Stamp Duty: 10 ದಾಖಲೆಗಳ ಮುದ್ರಾಂಕ ಶುಲ್ಕ ಹೆಚ್ಚಳ
Team Udayavani, Feb 9, 2024, 11:22 PM IST
ಬೆಂಗಳೂರು: ಕರಾರುಪತ್ರ, ಬ್ಯಾಂಕ್ ಗ್ಯಾರಂಟಿ, ಜಿಪಿಎ, ವಿವಿಧ ಪ್ರಮಾಣಪತ್ರಗಳು ಸಹಿತ ಸುಮಾರು 10 ದಾಖಲೆಗಳ ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.
ಡಿಸೆಂಬರ್ನಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲೇ ಮುದ್ರಾಂಕ ಶುಲ್ಕ ಹೆಚ್ಚಳ ಸಂಬಂಧ ಕರ್ನಾಟಕ ಮುದ್ರಾಂಕ (ತಿದ್ದುಪಡಿ) ಮಸೂದೆಗೆ ಅನುಮೋದನೆ ನೀಡಿತ್ತು. ಅದರ ಪರಿಣಾಮವಾಗಿ ಈಗ ಸರಕಾರಿ ಆದೇಶ ಹೊರಬಿದ್ದಿದ್ದು, ಫೆ.6ರಿಂದಲೇ ಜಾರಿಗೆ ಬಂದಿದೆ.
200 ರೂ. ಇದ್ದ ಕರಾರು ಪತ್ರ, ನಷ್ಟ ಪರಿಹಾರ (ಇನ್ಡೆಮ್ನಿಟಿ) ಬಾಂಡ್, ಬ್ಯಾಂಕ್ ಗ್ಯಾರಂಟಿಗಳ ಮುದ್ರಾಂಕ ಶುಲ್ಕವನ್ನು 500 ರೂ. ಗೆ ಏರಿಸಲಾಗಿದೆ. ಜಿಪಿಎ ಮಾಡಿಸಲು 1,000 ರೂ. ಮುದ್ರಾಂಕ ಶುಲ್ಕ ನೀಡಬೇಕು. 100 ರೂ. ಇದ್ದ ಎಸ್ಪಿಎ (ಸ್ಪೆಷಲ್ ಪವರ್ ಆಫ್ ಅಟಾರಿ°)ಯ ಮುದ್ರಾಂಕ ಶುಲ್ಕವು 500 ರೂ.ಗೆ ಏರಿಕೆಯಾಗಿದ್ದು, 20 ರೂ. ಇದ್ದ ಪ್ರಮಾಣಪತ್ರ(ಅಫಿದವಿತ್) ಶುಲ್ಕ 100 ರೂ. ಆಗಿದೆ.
ಸಾಲವನ್ನು ತೀರಿಸಿದ ಬಳಿಕ ಪಡೆಯುವ ಹೈಪೋಥಿಕೇಶನ್ ಅಗ್ರಿಮೆಂಟ್ನ ಮುದ್ರಾಂಕ ಶುಲ್ಕದಲ್ಲಿ ಸರಾಸರಿ ಶೇ.0.4ರಷ್ಟು ಏರಿಕೆ ಆಗಿದೆ. 10 ಲಕ್ಷ ರೂ.ವರೆಗಿನ ಸಾಲದ ಮೇಲೆ ಶೇ.0.1ರಷ್ಟಿದ್ದ ಮುದ್ರಾಂಕ ಶುಲ್ಕ ಶೇ.0.5ರಷ್ಟು ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.