![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 20, 2024, 12:40 AM IST
ಮಂಗಳೂರು: ಕಟ್ಟಡವೊಂದರ ಶಟರ್ ಹಾಕಿ ಕಚೇರಿಯ ಸಿಬಂದಿಯನ್ನು ತಡೆದು ನಿಂದಿಸಿದ ಘಟನೆ ನಗರದ ಕಾಸಿಯಾ ಜಂಕ್ಷನ್ನಲ್ಲಿ ಸಂಭವಿಸಿದೆ.
ಮಹಮ್ಮದ್ ಸೌದ್ ಅವರು ಕಾಸಿಯಾ ಜಂಕ್ಷನ್ನ ಶಮಾ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿ ಕಚೇರಿ ಹೊಂದಿದ್ದು, ಗುರುವಾರ ರಾತ್ರಿ 8.30ಕ್ಕೆ ಕಚೇರಿ ಕೆಲಸ ಮುಗಿಸಿ ಉದ್ಯೋಗಿಳಾದ ಕಾಜೋಲ್, ನಿಶಾಮ್, ಸವದ್ ಮತ್ತು ಸೌದ್ ಅವರು ಹೊರಗೆ ಬರುತ್ತಿದ್ದರು.
ಆಗ ಕಾಂಪ್ಲೆಕ್ಸ್ನ ಮಾಲಕ ಅಸ್ಲಾಮ್ ನೆಳ ಅಂತಸ್ತಿನ ಶಟರ್ ಬಾಗಿಲು ಹಾಕಿ ಅವರನ್ನು ತಡೆದು ನಿಂದಿಸಿದ್ದಾನೆ. ಈ ಬಗ್ಗೆ ಸಿಬಂದಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಶಟರ್ ತೆರೆದು ಉದ್ಯೋಗಿಗಳನ್ನು ಹೊರಗೆ ಕಳುಹಿಸಿದರು. ಮಹಮ್ಮದ್ ಸೌದ್ ನೀಡಿರುವ ದೂರಿನ ಆಧಾರದಲ್ಲಿ ಕಟ್ಟಡ ಮಾಲಕ ಅಸ್ಲಾಂ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.