Bank of Maharashtra :ಅತ್ಯಧಿಕ ಠೇವಣಿ ಸಂಗ್ರಹ
ಪುಣೆ ಮೂಲದ ಬಿಒಎಂ ಠೇವಣಿ ಸಂಗ್ರಹದಲ್ಲಿ ಶೇ. 17.89 ಪ್ರಗತಿ- ಉಳಿತಾಯ, ಚಾಲ್ತಿ ಖಾತೆಗಳ ಠೇವಣಿಯಲ್ಲಿ ಪ್ರಥಮ ಸ್ಥಾನ
Team Udayavani, Feb 8, 2024, 10:27 PM IST
ಬೆಂಗಳೂರು: ಸಾರ್ವಜನಿಕ ವಲಯದ ಬ್ಯಾಂಕ್ ಠೇವಣಿ ಕ್ರೋಢೀಕರಣ ಪಟ್ಟಿಯಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ) ಅತ್ಯಧಿಕ ಠೇವಣಿ ಸಂಗ್ರಹಿಸುವ ಮೂಲಕ ಅಗ್ರಸ್ಥಾನ ಪಡೆದುಕೊಂಡಿದೆ. ಹೆಚ್ಚಿನ ಬ್ಯಾಂಕ್ಗಳು ಎರಡಂಕಿಯ ಬೆಳವಣಿಗೆಯನ್ನು ಸಾಧಿಸುವಲ್ಲಿ ವಿಫಲವಾಗಿವೆ.
ಸಾರ್ವಜನಿಕ ವಲಯದ 12 ಬ್ಯಾಂಕ್ಗಳಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರ 2023ರ ಡಿಸೆಂಬರ್ 31ಕ್ಕೆ ಕೊನೆಗೊಂಡ ಮೂರನೇ ತ್ರೆ„ಮಾಸಿಕದಲ್ಲಿ ಠೇವಣಿಗಳಲ್ಲಿ ಎರಡಂಕಿಯ ಬೆಳವಣಿಗೆ ದಾಖಲಿಸಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು(ಪಿಎಸ್ಬಿಎಸ್) ಪ್ರಕಟಿಸಿದ ತ್ರೆ„ಮಾಸಿಕ ಅಂಕಿ-ಅಂಶಗಳ ಪ್ರಕಾರ, ಪುಣೆ ಮೂಲದ ಬ್ಯಾಂಕ್ ಆಫ್ ಮಹಾರಾಷ್ಟ್ರ ಠೇವಣಿ ಸಂಗ್ರಹದಲ್ಲಿ ಶೇ.17.89 ಪ್ರಗತಿ ಸಾಧಿಸಿದೆ. ಇದೇ ವೇಳೆ ಎಸ್ಬಿಐ ಬ್ಯಾಂಕ್ ಶೇ.12.8, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶೇ.9.53, ಪಂಜಾಬ್ ನ್ಯಾಶನಲ್ ಬ್ಯಾಂಕ್ ಶೇ.9.10 ಏರಿಕೆಯಾಗಿದೆ.
ಉಳಿತಾಯ ಹಾಗೂ ಚಾಲ್ತಿ ಖಾತೆಗಳ ಠೇವಣಿಗಳಲ್ಲಿ ಬಿಒಎಂ ಶೇ.50.19ನೊಂದಿಗೆ ಪ್ರಥಮ ಸ್ಥಾನದಲ್ಲಿದ್ದು, ಶೇ.48.98ನೊಂದಿಗೆ ಸೆಂಟ್ರಲ್ ಬ್ಯಾಂಕ್ ಇಂಡಿಯಾ ದ್ವಿತೀಯ ಸ್ಥಾನ ಪಡೆದುಕೊಂಡಿದೆ. 2023ರ ಡಿ. 31ಕ್ಕೆ ಕ್ರಮವಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಶೇ.2.04 ಹಾಗೂ ಎಸ್ಬಿಐ ಶೇ.2.42ರಷ್ಟು ಕಡಿಮೆ ಅನುತ್ಪಾದಕ ಆಸ್ತಿಗಳನ್ನು (ಎನ್ಪಿಎಎಸ್)ವರದಿ ಮಾಡಿದೆ.
ಹಣಕಾಸು ವರ್ಷದ ಮೂರನೇ ತ್ತೈಮಾಸಿಕ ಅಂತ್ಯದಲ್ಲಿ ಬಂಡವಾಳ ಸಮಪರ್ಕತೆಯ ಅನುಪಾತ ಬಿಒಎಂ ಶೇ.16.85, ಐಒಬಿ ಶೇ.16.80, ಪಂಜಾಬ್ ಸಿಂಧ್ ಬ್ಯಾಂಕ್ ಶೇ.16.13ರಷ್ಟಿದೆ. 12 ಸಾರ್ವಜನಿಕ ವಲಯದ ಬ್ಯಾಂಕ್ಗಳ 2023 ತ್ತೈಮಾಸಿಕ ಅವಧಿಯಲ್ಲಿ ಗಳಿಸಿ ಒಟ್ಟು 104,649 ಕೋಟಿ ರೂ. ಲಾಭದಲ್ಲಿ 98,355 ಕೋ. ರೂ. ನಿವ್ವಳ ಲಾಭ ದಾಖಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ
Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.