Ayodhya Ram Mandir: ರಘುರಾಮನ ಅಯೋಧ್ಯಾಗಮನ; ಶತಶತಮಾನಗಳ ಕಾಯುವಿಕೆಗೆ ಪೂರ್ಣವಿರಾಮ


Team Udayavani, Jan 22, 2024, 10:37 AM IST

ram

ಜನವರಿ 22 ಇಡೀ ಹಿಂದೂ ಸಮಾಜವೇ ಸಂತಸ ಪಡುವ ಶುಭ ದಿನ. ಅಯೋಧ್ಯೆಯ ಪುಣ್ಯ ಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮ, ರಘುನಂದನ ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠೆಯಾಗುತ್ತಿರುವುದು ಹಿಂದೂ ಬಾಂಧವರಿಗೆ ಸಂಭ್ರಮವಲ್ಲದೆ ಇನ್ನೇನು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಕನಸು ನಿನ್ನೆ ಮೊನ್ನೆಯದ್ದಲ್ಲ. ಶತಮಾನಗಳಿಂದ ರಾಮ ಜನ್ಮಭೂಮಿಯ ಹೋರಾಟದಲ್ಲಿ ಅದೆಷ್ಟೋ ಕರಸೇವಕರು, ರಾಮಭಕ್ತರು ಪ್ರಾಣವನ್ನು ಒತ್ತೆ ಇಟ್ಟು ಹೋರಾಡಿದ್ದಾರೆ. ಅಂದು ಅಯೋಧ್ಯೆಗಾಗಿ ಕರಸೇವಕರ ಹೋರಾಟ ಕೇವಲ ರಾಮನಿಗಾಗಿ ಇತ್ತೇ  ಹೊರತು ತಮ್ಮ ಸ್ವಾರ್ಥಕ್ಕಾಗಲಿ, ರಾಜಕೀಯ ಲಾಭಕ್ಕಾಗಲಿ ಇರಲಿಲ್ಲ. ರಾಮನ ಜನ್ಮಸ್ಥಳವನ್ನು ಪುನಃ ರಾಮನಿಗೆ ದೊರಕಿಸಿಕೊಡುವುದೊಂದೇ ರಾಮ ಭಕ್ತರ ಮೂಲಮಂತ್ರವಾಗಿತ್ತು. ನಿಸ್ವಾರ್ಥ ಭಾವನೆಯಿಂದ ಜೀವವನ್ನು ರಾಮನಿಗೆಂದೇ ಮುಡಿಪಾಗಿಟ್ಟ ಅವರೆಲ್ಲರ ತ್ಯಾಗ ಬಲಿದಾನ ಅವಿಸ್ಮರಣೀಯ. ಇವೆಲ್ಲದರ ಫಲವಾಗಿ ಮತ್ತೆ ರಾಮ ತನ್ನ ಜನ್ಮಭೂಮಿಯಲ್ಲೇ ನೆಲೆಸುವಂತಾಗಿದೆ.

