Mangaluru ಜಾಗತಿಕ ಬಿಕ್ಕಟ್ಟು ವೇಳೆ ಭಾರತದ ನಿಲುವು ಸಮರ್ಪಕ

ಮಂಗಳೂರು ಲಿಟ್‌ಫೆಸ್ಟ್‌ನಲ್ಲಿ ನಿವೃತ್ತ ರಾಯಭಾರಿ ಅಭಿಮತ

Team Udayavani, Jan 20, 2024, 11:28 PM IST

maMangaluru ಜಾಗತಿಕ ಬಿಕ್ಕಟ್ಟು ವೇಳೆ ಭಾರತದ ನಿಲುವು ಸಮರ್ಪಕ

ಮಂಗಳೂರು: ಭಾರತದ ಆರ್ಥಿಕತೆ ವಿಶ್ವದಲ್ಲಿ ಬಲಿಷ್ಠಗೊಳ್ಳುತ್ತಿರುವುದು ಒಂದೆಡೆಯಾದರೆ ವಿವಿಧ ಜಾಗತಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಭಾರತವು ಯಾರ ಪರ ನಿಲ್ಲದೆ ಸಾಂದರ್ಭಿಕವಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ನಿವೃತ್ತ ರಾಯಭಾರಿ ಅಶೋಕ್‌ ಸಜ್ಜನ್ಹರ್‌ ಹಾಗೂ ರಕ್ಷಣಾ ಸಚಿವಾಲಯದ ಸಲಹೆಗಾರ ನಿವೃತ್ತ ಲೆ| ಜ| ವಿನೋದ್‌ ಖಂಡಾರೆ ಅವರ ಒಟ್ಟು ಅಭಿಪ್ರಾಯಗಳಿವು.

ಮಂಗಳೂರು ಲಿಟ್‌ಫೆಸ್ಟ್‌ 6ನೇ ಆವೃತ್ತಿಯಲ್ಲಿ ಶನಿವಾರ ಅವರು “ಬದಲಾಗುತ್ತಿರುವ ನೂತನ ಜಾಗತಿಕ ವ್ಯವಸ್ಥೆಯ ಆಖ್ಯಾನದಲ್ಲಿ ಭಾರತ ಯಾಕೆ ಮಹತ್ವ ಹೊಂದಿದೆ’ ಎಂಬ ವಿಚಾರವಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು.

ರಷ್ಯಾ-ಯುಕ್ರೇನ್‌ ಯುದ್ಧವಿರಲಿ, ಹಮಾಸ್‌-ಇಸ್ರೇಲ್‌ ಸಮರವಿರಲಿ ಭಾರತ ಸೂಕ್ತ ನಿಲುವು ಪ್ರದರ್ಶಿಸಿದೆ. ಹಿಂಸೆಗೆ ನಾವು ಬೆಂಬಲಿಸುವುದಿಲ್ಲ; ಹಾಗೆಂದು (ಕಡಿಮೆ ಬೆಲೆಯಲ್ಲಿ ತೈಲ ಖರೀದಿ ಮೂಲಕ) ರಷ್ಯಾವನ್ನು ಭಾರತ ಪೋಷಿಸಬಾರದು ಎಂಬ ಯುರೋಪಿಯನ್ನರ ಉಪದೇಶವನ್ನು ಸಹಿಸಲಾರೆವು, ಜಾಗತಿಕ ಸ್ಥಿತಿಗತಿ, ನಮ್ಮ ದೇಶದ ಹಿತವನ್ನು ಗಮನಿಸಿಕೊಂಡು ನಮ್ಮ ನಿಲುವು ವ್ಯಕ್ತಪಡಿಸುವ ಸ್ವಾತಂತ್ರ್ಯ ನಮಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ ಎಂದರು.

ಹಮಾಸ್‌-ಇಸ್ರೇಲ್‌ ವಿಚಾರದಲ್ಲೂ ನಾವು ಭಯೋತ್ಪಾದನೆಯಿಂದ ತೊಂದರೆಗೀಡಾದವರು, ಹಾಗಾಗಿ ಉಗ್ರ ಚಟುವಟಿಕೆಗಳಿಗೆ ಬೆಂಬಲವಿಲ್ಲ, ಇಸ್ರೇಲ್‌ನೊಳಗೆ ನುಸುಳಲು ಹಮಾಸ್‌ ಸುರಂಗ ತೋಡಿರುವುದನ್ನು ವಿರೋಧಿಸಲೇಬೇಕಾಗುತ್ತದೆ. ಹಾಗೆಂದು ಮುಗ್ಧಜೀವಗಳು ಸಾಯುವುದನ್ನು ಸಮರ್ಥಿಸಿಕೊಳ್ಳ ಲಾಗದು. ಬದಲಾಗುವ ಪರಿಸ್ಥಿತಿಗಳಿಗನುಗುಣವಾಗಿ ನಮ್ಮ ನಿಲುವನ್ನು ಹೊಂದಿರುವದು ಸರಿಯಾಗಿದೆ ಎಂದರು.

