Thalapathy 69: ದಳಪತಿ ವಿಜಯ್ ಕೊನೆಯ ಸಿನಿಮಾಕ್ಕೆ ಅಟ್ಲಿ ಆ್ಯಕ್ಷನ್ ಕಟ್?
ಅಟ್ಲಿ ಸಿನಿಮಾದಲ್ಲಿ ವಿಜಯ್ ಜೊತೆ ಶಾರುಖ್ ?
Team Udayavani, Feb 3, 2024, 4:39 PM IST
ಚೆನ್ನೈ: ದಳಪತಿ ವಿಜಯ್ ಅಧಿಕೃತವಾಗಿ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ತಮ್ಮ ಪಕ್ಷಕ್ಕೆ ‘ತಮಿಳಗ ವೆಟ್ರಿ ಕಳಗಂʼ ಎಂದು ಹೆಸರಿಟ್ಟು ಅದನ್ನು ನೋಂದಾಯಿಸಿದ್ದಾರೆ. ಇತ್ತ ಸಿನಿಮಾರಂಗದಿಂದ ದೂರವಾಗುವುದಾಗಿಯೂ ವಿಜಯ್ ಘೋಷಿಸಿದ್ದಾರೆ.
ಅವರ 69ನೇ ಸಿನಿಮಾವೇ ಅವರ ಕೊನೆಯ ಸಿನಿಮಾವೆಂದು ಅವರು ಅನೌನ್ಸ್ ಮಾಡಿದ್ದಾರೆ. ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವ ನಿಟ್ಟಿನಲ್ಲಿ 2026 ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಆ ಮೂಲಕ ರಾಜ್ಯವನ್ನಾಳುವ ಕನಸನ್ನು ಇಟ್ಟುಕೊಂಡಿದ್ದಾರೆ.
‘Thalapathy 69’ ಸಿನಿಮಾ ವಿಜಯ್ ವೃತ್ತಿ ಬದುಕಿನ ಕೊನೆಯ ಸಿನಿಮಾವೆಂದು ಹೇಳಲಾಗಿದೆ. ಈ ಸಿನಿಮಾಕ್ಕೆ ಈಗಾಗಲೇ ಅವರು ಖ್ಯಾತ ಪ್ರೂಡಕ್ಷನ್ ಸಂಸ್ಥೆ ಜೊತೆ ಸಹಿ ಮಾಡಿಕೊಂಡಿದ್ದಾರೆ. ಆದರೆ ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ಇದನ್ನೂ ಓದಿ: Politics: ಸಿನಿಮಾರಂಗದಿಂದ ರಾಜಕೀಯದತ್ತ ಮುಖಮಾಡಿದ ದಕ್ಷಿಣದ ಖ್ಯಾತ ಕಲಾವಿದರಿವರು..
ಈ ಸಿನಿಮಾವನ್ನು ವಿಜಯ್ ಅವರಿಗೆ ಹ್ಯಾಟ್ರಿಕ್ ಹಿಟ್ ತಂದುಕೊಟ್ಟ ಅಟ್ಲಿ ಕುಮಾರ್ ಅವರು ಮಾಡಲಿದ್ದಾರೆ ಎನ್ನುವ ಮಾತೊಂದು ಕಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ. ‘Thalapathy 69′ ಸಿನಿಮಾ ರಾಜಕೀಯ ಕಥಾಹಂದರವನ್ನು ಒಳಗೊಂಡಿದೆ. ರಾಜಕೀಯ ಎಂಟ್ರಿಯಾದ ಬಳಿಕ ರಾಜಕೀಯ ಪ್ರೇರಿತ ಸಿನಿಮಾವೊಂದು ಬರುವುದು ಒಂದಷ್ಟು ವಿವಾದಗಳಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.
ಈ ಹಿಂದೆ ಅಟ್ಲಿ ವಿಜಯ್ ಅವರೊಂದಿಗೆ ʼತೇರಿ’, ‘ಮೆರ್ಸಲ್’ ಮತ್ತು ‘ಬಿಗಿಲ್’ ಸಿನಿಮಾಗಳನ್ನು ಮಾಡಿದ್ದಾರೆ. ಇತರೆ ನಿರ್ದೇಶಕರಿಗಿಂತ ಅಟ್ಲಿ ವಿಜಯ್ ಅವರ ಸಿನಿಮಾದ ನಾಡಿಮಿಡಿತವನ್ನು ಹೆಚ್ಚಾಗಿ ಅರಿತುಕೊಂಡಿದ್ದಾರೆ. ಇದೇ ಸಿನಿಮಾದಲ್ಲಿ ಅಟ್ಲಿ ಈ ಹಿಂದೆ ಹೇಳಿದಂತೆ ಶಾರುಖ್ – ವಿಜಯ್ ಅವರನ್ನು ಜೊತೆಯಾಗಿ ಸ್ಕ್ರೀನ್ ಮೇಲೆ ತರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಅಟ್ಲಿ ಅವರೇ ವಿಜಯ್ ಅವರ ಕೊನೆಯ ಸಿನಿಮಾವನ್ನು ಡೈರೆಕ್ಟ್ ಮಾಡುತ್ತಾರೋ, ಇಲ್ವೋ ಎನ್ನುವುದರ ಬಗ್ಗೆ ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tollywood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್- ಅದಿತಿ ರಾವ್; ಇಲ್ಲಿದೆ ಫೋಟೋಸ್
Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ವಿರುದ್ಧ FIR
Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು
OTT Release: ಚಿಯಾನ್ ವಿಕ್ರಮ್ ʼತಂಗಲಾನ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.