ಹೀಗೆ ಕಳೆದ ಕೆಲ ದಿನಗಳಿಂದ ದೇಶದ ಮೂಲೆ ಮೂಲೆಯಲ್ಲಿ ರಾಮನ ಸ್ಮರಣೆಯನ್ನು ಮಾಡಲಾಗುತ್ತಿದೆ. ಎಲ್ಲೆಲ್ಲೂ ರಾಮ ಮಂತ್ರ. ಪ್ರತಿ ಅಂಗಡಿಯಲ್ಲೂ ರಾಮನ ಚಿತ್ರವಿರುವ ಕೇಸರಿ ಧ್ವಜ. ಬೀಸೋ ಗಾಳಿಗೆ ಮೆಲ್ಲನೆ ಹಾರುವ ಬಾವುಟವನ್ನು ನೋಡಿದರೆ ಮನದಲ್ಲಿ ಏನೋ ಒಂದು ಭಕ್ತಿಯ ಭಾವ. ಎಲ್ಲೆಲ್ಲೂ ರಾಮ್ ಜೈ ಜೈ ರಾಮ್ ಹಾಡುಗಳು. ಹಳ್ಳಿ ಪ್ರದೇಶಗಳಲ್ಲಂತೂ ಸಣ್ಣಸಣ್ಣ ಗೂಡಂಗಡಿಯ ಬಳಿ ಕುಳಿತು ರಾಮ ಮಂದಿರದ ಕುರಿತಾಗಿಯೇ ಚರ್ಚಿಸುತ್ತಿರುವ ಜನರು. ಇನ್ಸ್ಟಾಗ್ರಾಮ್, ಫೇಸ್ ಬುಕ್ ತೆರೆದರೆ ಸಾಕು ಸಾಲು ಸಾಲು ರಾಮನ ಕುರಿತಾದ ವಿಡಿಯೋಗಳು, ವಾಟ್ಸಾಪ್ ನಲ್ಲಂತೂ “ಮೇರೇ ರಾಮ್ ಆಯೇಂಗೆ “, “ಹಮ್ ಕಥಾ ಸುನಾತೆ ” ಪದ್ಯಗಳು. ರಾಮನ ವ್ಯಕ್ತಿತ್ವವೇ ಅಂತಹದ್ದು. ಎಲ್ಲರಿಗೂ ಬೇಗ ಹತ್ತಿರವಾಗಬಲ್ಲ, ಎಲ್ಲರ ಮನಸ್ಸಿನಲ್ಲಿ ಚಿರಕಾಲ ಇರಬಲ್ಲ. ಪ್ರಭು ಶ್ರೀರಾಮನಿಂದ ಕಲಿಯಬೇಕಾದ ಗುಣಗಳು ಸಾಕಷ್ಟಿವೆ. ಗುಣಗಳ ಗಣಿ ಶ್ರೀರಾಮಚಂದ್ರನ ವ್ಯಕ್ತಿತ್ವ ನೋಡಿ ಕಲಿತರೆ ಎಂತಹ ಕಷ್ಟಗಳಿಂದಲೂ ಪಾರಾಗಬಹುದು.

ಕಾಲೇಜಿನಲ್ಲೂ ಹತ್ತು ದಿನಗಳ ಕಾಲ ರಾಮೋತ್ಸವ ಎಂಬ ಸರಣಿ ಕಾರ್ಯಕ್ರಮವನ್ನು ಆಚರಿಸಲಾಗಿತ್ತು. 10 ದಿನ ರಾಮ ಭಜನೆ, ರಾಮತಾರಕ ಮಂತ್ರ ಹಾಗೂ ಪ್ರತಿ ದಿನ ಒಂದೊಂದು ವಿಷಯದ ಕುರಿತಾದ ಪ್ರಸ್ತುತಿ. ಈ ಮೂಲಕ ರಾಮನ ಆದರ್ಶ ಗುಣಗಳ ಬಗ್ಗೆ ಆಳವಾಗಿ ಅರಿವಾಯಿತು. ಈಗ ರಾಮನ ಮಂತ್ರಗಳು ಬಾಯಿ ಪಾಠವಾಗಿಬಿಟ್ಟಿದೆ. ರಾಮ ರಾಮ ಅನ್ನುವ ಎರಡಕ್ಷರವೇ ಮನಸ್ಸಿನಲ್ಲಿ ಉಳಿದಿದೆ.

ಮೊನ್ನೆ ಹೀಗೆ ಕಾಲೇಜಿನಿಂದ ಮನೆಗೆ ಬರುತ್ತಿದ್ದೆ. ಬಸ್ಸಿನಲ್ಲಿ ಕುಳಿತಿದ್ದ ಜನ ತಮ್ಮ ಜಂಗಮವಾಣಿಯನ್ನು ನೋಡುತ್ತಿದ್ದಾಗ ಬರಿ ರಾಮನ ಹಾಡುಗಳೇ ಕಿವಿಯನ್ನಪ್ಪಳಿಸುತ್ತಿದ್ದವು. ಸೀಟ್ ನಲ್ಲಿ ಕುಳಿತಿದ್ದ ವಯಸ್ಕರೊಬ್ಬರು ತನ್ನ ಪಕ್ಕದಲ್ಲಿದ್ದವನಲ್ಲಿ “ಅಂತೂ ಆಯ್ತಪ್ಪ ರಾಮ ಮಂದಿರ. ನಾನು ನನ್ನ ಜೀವನದಲ್ಲಿ ನೋಡುತ್ತೇನೋ ಇಲ್ಲವೋ ಎಂದುಕೊಂಡಿದ್ದೆ. ಕೊನೆಗೂ ರಾಮ ಕಣ್ಬಿಟ್ಟ. ನಮ್ಮ ನಂಬಿಕೆಯನ್ನು ಸುಳ್ಳು ಮಾಡಲಿಲ್ಲ” ಎಂದೆಲ್ಲಾ ಸಂಭ್ರಮದ ನುಡಿಗಳನ್ನಾಡುತ್ತಿದ್ದರು. ಅವರ ಮಾತನ್ನು ಕೇಳಿದ ನನಗೆ, ಆ ಜೀವ ರಾಮಮಂದಿರ ನಿರ್ಮಾಣವಾಗಲು ಎಷ್ಟೊಂದು ಕಾತುರದಿಂದ ಕಾದಿರಬಹುದು ಅನಿಸಿತು.

