![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 25, 2024, 12:22 AM IST
ಮೆಲ್ಬರ್ನ್: ರಷ್ಯಾದ ಡ್ಯಾನಿಲ್ ಮೆಡ್ವೆಡೇವ್ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ನಲ್ಲಿ ಸೆಣಸಲಿದ್ದಾರೆ.
ಬುಧವಾರದ ಕ್ವಾರ್ಟರ್ ಫೈನಲ್ನಲ್ಲಿ ಡ್ಯಾನಿಲ್ ಮೆಡ್ವೆಡೇವ್ ಪೋಲೆಂಡ್ನ ಹ್ಯೂಬರ್ಟ್ ಹುರ್ಕಾಝ್ ವಿರುದ್ಧ 5 ಸೆಟ್ಗಳ ಕಠಿನ ಕಾದಾಟದ ಬಳಿಕ 7-6 (7-4), 2-6, 6-3, 5-7, 6-4 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಇನ್ನೊಂದು ಕ್ವಾರ್ಟರ್ ಫೈನಲ್ನಲ್ಲಿ ಅಲೆಕ್ಸಾಂಡರ್ ಜ್ವೆರೇವ್ ಸ್ಪೇನ್ನ ಕಾರ್ಲೋಸ್ ಅಲ್ಕರಾಜ್ ಆಟವನ್ನು 6-1, 6-3, 6-7 (2-7), 6-4ರಿಂದ ಕೊನೆಗೊಳಿಸಿದರು.
ಡಯಾನಾ ಸಾಧನೆ
ವನಿತೆಯರ ವಿಭಾಗದಲ್ಲಿ ಉಕ್ರೇನ್ನ ಡಯಾನಾ ಯಾಸ್ಟ್ರೆಮ್ಸ್ಕಾ ದಾಖಲೆಯೊಂದನ್ನು ಬರೆದರು. 1978ರ ಬಳಿಕ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಪ್ರವೇಶಿಸಿದ ಮೊದಲ ಅರ್ಹತಾ ಆಟಗಾರ್ತಿ ಎನಿಸಿದರು. ಅಂದು ಕ್ರಿಸ್ಟಿನ್ ಸ್ಟೋರಿ ಈ ಸಾಧನೆಗೈದಿದ್ದರು.
ಡಯಾನಾ ಯಾಸ್ಟ್ರೆಮ್ಸ್ಕಾ ಕ್ವಾರ್ಟರ್ ಫೈನಲ್ನಲ್ಲಿ 19 ವರ್ಷದ ಜೆಕ್ ಆಟಗಾರ್ತಿ ಲಿಂಡಾ ನೊಸ್ಕೋವಾ ಅವರನ್ನು 6-3, 6-4ರಿಂದ ಮಣಿಸಿದರು. ನೊಸ್ಕೋವಾ ಈ ಕೂಟದಲ್ಲಿ ಉಳಿದ ಅತೀ ಕಿರಿಯ ಆಟಗಾರ್ತಿ ಆಗಿದ್ದರು.
“ಸೂಪರ್ ಹ್ಯಾಪ್ಪಿ. ಇತಿಹಾಸ ನಿರ್ಮಿಸಿದ್ದಕ್ಕೆ ಬಹಳ ಖುಷಿ ಆಗುತ್ತಿದೆ. ಸ್ಟೋರಿ ಈ ದಾಖಲೆ ಬರೆಯುವಾಗ ನಾನಿನನ್ನೂ ಜನಿಸಿರಲಿಲ್ಲ. ನನ್ನದು 2000ದ ಇಸವಿ’ ಎಂಬುದಾಗಿ ಡಯಾನಾ ಹೇಳಿದರು. ಈ ಪಂದ್ಯ 38 ಡಿಗ್ರಿ ಸೆಲಿÏಯಸ್ನಷ್ಟು ಬಿಸಿಯಲ್ಲಿ ನಡೆದ ಕಾರಣ ಆಟಗಾರ್ತಿಯರಿಬ್ಬರೂ ಬಹಳ ಬಳಲಿದರು.
ಡಯಾನಾ ಯಾಸ್ಟ್ರೆಮ್ಸ್ಕಾ ಅವರಿನ್ನು ಚೀನದ ಕ್ವಿನ್ವೆನ್ ಜೆಂಗ್ ವಿರುದ್ಧ ಸೆಮಿಫೈನಲ್ ಪಂದ್ಯ ಆಡಲಿದ್ದಾರೆ. ಜೆಂಗ್ ರಷ್ಯಾದ ಅನ್ನಾ ಕಾಲಿನ್ಸ್ಕಯಾ ವಿರುದ್ಧ 6-7 (4-7), 6-3, 6-1 ಅಂತರದ ಗೆಲುವು ಸಾಧಿಸಿದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.