ನವ ಭಾರತದ
ಆರ್ಥಿಕತೆಯ ಪ್ರಭಾವ
ಭಾರತ ಜಾಗತಿಕವಾಗಿ ಅರ್ಥಿಕವಾಗಿ ಪ್ರಬಲಗೊಳ್ಳುತ್ತಿದ್ದು, 4 ಶತಕೋಟಿ ಡಾಲರ್‌ ಆರ್ಥಿಕತೆಯಾಗಿದೆ. ಈ ದಶಕದೊಳಗೆ 3ನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ, ವಿಶ್ವಬ್ಯಾಂಕ್‌, ಐಎಂಎಫ್‌ ಭಾರತದ ಸಾಧನೆಯನ್ನು ಶ್ಲಾಘಿಸಿವೆ, ಹಾಗಾಗಿ ಸಹಜವಾಗಿ ಈಗ ಭಾರತದ ಧ್ವನಿಯನ್ನು ಜಗತ್ತು ಆಲಿಸತೊಡಗಿದೆ ಎಂದು ಅಶೋಕ್‌ ಸಜ್ಜನ್ಹರ್‌ ವಿಶ್ಲೇಷಿಸಿದರು.ಪುದುಚೇರಿ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ| ನಂದಕಿಶೋರ್‌ ಕಲಾಪ ನಿರ್ವಹಿಸಿದರು.

ಮಾಲ್ಡೀವ್ಸ್‌ ಪಾಠ ಕಲಿಯಲಿದೆ
ಚೀನ ಏಷ್ಯಾ ಪ್ರದೇಶದಲ್ಲಿ ಹಾಗೂ ಅಂತಿಮವಾಗಿ ಜಗತ್ತಿನಲ್ಲೇ ಶಕ್ತಿಶಾಲಿಯಾಗಿ ಹೊರಹೊಮ್ಮುವ ಪ್ರಬಲ ಆಕಾಂಕ್ಷಿಯಾಗಿದೆ. ಅದು ಶ್ರೀಲಂಕಾ, ಬಾಂಗ್ಲಾದೇಶದಂತಹ ಸಣ್ಣಪುಟ್ಟ ರಾಷ್ಟ್ರಗಳಿಗೆ ನೆರವು ನೀಡುವ ನೆಪದಲ್ಲಿ ಅವರ ಸಾರ್ವಭೌಮತ್ವವನ್ನು ಕಬಳಿಸುತ್ತದೆ, ಇದು ಶೀಘ್ರದಲ್ಲೇ ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ಗೂ ಮನದಟ್ಟಾಗಲಿದೆ ಎಂದು ಲೆ|ಜ| ವಿನೋದ್‌ ಖಂಡಾರೆ ಹೇಳಿದರು.

ಭಾರತದ ನೆರೆಹೊರೆಯ ವಿಚಾರದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭಾರತ ಸಾಮಾನ್ಯವಾಗಿ ನೆರೆಯ ದೇಶಗಳಿಗೆ ಎಷ್ಟೇ ಸಹಾಯ ಮಾಡಿದರೂ ಅವರ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ, ಹಾಗಾಗಿ ಮಾಲ್ದೀವ್ಸ್‌ ವಿಚಾರದಲ್ಲೂ ನಮ್ಮ ನಿರ್ಲಿಪ್ತ ಧೋರಣೆಯನ್ನು ಮುಂದುವರಿಸುವುದು ಸೂಕ್ತ ಎಂದರು.

ಟಾಪ್ ನ್ಯೂಸ್

1-HDK

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

Rajiv-Kumar

Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ

033

Urmila Matondkar To Jayam Ravi.. ಈ ವರ್ಷ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು ಜೋಡಿಗಳಿವು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು

ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

Mangaluru: ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ

Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ

Mangaluru: “ಜನಸಂಖ್ಯಾ ಲಾಭಾಂಶ’ ಸದ್ಬಳಕೆಯಾಗಲಿ: ನ್ಯಾ| ಅಬ್ದುಲ್‌ ನಜೀರ್‌

Mangaluru: “ಜನಸಂಖ್ಯಾ ಲಾಭಾಂಶ’ ಸದ್ಬಳಕೆಯಾಗಲಿ: ನ್ಯಾ| ಅಬ್ದುಲ್‌ ನಜೀರ್‌

Gulf Medical University: ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕಾರ

Gulf Medical University: ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕಾರ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-HDK

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.