Skin Health: ಚರ್ಮದ ಆರೋಗ್ಯಕ್ಕೆ ಅತ್ಯಂತ ಆವಶ್ಯಕ ಅಂಶ ಕೊಲಾಜೆನ್‌


Team Udayavani, Feb 11, 2024, 10:41 AM IST

3-health-1

ನಮ್ಮ ದೇಹದಲ್ಲಿ ಅತ್ಯಂತ ಪ್ರಮುಖವಾಗಿರುವ ಪ್ರೊಟೀನ್‌ ಎಂದರೆ ಅದು ಕೊಲಾಜೆನ್‌. ಇದು ಲಿಗ್ಮೆಂಟ್‌ಗಳು, ಕೊಬ್ಬು, ಟೆಂಡನ್‌ ಮತ್ತಿತರ ಭಾಗಗಳಲ್ಲಿ ಕಂಡುಬರುತ್ತದೆ. ನಮ್ಮ ದೇಹದ ಎಲುಬುಗಳ ಸಂರಚನೆಯ ಸಮಗ್ರತೆಗೆ ಇದು ಅತ್ಯವಶ್ಯಕವಾಗಿದೆಯಲ್ಲದೆ ನಮ್ಮ ದೇಹದ ವಿವಿಧ ಅಂಗಾಂಗಗಳ ಜೋಡಣೆಗೆ ನೆರವಾಗುತ್ತದೆ. ನಮ್ಮ ದೇಹದಲ್ಲಿ ಕೊಲಾಜೆನ್‌ ಪ್ರಮಾಣ ಚೆನ್ನಾಗಿದ್ದಲ್ಲಿ ಕೊಲಾಜೆನ್‌ ಹೊಂದಿರುವ ಜೀವಕೋಶಗಳು ಸದೃಢವಾಗಿರುತ್ತವೆ. ನಮ್ಮ ಚರ್ಮ ಆರೋಗ್ಯಯುತವಾಗಿರಬೇಕಾದರೆ ನಮ್ಮ ದೇಹದಲ್ಲಿ ಕೊಲಾಜೆನ್‌ ಉತ್ಪಾದನೆಯಾಗಬೇಕಾದ್ದು ಅಗತ್ಯ. ಅಲೊವೆರಾ ಬಳಕೆಯಿಂದ ಅಥವಾ ಕೆಲವು ನಿರ್ದಿಷ್ಟ ಆಹಾರವಸ್ತುಗಳನ್ನು ಸೇವಿಸುವ ಮೂಲಕ ನಮ್ಮ ದೇಹದಲ್ಲಿ ಕೊಲಾಜೆನ್‌ ಉತ್ಪಾದನೆ ಹೆಚ್ಚುವಂತೆ ಮಾಡಬಹುದಾಗಿದೆ. ಪ್ರಚೋದನೆಗೆ ಒಳಗಾದಾಗ ಕೊಲಾಜೆನ್‌ ಆರೋಹಣ ಕ್ರಮದಲ್ಲಿ ವೃದ್ಧಿಸುತ್ತ ಹೋಗುತ್ತದೆ. ದೇಹದಲ್ಲಿ ಕೊಲಾಜೆನ್‌ ಹೆಚ್ಚು ಇದ್ದಷ್ಟು ದೇಹದ ಅದರ ಉತ್ಪಾದನೆ ಮತ್ತು ಶೇಖರಣೆಯನ್ನು ಹೆಚ್ಚಿಸುತ್ತದೆ.

