Ayodhya ram mandir: ರಾಮನಗರಕ್ಕೂ ಉಂಟು ರಾಮನ ನಂಟು


Team Udayavani, Jan 22, 2024, 10:55 AM IST

Ayodhya ram mandir: ರಾಮನಗರಕ್ಕೂ ಉಂಟು ರಾಮನ ನಂಟು

ರಾಮನಗರ: ಅಯೋಧ್ಯೆಯಲ್ಲಿ ಹಲವು ವರ್ಷಗಳ ಬಳಿಕ ರಾಮಮಂದಿರ ತಲೆ ಎತ್ತುತಿದೆ. ರಾಮಭಕ್ತರು ಅತ್ಯಂತ ಸಂತಸದಿಂದ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ. ಎಲ್ಲೆಡೆ ರಾಮನ ಜಪ, ರಾಮನಾಮ ಸ್ಮರಣೆ ನಡೆಯುತ್ತಿದ್ದು, ಶ್ರೀರಾಮ, ಸೀತಾ, ಲಕ್ಷ್ಮಣ, ಆಂಜನೇಯ ಸಮೇತ ಜಿಲ್ಲೆಯ ಹಲವೆಡೆ ಭೇಟಿ ನೀಡಿದ್ದ ಎಂಬ ನಂಬಿಕೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿದ್ದು, ಈ ಸಂಬಂಧ ದಂತಕತೆಗಳು ಇಂದಿಗೂ ಚಾಲ್ತಿಯಲ್ಲಿವೆ.

ರಾಮನಿಂದ ಪೂಜೆಗೊಳಪಟ್ಟ ಅಪ್ರಮೇಯ: ದೊಡ್ಡಮಳೂರಿನ ಶೀ ಅಪ್ರಮೇಯಸ್ವಾಮಿ ದೇವಾಲಯಕ್ಕೂ ರಾಮಾಯಣಕ್ಕೂ ನಂಟಿದ್ದು, ಶ್ರೀರಾಮ ಅಪ್ರಮೇಯಸ್ವಾಮಿಗೆ ಪೂಜೆ ಸಲ್ಲಿಸಿದ್ದರಿಂದ ಈ ದೇವರನ್ನು ಶ್ರೀರಾಮಾ ಪ್ರಮೇಯ ಎಂದು ಕರೆಯಲಾಗುತ್ತದೆ. ಈ ದೇವಾಲಯ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು ಪ್ರತಿ ವರ್ಷ ಏಪ್ರೀಲ್‌ ಅಥವಾ ಮೇ ತಿಂಗಳಲ್ಲಿ ದೇವರ ರಥೋತ್ಸವ ನಡೆಯಲಿದ್ದು, ರಥೋತ್ಸವದ ಸಮಯದಲ್ಲಿ ಸೂರ್ಯನ ಮೊದಲ ರಶ್ಮಿ ಅಪ್ರಮೇಯಸ್ವಾಮಿಯ ಪಾದವನ್ನು ಸ್ಪರ್ಶಿಸುತ್ತದೆ.

ರಾಮ ಕಾಕಾಸುರನ್ನು ಸಂಹಾರ ಮಾಡಿದ್ದು ರಾಮ ದೇವರ ಬೆಟ್ಟದಲ್ಲಿ: ರಾಮನಗರದಲ್ಲಿರುವ ಶ್ರೀರಾಮಗಿರಿ ಜಿಲ್ಲೆಯ ಪ್ರಮುಖ ರಾಮದೇವರ ತಾಣ ಗಳಲ್ಲಿ ಒಂದು. ಈ ಬೆಟ್ಟದಲ್ಲಿ ಶ್ರೀರಾಮಚಂದ್ರ ಸೀತೆ ಲಕ್ಷ್ಮಣ ಹನುಂತನ ಸಮೇತವಾಗಿ ಕೆಲದಿನಗಳ ಕಾಲ ವಾಸವಿದ್ದ ಎಂಬ ಉಲ್ಲೇಖ ಪುರಾಣೇತಿಹಾಸಗಳಲ್ಲಿವೆ. ಈ ಬೆಟ್ಟದ ಮೇಲೆ ಸೀತೆ ಸ್ನಾನ ಮಾಡಲೆಂದೇ ನಿರ್ಮಾಣಗೊಂಡ ಸೀತಾಕೊಳವಿದ್ದು, ಇದರಲ್ಲಿ ಬಿದ್ದವರು ಬದುಕಿ ಬಂದ ಉದಾಹರಣೆಯೇ ಇಲ್ಲವಾಗಿದೆ.