ಸಂಜೆ ಮನೆಗೆ ಬಂದಾಗ ಅಮ್ಮ ಮನೆ ಕ್ಲೀನ್ ಮಾಡುತ್ತಿದ್ದರು. ಆಸಕ್ತಿಯಿಂದ ಒಂದ್ ಪ್ರಶ್ನೆ ಕೇಳ್ದೆ. “ಏನಮ್ಮಾ ಮನೆ ಕ್ಲೀನ್ ಮಾಡ್ತಾ ಇದ್ದೀರಾ? ನನ್ಗೆ ಹೇಳದೆ ಏನಾದ್ರು ಸ್ಪೆಷಲ್ ಇದ್ಯಾ” ಅಂತ. ಅದಕ್ಕೆ ಅಮ್ಮ “ಸ್ಪೆಷಲ್ ಏನಿಲ್ಲ. ರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆಯಾಗ್ತಿದೆ. ಮಂತ್ರಾಕ್ಷತೆ ಮನೆ ಮನೆಗೆ ಬರ್ತಿದೆ. ಅದರ ಜೊತೆ ರಾಮನೂ ಬರಬಹುದು. ಮನೆ ಗಲೀಜು ಆಗಿದ್ದರೆ ರಾಮ ಹೇಗಮ್ಮ ಒಳಗೆ ಬರ್ತಾನೆ” ಎಂದರು. ಅಮ್ಮನಿಗೆ ರಾಮನ ಬಗೆಗಿರುವ ಮುಗ್ಧ ಭಕ್ತಿ ಅವಳ ಮಾತಿನಲ್ಲಿ ಕಾಣಿಸ್ತು. ಒಂದು ವಾರ ಮುಂಚೆನೇ ಜನವರಿ 22ಕ್ಕೆ ಉಪವಾಸ ಮಾಡಬೇಕೆಂದು ಹೇಳಿದ್ದರು. ಇದೆಲ್ಲಾ ನೋಡಿ ಓರ್ವ ಜನಸಾಮಾನ್ಯನ ಮೇಲೆ ರಾಮನ ವ್ಯಕ್ತಿತ್ವ ಎಷ್ಟು ಪ್ರಭಾವ ಬೀರಿರಬಹುದು ಅನಿಸಿತು.

ಎಲ್ಲಾ ಹಿಂದೂ ಬಾಂಧವರ ಆಶಯಯಂತೆ ಇಂದು ರಾಮ ಜನ್ಮಭೂಮಿಯಲ್ಲಿ  ರಾಮ ಮಂದಿರ ನಿರ್ಮಾಣವಾಗಿದೆ. ರಾಮ ಭಕ್ತರ ಕಾಯುವಿಕೆಗೆ ಪೂರ್ಣವಿರಾಮ ದೊರೆತಿದೆ. ಪುಣ್ಯ ಭೂಮಿಯಲ್ಲಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮಲಲ್ಲಾನ ಮೂರ್ತಿ ತಲೆ ಎತ್ತಿದೆ. ಅಯೋಧ್ಯೆಯಲ್ಲಿ ಸಾಲು ಸಾಲು ದೀಪಗಳು ಪ್ರಜ್ವಲಿಸಿದೆ. ಪ್ರಭು ಶ್ರೀರಾಮ ಎಲ್ಲರಿಗೂ ಒಳಿತನ್ನು ಮಾಡಲಿ. ಧರ್ಮದ ರಕ್ಷಣೆಯನ್ನು ಮಾಡಲಿ. ಜೈ ಶ್ರೀ ರಾಮ್….

ಲಾವಣ್ಯ. ಎಸ್.

ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.