ಅಲೊವೆರಾ

ನಮ್ಮಲ್ಲಿ ಬಹಳ ಹಿಂದಿನಿಂದಲೂ ಗಾಯಗಳನ್ನು ಗುಣಪಡಿಸುವುದಕ್ಕೆ ಅಲೊವೆರಾ ಉಪಯೋಗಿಸುತ್ತಿದ್ದರು. ಚರ್ಮದ ಮೇಲೆ ಹಚ್ಚಿದಾಗ ಅಥವಾ ಹೊಟ್ಟೆಗೆ ಸೇವಿಸಿದಾಗ ಅಲೊವೆರಾ ಕೊಲಾಜೆನ್‌ ರೂಪುಗೊಳ್ಳುವುದಕ್ಕೆ ನೆರವಾಗುತ್ತದೆ. ಇದರಿಂದಾಗಿಯೇ ಅಲೋವೆರಾ ಉಪಯೋಗಿಸಿದಾಗ ಗಾಯಗಳು, ಸುಟ್ಟಗಾಯಗಳು ಬೇಗನೆ ಗುಣ ಹೊಂದುವುದು. ಜೀವಕೋಶಗಳ ಆರೋಗ್ಯಕ್ಕೆ ಪೂರಕವಾಗಿರುವ ಅಲೊವೆರಾದ ಈ ಗುಣವು ನಮ್ಮ ಚರ್ಮವು ಹೆಚ್ಚು ಕೊಲಾಜೆನ್‌ ಉತ್ಪಾದಿಸುವಂತೆ ಮಾಡುತ್ತದೆ. ಅಲೊವೆರಾವನ್ನು ಶುದ್ಧ ಸ್ವರೂಪದಲ್ಲಿ ಚರ್ಮದ ಮೇಲೆ ಹಚ್ಚಬಹುದು ಅಥವಾ ಹೊಟ್ಟೆಗೂ ಸೇವಿಸಬಹುದು.

ವಿಟಮಿನ್‌ ಸಿ

ಹ್ಯಾಲುರಾನಿಕ್‌ ಆಮ್ಲದ ಉತ್ಪಾದನೆಗೆ ವಿಟಮಿನ್‌ ಅತ್ಯಗತ್ಯ. ನಾವು ವಿಟಮಿನ್‌ ಸಿಯನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸದೆ ಇದ್ದರೆ ಹ್ಯಾಲುರಾನಿಕ್‌ ಆಮ್ಲ ಹೊಂದಿರುವ ಆಹಾರಗಳನ್ನು ಸೇವಿಸಿದರೂ ಹೆಚ್ಚು ಪ್ರಯೋಜನ ವಾಗದು. ದೇಹದಲ್ಲಿ ಕೊಲಾಜೆನ್‌ ಉತ್ಪಾದನೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹ್ಯಾಲುರಾನಿಕ್‌ ಆಮ್ಲ ಹೊಂದಿದೆ. ನಮ್ಮ ದೇಹದಲ್ಲಿ ಹ್ಯಾಲುರಾನಿಕ್‌ ಆಮ್ಲ ಸಹಜವಾಗಿ ಇರುತ್ತದೆ; ಆದರೆ ವಯಸ್ಸಾಗುತ್ತಿದ್ದಂತೆ ಅದರ ಪ್ರಮಾಣ ಕಡಿಮೆಯಾಗುತ್ತದೆ.

ಕೊಲಾಜೆನ್‌ ಮತ್ತು ಹ್ಯಾಲುರಾನಿಕ್‌ ಆಮ್ಲ – ಇವೆರಡೂ ಚರ್ಮದ ಆರೋಗ್ಯಕ್ಕೆ ಅತ್ಯಗತ್ಯವಾಗಿರುವ ಅಂಶಗಳಾಗಿದ್ದು, ವಿಟಮಿನ್‌ ಸಿ ಮತ್ತು ಅಮೈನೊ ಆಮ್ಲಗಳು ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ಈ ಎರಡು ಅಂಶಗಳ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ಕಿತ್ತಳೆ, ಕೆಂಪು ದೊಣ್ಣೆ ಮೆಣಸು, ಕಾಲೆ, ಬ್ರಾಕೊಲಿ, ಬ್ರಸೆಲ್ಸ್‌ ಮೊಳಕೆ ಮತ್ತು ಸ್ಟ್ರಾಬೆರಿಗಳಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿರುತ್ತದೆ.