ಇನ್ನು ಕಾಕಾಸುರ ಈ ಬೆಟ್ಟ ದಲ್ಲಿ ಸೀತೆಯನ್ನು ಕುಟುಕಿದ್ದರಿಂದ ಕುಪಿತಗೊಂಡ ರಾಮ ಕಾಕಾಸುರನನ್ನು ಸಂಹಾರ ಮಾಡಿದ್ದು, ಇಂದಿಗೂ ವಿಶಾಲವಾದ ಈ ಬೆಟ್ಟದ ಸುತ್ತಾ ಒಂದೇ ಒಂದು ಕಾಗೆ ಹಾರಾಡು ವುದಿಲ್ಲ. ಈ ಬೆಟ್ಟದಲ್ಲಿ ದಕ್ಷಿಣ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿದೆ.

ಮೊದಲು ಕ್ಲೋಸ್‌ ಪೇಟೆ ಎಂದು ಇದ್ದ ಹೆಸರನ್ನು ಕೆಂಗಲ್‌ ಹನುಮಂತಯ್ಯ ಅವರು ರಾಮನಗರ ಎಂದು ಬದಲಾವಣೆ ಮಾಡಿದ್ದರ ಹಿಂದೆ ಶ್ರೀರಾಮನ ಕಥೆಯೇ ಕಾರಣ.

ಹನುಮಂತನಿಗೂ ಉಂಟು ನಂಟು: ಜಿಲ್ಲೆಯಲ್ಲಿ ರಾಮಭಕ್ತ ಹನುಂತನ ಜೊತೆಗೂ ಸಾಕಷ್ಟು ಸಂಬಂಧವಿದೆ. ಹನುಮಂತ ಲಕ್ಷ್ಮಣನನ್ನು ಉಳಿಸಲು ಸಂಜೀವಿನಿ ಪರ್ವತವನ್ನು ಎತ್ತಿಕೊಂಡು ಹೋಗುವಾಗ ಕಣ್ವ ಜಲಾಶಯದ ಸಮೀಪ ಇರುವ ಕಂಬದರಾಯನ ಗುಡ್ಡೆಯಲ್ಲಿ ಮುಗಿಲೆತ್ತರಕ್ಕೆ ಬೆಳೆಯುತ್ತಿದ್ದ ಕಲ್ಲೊಂದು ಹನುಂತನ ಕಾಲಿಗೆ ತಾಕಿ ಛಿದ್ರವಾಯಿತು. ಈ ಘಟನೆಯಲ್ಲಿ ಹನು ಮಂತನ ಕಾಲಿಗೆ ಪೆಟ್ಟಾಯಿತು. ಈ ಸಂದರ್ಭದಲ್ಲಿ ಕೈಯ ಲ್ಲಿದ್ದ ಸಂಜೀವಿನ ಪರ್ವತ ಅಲುಗಾಡಿ ಸಂಜೀವಿನ ಗಿಡದ ತುಂಡೊಂದು ಕೆಳಗೆ ಬಿತ್ತೆಂಬ ನಂಬಿಕೆ ಇದ್ದು, ದೇವರ ಹೊಸಹಳ್ಳಿ ಗ್ರಾಮದಲ್ಲಿ ಪ್ರಸಿದ್ದ ಸಂಜೀವರಾಯ ಸ್ವಾಮಿ ದೇವಾಲಯವನ್ನು ನಿರ್ಮಿಸ ಲಾಗಿದೆ. ಈ ದೇವ ರಿಗೆ ಪೂಜೆ ಸಲ್ಲಿಸಿದರೆ ಎಂತಹ ರೋಗವಾದರೂ ವಾಸಿ ಯಾ ಗುತ್ತದೆ ಎಂಬ ನಂಬಿಕೆ ಇದ್ದು, ಕಾಲಿಗೆ ಪೆಟ್ಟಾಗಿದ್ದರಿಂದ ಹನುಮಂತನ ಕೆಂಗಲ್‌ ಬಳಿ ಪಾದಸ್ಪರ್ಶ ಮಾಡಿ ಮುಂದೆ ಹೋದ ಎಂದು, ನೋವಾಗಿದ್ದರಿಂದ ಹನುಮಂತನ ಮುಖ ಕೆಂಪಾಗಿತ್ತು ಎಂಬ ಕಥೆ ಇದ್ದು, ಇಂದಿಗೂ ಇಲ್ಲಿನ ಹನುಮಂತ ಕೆಂಪು ಕಲ್ಲಿನಿಂದ ಕಡೆಯಲ್ಪಟ್ಟಿದ್ದಾನೆ.

