ ಆರ್ಜೆಂಟೀನಾದ ಥಾಮಸ್ ಇಶೆವೆರಿ ಅವರನ್ನು ಮಣಿಸಿದರು. ಮುಂದಿನ ಎದುರಾಳಿ ಫ್ರಾನ್ಸ್ನ ಅಡ್ರಿಯನ್ ಮನ್ನಾರಿನೊ.
4ನೇ ಶ್ರೇಯಾಂಕದ ಜಾನಿಕ್ ಸಿನ್ನರ್ 6-0, 6-1, 6-3ರಿಂದ ಸೆಬಾಸ್ಟಿಯನ್ ಬೇಝ್ ಆಟಕ್ಕೆ ತೆರೆ ಎಳೆದರು. ಮುಂದಿನ ಎದುರಾಳಿ ಕರೆನ್ ಕಶನೇವ್. ಗ್ರೀಸ್ನ ಸ್ಟೆಫನಸ್ ಸಿಸಿಪಸ್ ಫ್ರಾನ್ಸ್ನ ಲುಕಾ ವಾನ್ ಆ್ಯಶೆ ಅವರನ್ನು 6-3, 6-0, 6-4 ಅಂತರದಿಂದ ಸೋಲಿಸಿದರು.
ವನಿತಾ ಸಿಂಗಲ್ಸ್ನಲ್ಲಿ ರಷ್ಯಾದ ಅರ್ಹತಾ ಆಟಗಾರ್ತಿ ಮರಿಯಾ ಟಿಮೊಫೀವಾ 7-6 (7), 6-3ರಿಂದ ಬ್ರಝಿಲ್ನ ಬೀಟ್ರಿಝ್ ಹದ್ದಾದ್ ಮಯಾಗೆ ಸೋಲುಣಿಸಿದರು. ರಷ್ಯಾದ 16 ವರ್ಷದ ಮಿರ್ರಾ ಆ್ಯಂಡ್ರೀವಾ ಫ್ರಾನ್ಸ್ನ ದಿಯಾನೆ ಪ್ಯಾರ್ರಿ ವಿರುದ್ಧ 1-6, 6-1, 7-6 (5) ಅಂತರದಿಂದ ಗೆದ್ದು ಬಂದರು. ಕೊಕೊ ಗಾಫ್ 6-0, 6-2ರಿಂದ ಅಲಿಸಿಯಾ ಪಾರ್ಕ್ಗೆ ಆಘಾತವಿಕ್ಕಿದರು. ಅರಿನಾ ಸಬಲೆಂಕಾ ಒಂದೂ ಅಂಕ ನೀಡದೆ ಉಕ್ರೇನಿನ ಲೆಸಿಯಾ ಸುರೆಂಕೊ ಅವರಿಗೆ 6-0, 6-0 ಅಂತರದ ಸೋಲುಣಿಸಿದರು.
ಬೋಪಣ್ಣ-ಎಬೆxನ್ 3ನೇ ಸುತ್ತಿಗೆ
ದ್ವಿತೀಯ ಶ್ರೇಯಾಂಕದ ರೋಹನ್ ಬೋಪಣ್ಣ ಮತ್ತು ಆತಿಥೇಯ ದೇಶ ಮ್ಯಾಥ್ಯೂ ಎಬೆxನ್ “ಆಸ್ಟ್ರೇಲಿಯನ್ ಓಪನ್’ ಪುರುಷರ ಡಬಲ್ಸ್ನಲ್ಲಿ 3ನೇ ಸುತ್ತಿಗೆ ಓಟ ಬೆಳೆಸಿದ್ದಾರೆ. ಇವರಿಬ್ಬರು ಸೇರಿಕೊಂಡು ಆಸ್ಟ್ರೇಲಿಯದವರೇ ಆದ ಜಾನ್ ಮಿಲ್ಮಾನ್-ಎಡ್ವರ್ಡ್ ವಿಂಟರ್ ಅವರನ್ನು 6-2, 6-4 ನೇರ ಸೆಟ್ಗಳಲ್ಲಿ ಮಣಿಸಿದರು.
ಬೋಪಣ್ಣ-ಎಬೆxನ್ ಪಂದ್ಯದ ಎಲ್ಲ ವಿಭಾಗಗಳಲ್ಲೂ ನಿಚ್ಚಳ ಮೇಲುಗೈ ಸಾಧಿಸಿದರು. 203 ಕಿ.ಮೀ. ವೇಗದ ಅತೀ ವೇಗದ ಸರ್ವ್ ಹಾಗೂ 17 ವಿನ್ನರ್ ಮೂಲಕ ಗಮನ ಸೆಳೆದರು.
ಇಂಡೋ-ಆಸ್ಟ್ರೇಲಿಯನ್ ಜೋಡಿ ಇನ್ನು 14ನೇ ಶ್ರೇಯಾಂ ಕದ ವೆಸ್ಲಿ ಕೂಲೋಫ್ (ನೆದರ್ಲೆಂಡ್ಸ್)- ನಿಕೋಲ ಮೆಕ್ಟಿಕ್ (ಕ್ರೊವೇಶಿಯಾ) ವಿರುದ್ಧ ಆಡಲಿದ್ದಾರೆ.
ಬಾಲಾಜಿ ಜೋಡಿಗೆ ಜಯ
ಇದೇ ವೇಳೆ ಭಾರತದ ಮತ್ತೋರ್ವ ಆಟಗಾರ ಶ್ರಿರಾಮ್ ಬಾಲಾಜಿ-ವಿಕ್ಟರ್ ಕೋರ್ನಿಯ (ರೊಮೇನಿಯಾ) ಪುರುಷರ ಡಬಲ್ಸ್ ನಲ್ಲಿ ದ್ವಿತೀಯ ಸುತ್ತು ತಲುಪಿದ್ದಾರೆ. ಇವರು ಇಟಲಿಯ ಮ್ಯಾಟಿಯೊ ಅರ್ನಾಲ್ಡಿ-ಆ್ಯಂಡ್ರೆ ಪೆಲೆಗ್ರಿನೊ ವಿರುದ್ಧ 6-3, 6-4ರಿಂದ ಗೆದ್ದು ಬಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.