ಅಯೋಧ್ಯೆ ಶ್ರೀರಾಮನಿಗೆ ಸ್ವರ್ಣ ಅಟ್ಟೆ ಪ್ರಭಾವಳಿ; ಶ್ರೀ ಕಾಶೀ ಮಠದಿಂದ ಸಮರ್ಪಣೆಗೆ ಸಜ್ಜು
Team Udayavani, Feb 11, 2024, 11:05 AM IST
ಉಡುಪಿ: ಅಯೋಧ್ಯೆ ಶ್ರೀರಾಮನಿಗೆ ವಾರಣಾಸಿ ಶ್ರೀ ಕಾಶೀ ಮಠ ಸಂಸ್ಥಾನದಿಂದ ಸ್ವರ್ಣ ಅಟ್ಟೆ ಪ್ರಭಾವಳಿ ಸಮರ್ಪಣೆಗೆ ಸಜ್ಜುಗೊಂಡಿದೆ.
ಕೋಟ ಶ್ರೀ ಕಾಶೀ ಮಠದ ಶಾಖೆಯಿಂದ ವೈಭವದ ಮೆರವಣಿಗೆ ಮೂಲಕ ಸ್ವರ್ಣಮಯ ಅಟ್ಟೆ ಪ್ರಭಾವಳಿ ಅಯೋಧ್ಯೆಗೆ ತೆರಳಿದೆ. ಈ ಅಟ್ಟೆ ಪ್ರಭಾವಳಿಯನ್ನು ಉಡುಪಿಯ ಪ್ರಸಿದ್ಧ ಚಿನ್ನಾಭರಣ ಮಳಿಗೆ ಗುಜ್ಜಾಡಿ ಸ್ವರ್ಣ ಜುವೆಲರ್ ಪ್ರೈ.ಲಿ.ನ ಕಾರ್ಯಾಗಾರದಲ್ಲಿ 1 ಕೆಜಿ ಚಿನ್ನ, 3 ಕೆಜಿ ಬೆಳ್ಳಿಯಿಂದ ತಯಾರಿಸಲಾಗಿದೆ.
ಗುಜ್ಜಾಡಿ ದೀಪಕ್ ನಾಯಕ್ ಅವರ ಮೇಲುಸ್ತುವಾರಿಯಲ್ಲಿ ಸಂಸ್ಥೆಯ ನುರಿತ ಕುಶಲಕರ್ಮಿ ಕಿಶನ್ ಆಚಾರ್ಯರ ತಂಡದಿಂದ ಕೇವಲ 5 ದಿನಗಳಲ್ಲಿ ತಯಾರಿಸಲ್ಪಟ್ಟ ಅಟ್ಟೆ ಪ್ರಭಾವಳಿ ಕುಸುರಿ ಕೆಲಸಗಳಿಂದ ಕಲಾತ್ಮಕವಾಗಿ ಮೂಡಿಬಂದಿದೆ.
ಅಯೋಧ್ಯೆ ಶ್ರೀರಾಮನಿಗೆ ಈಗಾಗಲೇ ಸ್ವರ್ಣ ಜುವೆಲರ್ ಕಾರ್ಯಾಗಾರದಲ್ಲಿ ತಯಾರಿಸಿದ ಬೆಳ್ಳಿಯ ಪಲ್ಲಕಿ, ರಜತ ಕಲಶ ಸಮರ್ಪಣೆಗೊಂಡಿದೆ. ಗುಜ್ಜಾಡಿ ರಾಮದಾಸ ನಾಯಕ್ ಸಹಿತ ಗಣ್ಯರು ಉಪಸ್ಥಿತರಿದ್ದರು.
ಪೇಜಾವರ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರುವ ಮಂಡ ಲೋತ್ಸವದಲ್ಲಿ ಸ್ವರ್ಣ ಅಟ್ಟೆ ಪ್ರಭಾವಳಿ ಬಾಲರಾಮನಿಗೆ ಸಮರ್ಪಿಸಲಾಗುವುದು. ಶ್ರೀ ಕಾಶೀಮಠ ಸಂಸ್ಥಾನದ ಶ್ರೀಮತ್ ಸಂಯಮೀಂದ್ರತೀರ್ಥ ಶ್ರೀಪಾದರ ಆದೇಶದಂತೆ ಜಿಎಸ್ಬಿ ಸಮಾಜ ಬಾಂಧವರು ಗುರುಗಳ ಮಾರ್ಗ ದರ್ಶನದಂತೆ ಭಗವಂತನ ಸೇವೆ ಮಾಡುತ್ತಿರುವುದು ನಮಗೆ ಸಂತಸ ತಂದಿದೆ. ಇದು ಗುರುಗಳು ನಿಮ್ಮ ಮೇಲಿಟ್ಟಿರುವ ಅನುಗ್ರಹಕ್ಕೆ ಸಾಕ್ಷಿ ಎಂದು ಅಯೋಧ್ಯೆ ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರು, ಶ್ರೀ ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.