ಜಿಲ್ಲೆಯ ನೂರಾರು ಗ್ರಾಮದಲ್ಲಿವೆ ರಾಮಮಂದಿರ: ಮರ್ಯಾದ ಪುರುಷ ಶ್ರೀರಾಮ ಜಿಲ್ಲೆಯ ಸಾಕಷ್ಟು ಮಂದಿಯ ಆರಾಧ್ಯ ದೈವ. ಇಂದಿಗೂ ಜಿಲ್ಲೆಯ ಹಲವು ಗ್ರಾಮಗಳಲ್ಲಿ ರಾಮಮಂದಿರಗಳು ಇವೆ. ಗ್ರಾಮೀಣ ಭಾಗ ದಲ್ಲಿ ಜನತೆ ಈ ಹಿಂದೆ ರಾಮಮಂದಿರದಲ್ಲಿ ಪ್ರತಿವಾರ ಭಜನೆ ಮಾಡುತ್ತಿದ್ದರು. ಇನ್ನೂ ಕೆಲ ಗ್ರಾಮಗಳಲ್ಲಿ ಪ್ರತಿ ಶನಿವಾರ ಇಡೀ ಗ್ರಾಮದ ಸುತ್ತಾ ರಾಮದೇವರ ಪೋಟೋ ಹಿಡಿದುಕೊಂಡು ಭಕ್ತರು ದೊಡ್ಡ ದೀಪದೊಂದಿಗೆ ರಾಮಭಜನೆ ಮಾಡುತ್ತಾ ಗ್ರಾಮದ ಸುತ್ತಾ ಪ್ರದಕ್ಷಿಣೆ ಬರುತ್ತಿದ್ದರು. ಕೆಲ ರಾಮಮಂದಿರಗಳಲ್ಲಿ ಇಂದಿಗೂ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆಯಾದರೂ, ಕೆಲ ಗ್ರಾಮಗಳಲ್ಲಿ ರಾಮಮಂದಿರ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ರಾಮನಗರದಲ್ಲಿ ಜಟಾಯು ರಕ್ಕೆಗೆ ಸಂಸ್ಕಾರ : ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿರುವ ಶ್ರೀರಾಮ ದೇವಾಲಯ ಸಾವಿರಾರು ವರ್ಷಗಳಷ್ಟು ಹಳೆಯದಾಗಿದ್ದು, ಈ ದೇವಾಲಯವನ್ನು ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಯಿತು ಎಂದು ಉಲ್ಲೇಖಗಳಿವೆ. ಈ ದೇವಾ ಲಯದ ಸಮೀಪ ಬಿಳಿಯ ಬೂದಿ ರೂಪದ ಮಣ್ಣು ಸಿಗುತ್ತಿದ್ದು, ಇದನ್ನು ಈ ಭಾಗದ ಜನತೆ ಯಾವುದೇ ಆರೋಗ್ಯ ಸಮಸ್ಯೆಯಾದರೆ ಮನೆಗೆ ತೆಗೆದು ಕೊಂಡು ಹೋಗಿ ಪೂಜಿಸಿ ಹಚ್ಚಿಕೊಳ್ಳುತ್ತಿದ್ದರು. ರಾಮಾಯಣ ಕಾಲದಲ್ಲಿ ಸೀತಾ ನ್ವೇಷಣೆಗೆ ಹೊರಟ ಶ್ರೀರಾಮನಿಗೆ ಈ ಜಾಗದಲ್ಲಿ ಜಟಾಯುವಿನ ರೆಕ್ಕೆಯೊಂದು ಸಿಕ್ಕಿದ್ದು, ಅದರನ್ನು ಇಲ್ಲಿ ಸಂಸ್ಕಾರ ಮಾಡಿದ ಎಂಬ ಪ್ರತೀತಿ ಇದೆ. ಈ ದೇವಾಲಯದ ರಾಮಭಕ್ತರ ಪಾಲಿನ ಪವಿತ್ರ ಸ್ಥಾನಗಳಲ್ಲಿ ಒಂದಾಗಿದೆ.

