![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 2, 2024, 11:48 AM IST
ನಟ ಜಗ್ಗೇಶ್-ಗುರುಪ್ರಸಾದ್ ಕಾಂಬಿನೇಶನ್ ನಲ್ಲಿ ಈಗಾಗಲೇ ಬಂದಿರುವ ಎರಡೂ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು ಇತಿಹಾಸ. ಈಗ ಇದೇ ಜೋಡಿ ಸುಮಾರು 15 ವರ್ಷಗಳ ನಂತರ ಮತ್ತೆ ಒಂದಾಗಿ ತೆರೆಮೇಲೆ ಹ್ಯಾಟ್ರಿಕ್ ಬಾರಿಸಲು ರೆಡಿಯಾಗಿದೆ.
ಹೌದು, ಜಗ್ಗೇಶ್ – ಗುರು ಜೋಡಿಯ ಬಹು ನಿರೀಕ್ಷಿತ ಸಿನಿಮಾ “ರಂಗನಾಯಕ’ ಬಿಡುಗಡೆಗೆ ಕೌಂಟ್ಡೌನ್ ಶುರುವಾಗಿದೆ. ಇದೇ ಮಾರ್ಚ್ 8ರ ಶಿವರಾತ್ರಿ ಹಬ್ಬದಂದು “ರಂಗನಾಯಕ’ನನ್ನು ಪ್ರೇಕ್ಷಕರ ಮುಂದೆ ತರುವ ಘೋಷಣೆ ಮಾಡಿರುವ ಚಿತ್ರತಂಡ, ಇಂದು ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಲಿದೆ.
“ಗಾಳಿ ತಂಗಾಳಿ, ಕನ್ನಡ ಮಾತಾಡೇ… ನೀರೆ ಜರಿ ನೀರೆ, ಕನ್ನಡದಲ್ಲಿ ಹಾಡೇ…’ ಎಂಬ ವೀಡಿಯೋ ಸಾಂಗ್ ಹರಿಬಿಡಲಿದೆ “ರಂಗ ನಾಯಕ’ ಚಿತ್ರತಂಡ. ಗುರುಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ರೆಟ್ರೋ ಶೈಲಿ ಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಅನೂಪ್ ಸೀಳಿನ್ ಹಾಗೂ ಮುನಿರಾಜು ದನಿ ಯಾಗಿದ್ದಾರೆ.
ಮಾ. 17ರಂದು ಜಗ್ಗೇಶ್ ಹುಟುಹಬ್ಬವಿದೆ. ವಾರಕ್ಕೂ ಮುನ್ನವೇ ಉಡುಗೊರೆಯಾಗಿ ಈ ಚಿತ್ರ ತೆರೆ ಕಾಣಲಿದೆ. ಈಗಾಗಲೇ “ಜೀ ಸ್ಟೂಡಿಯೋಸ್’ ಸಂಸ್ಥೆ “ರಂಗನಾಯಕ’ ಸಿನಿಮಾದ ವಿತರಣಾ ಹಕ್ಕು ಗಳನ್ನು ಪಡೆದುಕೊಂಡಿದ್ದು, ರಾಜ್ಯಾದ್ಯಂತ ಸಿನಿಮಾವನ್ನು ಬಿಡುಗಡೆ ಮಾಡಲಿದೆ.
ಇನ್ನು ಜಗ್ಗೇಶ್-ಗುರುಪ್ರಸಾದ್ ಅವರ ಈ ಕಾಂಬೋ ಸಿನಿಮಾವನ್ನು “ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಎ. ಆರ್. ವಿಖ್ಯಾತ್ ನಿರ್ಮಿಸುತ್ತಿದ್ದಾರೆ. “ವಿಭಿನ್ನ ಕಥಾಹಂದರ, ಜಗ್ಗೇಶ್ ಅವರ ವಿನೂತನ ಗೆಟಪ್, ಅದ್ಧೂರಿ ಸೆಟ್, ಅನೂಪ್ ಸೀಳಿನ್ ಸಂಗೀತ ಎಲ್ಲವೂ “ರಂಗನಾಯಕ’ ಸಿನಿಮಾದ ಪ್ಲಸ್ ಪಾಯಿಂಟ್. ಪ್ರೇಕ್ಷಕರಿಗೆ “ರಂಗನಾಯಕ’ ಭರಪೂರ ಮನರಂಜನೆ ನೀಡಲಿದೆ’ ಎಂಬುದು ನಿರ್ಮಾಪಕರ ವಿಶ್ವಾಸದ ಮಾತು.
ಜಿ.ಎಸ್.ಕಾರ್ತಿಕ ಸುಧನ್
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.