![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 10, 2024, 1:03 PM IST
ಹಾವೇರಿ: ತನ್ನ ಜಮೀನಿನಲ್ಲಿ ಹೆದ್ದಾರಿ ಹಾದು ಹೋಗುವ ಕಾರಣ ಭೂಮಿ ವಶಪಡಿಸಿಕೊಂಡಿದ್ದಕ್ಕೆ ರೈತನೋರ್ವ ಅಧಿಕಾರಿಗಳ ಎದುರು ವಿಷ ಸೇವಿಸಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ರೈತನ ಜಮೀನು ಭೂ ಸ್ವಾಧೀನ ಮಾಡಲಾಗುತ್ತಿದೆ. ಅಡವಿ ಚಂದ್ರಪ್ಪ ಎಂಬ ರೈತ ಅಧಿಕಾರಿಗಳ ಮುಂದೆ ವಿಷ ಕುಡಿದು ಒದ್ದಾಡಿದ್ದಾನೆ. ರಾಜ್ಯ ಹೆದ್ದಾರಿ ಉಪವಿಭಾಗ ರಾಣೇಬೆನ್ನೂರು ಎಇಇ ವಾಸುದೇವ ಎದುರು ವಿಷ ಕುಡಿದು ರೈತ ಹೈಡ್ರಾಮಾ ಮಾಡಿದ್ದಾನೆ.
ಖಾಕಿ ಸಮ್ಮುಖದಲ್ಲಿ ರಾಜ್ಯ ಹೆದ್ದಾರಿ ರಾಣೆಬೇನ್ನೂರು ಎಇಇ ತಂಡ ಜಮೀನಿಗೆ ಬಂದ ವೇಳೆ ದಾರಿಗೆ ಜಾಗ ಕೊಡುವುದಿಲ್ಲ ಎಂದು ನೆಲಕ್ಕೆ ಬಿದ್ದು ಒದ್ದಾಡಿದ ರೈತ ರಂಪಾಟ ಮಾಡಿದ್ದಾನೆ.
ಕಾನೂನು ನಿಯಮ ಪಾಲಿಸದ ರೈತನ ವಿರುದ್ದ ಎಇಇ ವಾಸುದೇವ ದೂರು ನೀಡಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ಆತ್ಮಹತ್ಯೆ ಯತ್ನದಡಿ ಹಲಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.