ಹುಬ್ಬಳ್ಳಿ: ಹಸುವಿನ ಕರುವಿಗೆ ಕೃತಕ ಕಾಲು ಯಶಸ್ವಿ ಜೋಡಣೆ


Team Udayavani, Feb 6, 2024, 4:30 PM IST

ಹುಬ್ಬಳ್ಳಿ: ಹಸುವಿನ ಕರುವಿಗೆ ಕೃತಕ ಕಾಲು ಯಶಸ್ವಿ ಜೋಡಣೆ

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ರೈಲುಗೆ ಸಿಲುಕಿ ಹಿಂದಿನ ಕಾಲು ಕಳೆದುಕೊಂಡಿದ್ದ ಆಕಳ ಕರುವಿಗೆ ಕೃತಕ ಕಾಲು ಜೋಡಣೆ ಮೂಲಕ, ಕರು ಮತ್ತೆ ನಾಲ್ಕು ಕಾಲಗಳೊಂದಿಗೆ ನಡೆದಾಡುವಂತೆ ಮಾಡಲಾಗಿದೆ.

ಜೈನ್‌ ಯುವ ಸಂಘಟನೆಯ ಮಹಾವೀರ ಲಿಂಬ್‌ ಸೆಂಟರ್‌ ಕೃತಕ ಕಾಲು ಜೋಡಿಸಿದ್ದು, ಕರು ದತ್ತು ಪಡೆದು ಪೋಷಣೆಗೂ ಮುಂದಾಗಿದೆ. ಇಲ್ಲಿನ ಅಭಿನವ ನಗರದಲ್ಲಿರುವ ವಿಶ್ವಹಿಂದೂ ಪರಿಷದ್‌ ಉತ್ತರ ಪ್ರಾಂತದ ಗೋಶಾಲೆಯಲ್ಲಿ ಆಶ್ರಯ ಪಡೆದಿರುವ ಕರುವಿಗೆ ಸೋಮವಾರ ಕೃತಕ ಕಾಲು ಜೋಡಿಸಲಾಯಿತು.

ಮಹಾವೀರ ಲಿಂಬ್‌ ಕೇಂದ್ರದ ಮಹೇಂದ್ರ ಸಿಂಘಿ ಮಾತನಾಡಿ, ಇಂದು ನಮಗೆ ಹಸುವಿನ ಕರುವಿಗೆ ಕೃತಕ ಕಾಲು ಜೋಡಣೆ ಅವಕಾಶ ಸಿಕ್ಕಿದೆ. ಈ ಹಿಂದೆ ನಾವು ಕುದುರೆಯೊಂದಕ್ಕೆ ಕೃತಕ ಕಾಲು ಜೋಡಣೆ ಮಾಡಿದ್ದೆವು. ಆನೆಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ ಎಂದು ಕೇಳಿದ್ದೆ. ಆದರೆ ಆಕಳ ಕರುವಿಗೆ ಕೃತಕ ಕಾಲು ಜೋಡಣೆ ಇದೇ ಮೊದಲು ಎನ್ನಿಸುತ್ತಿದೆ ಎಂದರು.

ಒಂದು ಕೃತಕ ಕಾಲು ತಯಾರಿಗೆ 7-8 ಸಾವಿರ ರೂ.ಗಳ ವೆಚ್ಚವಾಗುತ್ತದೆ. ದಾನಿಗಳ ನೆರವಿನೊಂದಿಗೆ ಬಡವರಿಗೆ ಉಚಿತವಾಗಿ ಕೃತಕ ಕಾಲು ಜೋಡಣೆ ಮಾಡುತ್ತಿದ್ದೇವೆ. ದಾನಿಗಳು 15 ಸಾವಿರ ರೂ. ನೀಡಿದರೆ 15 ವರ್ಷಗಳವರೆಗೆ ವರ್ಷಕ್ಕೆ ಒಬ್ಬರಿಗೆ ಅವರ ಹೆಸರಲ್ಲಿ ಕೃತಕ ಕಾಲು ಜೋಡಣೆ ಮಾಡಲಾಗುವುದು. ಕೃತಕ ಕಾಲು ಜೋಡಣೆ ಕರುವನ್ನು ದತ್ತು ಪಡೆದು ಅದರ ಪೋಷಣೆಗೆ ಮುಂದಾಗುತ್ತೇವೆ ಎಂದರು.

ಮಹಾವೀರ ಲಿಂಬ್‌ ಕೇಂದ್ರದ ಎಂ.ಎಚ್‌ .ನಾಯ್ಕರ್‌ ಮಾತನಾಡಿ, ಕರು ಜಾರದಂತೆ, ನಡೆದಾಗ ನೋವಾಗದ ರೀತಿ ಎಚ್ಚರಿಕೆ ವಹಿಸಿ ಕೃತಕ ಕಾಲು ತಯಾರಿಸಲಾಗಿದೆ. ಒಂದು ವರ್ಷದ ನಂತರ ಕರುವಿನ ಕಾಲಿನಲ್ಲಿ ಬದಲಾವಣೆ ಆಗಲಿದ್ದು, ಆಗ ಮತ್ತೆ ಕೃತಕ ಕಾಲಿನ ಗಾತ್ರ ಬದಲಾಯಿಸಬೇಕಾಗುತ್ತದೆ ಎಂದರು.

ವಿಶ್ವ ಹಿಂದೂ ಪರಿಷದ್‌ ಉತ್ತರ ಪ್ರಾಂತ ಕಾರ್ಯದರ್ಶಿ ಗೋವರ್ಧನರಾವ್‌ ಮಾತನಾಡಿ, ಕಳೆದ 8 ವರ್ಷಗಳಿಂದ ವಿಎಚ್‌ಪಿ ಗೋಶಾಲೆ ನಡೆಸುತ್ತಿದೆ. ಇಲ್ಲಿ ದೇಸಿ ಹಸು ಮಾತ್ರ ಸಾಕಲಾಗುತ್ತಿದೆ. ಗೋಶಾಲೆಯಲ್ಲಿ 24 ಹಸು ಹಾಗೂ ಕರುಗಳಿವೆ. ಹಾವೇರಿ ಜಿಲ್ಲೆ ಇನಾಮ ಲಕಮಾಪುರ ಬಳಿ ಸುಮಾರು 200 ಹಸುಗಳಿರುವ ಗೋಶಾಲೆಯನ್ನು ವಿಎಚ್‌ಪಿ ನಿರ್ವಹಿಸುತ್ತಿದೆ ಎಂದರು. ಗೋಶಾಲೆ ಉಸ್ತುವಾರಿ ಆನಂದ ಸಂಗಮ, ಜಿ.ಗೌತಮ, ಬಿ.ಸುನೀಲ, ಸುಭಾಸ ಡಂಕ್‌, ರಮೇಶ ಕದಂ, ವಿಜಯ ಕ್ಷೀರಸಾಗರ ಇನ್ನಿತರರಿದ್ದರು.

ಟಾಪ್ ನ್ಯೂಸ್

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಬೈರಪ್ಪ

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ

basavaraj

Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

mutalik (2)

B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ

ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

Hubli: ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.