ರಾಮದೇವರ ನೀರಿನ ಹೊಂಡಗಳು : ಜಿಲ್ಲೆಯ ಮತ್ತೂಂದು ಪ್ರಸಿದ್ಧ ರಾಮಕ್ಷೇತ್ರವೆಂದರೆ ಚನ್ನಪಟ್ಟಣ ತಾಲೂಕಿನ ವಿರು ಪಾಕ್ಷಿಪುರ ಗ್ರಾಮದ ಹೊರವಲಯದಲ್ಲಿರುವ ಶ್ರೀಗವಿರಂಗಸ್ವಾಮಿ ಬೆಟ್ಟ. ಕಬ್ಟಾಳು ಮಾರ್ಗದಲ್ಲಿರುವ ಈ ಬೆಟ್ಟದಲ್ಲಿ ರಾಮದೇವರ ಸೋಣೆ( ನೀರಿನ ಗುಂಡಿ) ಎಂದು ಸ್ಥಳೀಯರು ಕರೆಯುವ ನೀರಿನ ಗುಂಡಿಯೊಂದಿದ್ದು, ಇದರಲ್ಲಿ ಬೇಸಿಗೆಯಲ್ಲಿ ಸಿಹಿಯಾದ ನೀರು ದೊರೆಯುತ್ತದೆ. ಇಲ್ಲಿ ಶ್ರೀರಾಮನಿಗೆ ನೀರು ಕುಡಿಯಲು ದಾಹವಾದಾಗ ಬಾಣ ಹೂಡಿ ಗುಂಡಿಯನ್ನು ನಿರ್ಮಿಸಿದನೆಂಬ ಪ್ರತೀತಿ ಇದ್ದು, ಇಲ್ಲಿನ ಜನತೆ ಈ ಹೊಂಡವನ್ನು ರಾಮದೇವರ ಸೊಣೆ ಎಂದು ಕರೆಯುತ್ತಾರೆ.

ಸು.ನಾ.ನಂದಕುಮಾರ್‌

 

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

10-ramanagara

Ramanagara: ಬೆಂ.-ಮೈ. ಎಕ್ಸ್‌ ಪ್ರೆಸ್‌ವೇ ಬಿಡದಿ ಎಕ್ಸಿಟ್‌ ಬಂದ್‌

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

3-bank

Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.