ಜಿನ್‌ಸೆಂಗ್‌

ಪನಾಕ್ಸ್‌ ಜಿನ್‌ಸೆಂಗ್‌ ಸಸ್ಯವು ಮುಪ್ಪಾಗುವಿಕೆಯನ್ನು ತಡೆಯುವ ಗುಣ ಹೊಂದಿರುವುದು ಶ್ರುತಪಟ್ಟಿದೆ. ಚರ್ಮವು ತನ್ನ ಸಹಜ ಸ್ವರೂಪವನ್ನು ಉಳಿಸಿಕೊಳ್ಳಲು ಜಿನ್‌ಸೆಂಗ್‌ ಸಹಾಯ ಮಾಡುತ್ತದೆ ಮತ್ತು ಅನೇಕ ರಾಸಾಯನಿಕ ಔಷಧಗಳಂತೆ ಋಣಾತ್ಮಕ ಅಡ್ಡ ಪರಿಣಾಮಗಳನ್ನು ಉಂಟು ಮಾಡದೆ ಚರ್ಮಕ್ಕೆ ಹೀರಿಕೆಯಾಗುತ್ತದೆ. ಸೂರ್ಯನ ಅತಿನೇರಳೆ ಕಿರಣಗಳಿಂದ ಚರ್ಮಕ್ಕೆ ಉಂಟಾಗುವ ಹಾನಿಯನ್ನು ತಡೆಯುವ ಸಾಮರ್ಥ್ಯ ಜಿನ್‌ ಸೆಂಗ್‌ಗೆ ಇದೆ. ಇದು ಕೊಲಾಜೆನ್‌ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತದೆ ಎಂಬುದಾಗಿಯೂ ತಿಳಿದುಬಂದಿದೆ. ಜಿನ್‌ಸೆಂಗ್‌ ಚಹಾ ಕುಡಿದಾಗ ಅಥವಾ ಸಪ್ಲಿಮೆಂಟ್‌ ಆಗಿ ಸೇವಿಸಿದಾಗ ರಕ್ತ ಪ್ರವಾಹಕ್ಕೆ ಬಿಡುಗಡೆಯಾ ಗುವ ಆ್ಯಂಟಿ ಓಕ್ಸಿಡೆಂಟ್‌ ಗಳು ಆರೋಗ್ಯ ಪೂರ್ಣ ಜೀವಕೋಶಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತವೆ ಮತ್ತು ಚರ್ಮ ಹೊಳೆಯಲು ಸಹಾಯ ಮಾಡುತ್ತವೆ.

ಕೊತ್ತಂಬರಿಸೊಪ್ಪು

ನಾವು ಅಡುಗೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಕೊತ್ತಂಬರಿ ಸೊಪ್ಪು ಒಂದು ಉತ್ತಮ ಮೂಲಿಕೆಯೂ ಆಗಿದೆ. ಇದರಲ್ಲಿ ಕೊಲಾಜೆನ್‌ ಸಂಯೋಜನೆಯನ್ನು ವೃದ್ಧಿಸುವ ವಿಟಮಿನ್‌ ಸಿ ಇದೆ. ಕೊತ್ತಂಬರಿ ಸೊಪ್ಪಿನಲ್ಲಿ ಇರುವ ಲಿನೊಲೆನಿಕ್‌ ಆಮ್ಲವು ಚರ್ಮ ನೆರಿಗೆಗಟ್ಟುವುದನ್ನು ತಡೆಯುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ರಕ್ತಪ್ರವಾಹದಲ್ಲಿ ಸೇರಿಕೊಂಡು ಚರ್ಮದ ಆರೋಗ್ಯಪೂರ್ಣ ಜೀವಕೋಶಗಳಿಗೆ ಹಾನಿ ಉಂಟು ಮಾಡುವ ಫ್ರೀ ರ್ಯಾಡಿಕಲ್‌ಗ‌ಳನ್ನು ಇದರಲ್ಲಿ ಇರುವ ಆ್ಯಂಟಿಓಕ್ಸಿಡೆಂಟ್‌ಗಳು ನಿವಾರಿಸುತ್ತವೆ. ಕೊತ್ತಂಬರಿ ಸೊಪ್ಪಿನ ಸಾರ ಮಾರುಕಟ್ಟೆಯಲ್ಲಿ ಸಿಗುತ್ತಿದ್ದು, ಇದನ್ನು ಸೇವಿಸುವ ಮೂಲಕ ದೇಹದಿಂದ ವಿಷಾಂಶ ನಿವಾರಣೆಗೆ ನೆರವಾಗಬಹುದು.

