![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 8, 2024, 7:32 PM IST
ಗಂಗಾವತಿ:ಹಿಂದೂ ಧರ್ಮದ ಸಂರಕ್ಷಣೆಗಾಗಿ ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದಲ್ಲಿ ಸ್ಥಾಪನೆಗೊಂಡು ಧರ್ಮ ಕಾರ್ಯವನ್ನು ನೆರವೇರಿಸಿದೆ ಎಂದು ಹಂಪಿ ಗಾಯತ್ರಿ ಪೀಠದ ಪೂಜ್ಯ ಭಾರತಿ ವಿದ್ಯಾರಣ್ಯ ಮಹಾಸ್ವಾಮಿಗಳು ಹೇಳಿದರು.
ಆನೆಗೊಂದಿಯ ಪುರಾತನ ಅರಮನೆಯಲ್ಲಿ ಆನೆಗೊಂದಿ ರಾಜವಂಶಸ್ಥರು ಆಯೋಜಿಸಿರುವ ವಿಜಯನಗರ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಜಯನಗರ ಸಾಮ್ರಾಜ್ಯದಲ್ಲಿ ಅರಸರು ಸರ್ವ ಜನಾಂಗಗಳನ್ನು ಪ್ರೀತಿ ವಿಶ್ವಾಸದ ಮೂಲಕ ಆಳ್ವಿಕೆ ನಡೆಸಿ ನೆಲ ಜಲ ಧರ್ಮ ಸಂರಕ್ಷಣೆ ಮಾಡುವ ಮೂಲಕ ಮಾದರಿಯಾಗಿದ್ದರು ದೇಶವಿದೇಶದ ಪ್ರವಾಸಿಗರು ವಿಜಯನಗರಕ್ಕೆ ಭೇಟಿ ನೀಡಿ ಇಲ್ಲಿಯ ಕೃಷಿ , ಶಿಲ್ಪಕಲೆ ಸಂಗೀತ ,ಸಾಹಿತ್ಯ ಮತ್ತು ಆಧ್ಯಾತ್ಮವನ್ನು ತಿಳಿದುಕೊಂಡು ಹೋಗಿದ್ದಾರೆ. ಭಾರತ ದೇಶ ಸ್ವಾತಂತ್ರ್ಯ ನಂತರ ವಿಜಯನಗರ ಸಾಮ್ರಾಜ್ಯದ ಹಲವು ಉಪಯುಕ್ತ ಮಾಹಿತಿಗಳನ್ನು ಗಣತಂತ್ರದಲ್ಲಿ ಅಳವಡಿಸಿಕೊಳ್ಳುವ ಮೂಲಕ ವಿಜಯನಗರದ ಪುಣ್ಯಸ್ಥಾನ ಮಾಡಲಾಗಿದೆ. ಜನರು ದೇಶ ಭಾಷೆ ಧರ್ಮದ ಬಗ್ಗೆ ಅಭಿಮಾನವುಳ್ಳವರಾಗಿರಬೇಕು ಎಂದರು.
ರಾಜ ವಂಶಸ್ಥ ಶ್ರೀ ಕೃಷ್ಣದೇವರಾಯ ಮಾತನಾಡಿ, ವಿಜಯನಗರ ಸಾಮ್ರಾಜ್ಯ ಮಾದರಿಯ ಸಾಮ್ರಾಜ್ಯವಾಗಿದ್ದು, ಈ ಕಾಲದಲ್ಲಿ ನೀರಾವರಿ ಸೇರಿದಂತೆ ಕೃಷಿ ಮತ್ತು ವ್ಯಾಪಾರ ಜವಳಿ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ರಾಜ್ಯ ಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದ ನಂತರ ಜನರಿಗೆ ಬೇಕಾಗಿರುವ ಮೂಲ ಸೌಲಭ್ಯ ನೀಡುತ್ತಾ ಕಲೆ ಸಾಹಿತ್ಯ ಧರ್ಮವನ್ನು ಸರ್ವರೂ ಸಂರಕ್ಷಣೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಆನೆಗೊಂದಿ ರಾಜವಂಶಸ್ಥ ಮನೆತನದವರು ವಿಜಯನಗರ ಉತ್ಸವ ಆಯೋಜನೆ ಮಾಡಿ ಹಲವಾರು ಕಲೆಯ ಸಾಹಿತ್ಯ ಪ್ರಕಾರಗಳನ್ನು ಉಳಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ಇಡೀ ಸಮುದಾಯ ಸಂರಕ್ಷಣೆ ಮಾಡಬೇಕಿದೆ ಎಂದರು. ಈ ಸಂದರ್ಭದಲ್ಲಿ ರಾಜಮಾತೆ ಚಂದ್ರಕಾಂತದೇವಿ ರತ್ನಶ್ರೀ ರಾಯ, ತಿರುಮಲ ದೇವರಾಯ ಸೇರಿದಂತೆ ಇತಿಹಾಸಕಾರರು ಮತ್ತು ಅಧ್ಯಯನಕಾರರು ಸ್ಥಳೀಯ ಆನೆಗೊಂದಿ ಗಣ್ಯರು ಪ್ರಮುಖರು ಪಾಲ್ಗೊಂಡಿದ್ದರು.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.