![Puduvettu: ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ; ಡೆತ್ನೋಟ್ ಪತ್ತೆ](https://www.udayavani.com/wp-content/uploads/2024/07/student-415x307.jpg)
Mangaluru ಭೂಗತ ತೈಲಾಗಾರ ಜಾಗ ಖಾಸಗಿಗೆ ಗುತ್ತಿಗೆ?
Team Udayavani, Feb 7, 2024, 6:41 AM IST
![Mangaluru ಭೂಗತ ತೈಲಾಗಾರ ಜಾಗ ಖಾಸಗಿಗೆ ಗುತ್ತಿಗೆ?](https://www.udayavani.com/wp-content/uploads/2024/02/oil-620x387.jpg)
ಮಂಗಳೂರು: ಮಂಗಳೂರು, ಪಾದೂರು ಹಾಗೂ ವಿಶಾಖಪಟ್ಟಣದಲ್ಲಿರುವ ಭೂಗತ ತೈಲ ಸಂಗ್ರಹಾಗಾರಗಳ ಜಾಗವನ್ನು ಪೂರ್ತಿಯಾಗಿ ದೇಶೀಯ ಹಾಗೂ ವಿದೇಶೀ ಸಂಸ್ಥೆಗಳಿಗೆ ಗುತ್ತಿಗೆ ಆಧಾರದಲ್ಲಿ ಕಚ್ಚಾ ತೈಲ ಸಂಗ್ರಹಕ್ಕೆ ನೀಡಲು ಸರಕಾರ ನಿರ್ಧರಿಸಿದೆ.
ಲಭ್ಯ ಮಾಹಿತಿ ಪ್ರಕಾರ ಸದ್ಯವೇ ಈ ಬಗ್ಗೆ ಗುತ್ತಿಗೆದಾರರನ್ನು ಆಹ್ವಾನಿಸುವ ಸಾಧ್ಯತೆ ಇದೆ.ಯುಎಇಯ ಅಬುಧಾಬಿಯಲ್ಲಿರುವ ನ್ಯಾಶನಲ್ ಆಯಿಲ್ ಕಂಪೆನಿ (ಆಡ್ನಾಕ್) ಈಗಾಗಲೇ ಪಾದೂರಿನ 2.5 ಹಾಗೂ ಮಂಗಳೂರಿನ ಪೆರ್ಮುದೆಯಲ್ಲಿರುವ 1.5 ಮಿಲಿಯ ಟನ್ ಸಂಗ್ರಹ ಸಾಮರ್ಥ್ಯದ ಭೂಗತ ತೆಲಾಗಾರಗಳಲ್ಲಿ ಅರ್ಧ ಭಾಗವನ್ನು ಗುತ್ತಿಗೆ ಪಡೆದಿದೆ.
ಪಾದೂರಿನ ಬಾಕಿ ಉಳಿದ 1.25 ಮಿಲಿಯ ಟನ್ ಅನ್ನು ಭಾರತೀಯ ವ್ಯೂಹಾತ್ಮಕ ಪೆಟ್ರೋಲಿಯಂ ಸಂಗ್ರಹ ಸಂಸ್ಥೆ (ಐಎಸ್ಪಿಆರ್ಎಲ್) ತುಂಬಿಸಿದೆ.
ಮಂಗಳೂರಿನಲ್ಲಿ ಬಾಕಿ ಉಳಿದ 0.75 ಮಿಲಿಯ ಟನ್ ಸಾಮರ್ಥ್ಯದ ಸುರಂಗದ ಖಾಲಿ ಭಾಗವನ್ನು ಗುತ್ತಿಗೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ವಿಶಾಖಪಟ್ಟಣದಲ್ಲಿ 1.33 ಮಿಲಿಯ ಟನ್ ಸಂಗ್ರಹಾಗಾರದಲ್ಲಿ ಎಚ್ಪಿಸಿಎಲ್ ಒಂದು ಭಾಗವನ್ನು ಈಗಾಗಲೇ ಗುತ್ತಿಗೆ ಪಡೆದಿದ್ದರೆ, ಉಳಿದ ಭಾಗವನ್ನು ಬೇರೆಯವರಿಗೆ ನೀಡಲಾಗುವುದು.
ಕೇಂದ್ರ ಸರಕಾರಕ್ಕೇ ಮೊದಲ ಹಕ್ಕು
ಯಾವುದೇ ಕಂಪೆನಿಗೆ ಗುತ್ತಿಗೆ ಆಧಾರದಲ್ಲಿ ಜಾಗ ಕೊಟ್ಟರೂ ತುರ್ತು ಪರಿಸ್ಥಿತಿಗಳಲ್ಲಿ ಈ ತೈಲದ ಮೇಲೆ ಕೇಂದ್ರ ಸರಕಾರಕ್ಕೇ ನೇರ ಹಕ್ಕು ಇರಲಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಸಂಗ್ರಹಾಗಾರದಲ್ಲಿ ಜಾಗವನ್ನು ಗುತ್ತಿಗೆ ಪಡೆದ ಕಂಪೆನಿಗಳು ಕಚ್ಚಾ ತೈಲವನ್ನು ಇತರ ಬಳಕೆದಾರರಿಗೆ ಮಾರಾಟ ಮಾಡಬಹುದು.
ಟಾಪ್ ನ್ಯೂಸ್
![Puduvettu: ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ; ಡೆತ್ನೋಟ್ ಪತ್ತೆ](https://www.udayavani.com/wp-content/uploads/2024/07/student-415x307.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Mangaluru ವಸತಿ ಯೋಜನೆ: 4 ವರ್ಷಗಳಿಂದ ದ.ಕ.ಕ್ಕೆ ಮನೆಯೇ ಸಿಕ್ಕಿಲ್ಲ!](https://www.udayavani.com/wp-content/uploads/2024/07/dinesh-rao-150x69.jpg)
Mangaluru ವಸತಿ ಯೋಜನೆ: 4 ವರ್ಷಗಳಿಂದ ದ.ಕ.ಕ್ಕೆ ಮನೆಯೇ ಸಿಕ್ಕಿಲ್ಲ!
![“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್ ಗುಂಡೂರಾವ್](https://www.udayavani.com/wp-content/uploads/2024/07/DIESH-150x84.jpg)
“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್ ಗುಂಡೂರಾವ್
![Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ](https://www.udayavani.com/wp-content/uploads/2024/07/dk-de-150x100.jpg)
Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ
![Tulu Cinema ಕರಾವಳಿಯಾದ್ಯಂತ “ಧರ್ಮದೈವ’ ತುಳು ಸಿನೆಮಾ ತೆರೆಗೆ](https://www.udayavani.com/wp-content/uploads/2024/07/tu-1-150x60.jpg)
Tulu Cinema ಕರಾವಳಿಯಾದ್ಯಂತ “ಧರ್ಮದೈವ’ ತುಳು ಸಿನೆಮಾ ತೆರೆಗೆ
![Pavoor ಉಳಿಯ ಅಕ್ರಮ ಮರಳುಗಾರಿಕೆ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ](https://www.udayavani.com/wp-content/uploads/2024/07/dc-3-150x98.jpg)
Pavoor ಉಳಿಯ ಅಕ್ರಮ ಮರಳುಗಾರಿಕೆ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.