ಪಾಚಿಸಾರ

ಸೌಂದರ್ಯವರ್ಧಕ ಸಾಮಗ್ರಿ ಗಳಲ್ಲಿ ಈಗ ಸಮುದ್ರ ಸಸ್ಯಗಳಿಂದ ಪಡೆದ ಅಂಶಗಳನ್ನು ಹೆಚ್ಚುಹೆಚ್ಚಾಗಿ ಉಪಯೋಗಿಸಲಾಗುತ್ತಿದೆ. “ಆಕ್ಸಿಡೇಶನ್‌’ ಅಥವಾ ಮಾಲಿನ್ಯದಂತಹ ಬಾಹ್ಯ ಅಂಶಗಳಿಗೆ ಚರ್ಮವು ತೆರೆದುಕೊಳ್ಳುವುದರಿಂದ ಜೀವಕೋಶ ಬೆಳವಣಿಗೆಗೆ ಅಡಚಣೆ ಉಂಟಾಗಬಹುದಾಗಿದ್ದು, ಇದು ಚರ್ಮಕ್ಕೆ ಹಾನಿ ಉಂಟಾಗಲು ಪ್ರಮುಖ ಕಾರಣವಾಗಿರುತ್ತದೆ. ಪಾಚಿಸಾರವು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಆಕ್ಸಿಡೇಶನ್‌ನಿಂದ ಕೊಲಾಜೆನ್‌ ನಾಶಗೊಳ್ಳುವುದನ್ನು ತಪ್ಪಿಸುತ್ತದೆ. ಬಹುತೇಕ ಎಲ್ಲ ಪ್ರಮುಖ ಆರೋಗ್ಯ ಆಹಾರ ಮಳಿಗೆಗಳಲ್ಲಿ ಬಾಯಿಯ ಮೂಲಕ ಸೇವಿಸಬಹುದಾದ ಸಪ್ಲಿಮೆಂಟ್‌ ಆಗಿ ಪಾಚಿಸಾರ ಲಭ್ಯವಿರುತ್ತದೆ.

ಏನು ಮಾಡಬಾರದು?

ಚರ್ಮವು ಯೌವ್ವನಪೂರ್ಣ ಮತ್ತು ಆರೋಗ್ಯಯುತವಾಗಿ ಇರಬೇಕಾಗಿದ್ದರೆ ಬಿರುಬಿಸಿಲಿಗೆ ಒಡ್ಡಿಕೊಳ್ಳಬೇಡಿ. ಧೂಮಪಾನವು ಚರ್ಮದ ಆರೋಗ್ಯಕ್ಕೆ ಒಳಿತಲ್ಲ, ಬೇಗನೆ ನೆರಿಗೆಗಟ್ಟುವಂತೆ ಮಾಡುತ್ತದೆ. ಹೊರಾಂಗಣದಲ್ಲಿ ಇರುವ ವೇಳೆ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಕೊಲಾಜೆನ್‌ ಸಪ್ಲಿಮೆಂಟ್‌ಗಳಿಂದ ಕೆಲವು ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆಗಳಿವೆ. ಅಲರ್ಜಿ ಉಂಟಾಗುವುದು, ಸಂಧಿ ನೋವು ಮತ್ತು ಕ್ಯಾಲ್ಸಿಯಂ ಹೆಚ್ಚು ಉತ್ಪಾದನೆಯಾಗುವುದು ಇಂಥ ಅಡ್ಡ ಪರಿಣಾಮಗಳಲ್ಲಿ ಕೆಲವು. ಸಮುದ್ರ ಆಹಾರ ಅಥವಾ ಮಾಂಸದ ಉತ್ಪನ್ನಗಳನ್ನು ಉಪಯೋಗಿಸಿದಾಗ ನಿಮಗೆ ಅಡ್ಡ ಪರಿಣಾಮಗಳು ಉಂಟಾಗಿದ್ದರೆ ಯಾವುದೇ ಬಗೆಯ ಕೊಲಾಜೆನ್‌ ಸಪ್ಲಿಮೆಂಟ್‌ ತೆಗೆದುಕೊಳ್ಳುವಾಗ ಅತ್ಯಂತ ಎಚ್ಚರಿಕೆ ವಹಿಸಿ.

-ಡಾ| ವಿನಾಯಕ್‌ ಎನ್‌. ಅಂಚನ್‌,

ಅಸಿಸ್ಟೆಂಟ್‌ ಪ್ರೊಫೆಸರ್‌,

ಡರ್ಮಟಾಲಜಿ, ವೆನರಾಲಜಿ ಮತ್ತು ಲೆಪ್ರಸಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಡರ್ಮಟಾಲಜಿ, ವೆನರಾಲಜಿ ಮತ್ತು ಲೆಪ್ರಸಿ ವಿಭಾಗ, ಕೆಎಂಸಿ , ಮಂಗಳೂರು)

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

10-health

Asthma: ಎತ್ತರ ಪ್ರದೇಶಗಳು ಮತ್ತು ಅಸ್ತಮಾ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.