![18-uv-fusion](https://www.udayavani.com/wp-content/uploads/2024/07/18-uv-fusion-415x249.jpg)
Ullala: ಜೇನುಗೂಡಿಗೆ ಹಿಟ್ ಆದ ಬಾಲ್; ದಾಳಿಗೆ ಕಾಲ್ಕಿತ್ತ ಆಟಗಾರರು
Team Udayavani, Feb 5, 2024, 11:26 AM IST
![3-ullala](https://www.udayavani.com/wp-content/uploads/2024/02/3-ullala-620x372.jpg)
ಉಳ್ಳಾಲ: ಇಲ್ಲಿನ ಒಂಭತ್ತುಕೆರೆ ಸಮೀಪ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟದ ವೇಳೆ ಬ್ಯಾಟ್ಸ್ ಮೆನ್ ಹೊಡೆದ ಚೆಂಡು ಮರದಲ್ಲಿದ್ದ ಜೇನಿನಗೂಡಿಗೆ ಬಿದ್ದ ಪರಿಣಾಮ ಆಟಗಾರರ ಮೇಲೆ ಜೇನುನೊಣಗಳು ದಾಳಿ ನಡೆಸಿ ಕ್ರಿಕೆಟ್ ಗ್ರೌಂಡಿನಿಂದ ಎಲ್ಲರೂ ಓಟಕ್ಕಿತ್ತ ಘಟನೆ ನಡೆದಿದೆ.
ಸೋಮೇಶ್ವರ ಒಂಭತ್ತುಕೆರೆಯ ಅನಿಲ ಕಂಪೌಂಡ್ ಎಂಬಲ್ಲಿ ಸ್ಥಳೀಯರೇ ಆಯೋಜಿಸಿದ ಕ್ರಿಕೆಟ್ ಪಂದ್ಯಾಟ ಭಾನುವಾರ ನಡೆಯುತಿತ್ತು. ಈ ಸಂದರ್ಭ ಬ್ಯಾಟ್ಸ್ ಮೆನ್ ಓರ್ವರು ಹೊಡೆದ ಬಾಲ್ ತೆಂಗಿನಮರದಲ್ಲಿದ್ದ ಜೇನಿನ ಗೂಡಿಗೆ ಬಡಿದಿದೆ. ಗೂಡು ಒಡೆದ ಪರಿಣಾಮ ಜೇನು ನೊಣಗಳು ಬ್ಯಾಟ್ ಮೆನ್ ಸಮೇತ ಆಟಗಾರರ ಮೇಲೆ ದಾಳಿ ನಡೆಸಿದ್ದು, ದಾಳಿಯಿಂದ ತಪ್ಪಿಸಲು ಕ್ರೀಡಾಂಗಣದಲ್ಲಿದ್ದ ಎಲ್ಲರೂ ಓಟಕ್ಕಿತ್ತು ಪಂದ್ಯಾಟವೇ ರದ್ದಾಗುವಂತಾಗಿದೆ.
ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
![18-uv-fusion](https://www.udayavani.com/wp-content/uploads/2024/07/18-uv-fusion-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.