Cricket; ರಣಜಿ ಟ್ರೋಫಿಯನ್ನು ರದ್ದು ಮಾಡಿ..: ಬಂಗಾಳ ನಾಯಕನ ಆಕ್ರೋಶ
Team Udayavani, Feb 11, 2024, 12:35 PM IST
ಮುಂಬೈ: ಭಾರತದ ದೇಶಿಯ ಕ್ರಿಕೆಟ್ ನಲ್ಲಿ ಪ್ರಮುಖ ಕೂಟವಾದ ರಣಜಿ ಟ್ರೋಫಿ ಸದ್ಯ ನಡೆಯುತ್ತಿದೆ. ಸದ್ಯ ಗ್ರೂಪ್ ಹಂತದ ಪಂದ್ಯಗಳು ನಡೆಯುತ್ತಿದೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು, ಆಯ್ಕೆಗಾರರ ಗಮನ ಸೆಳೆಯಲು ಈ ಕೂಟವು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಬಂಗಾಳ ತಂಡದ ನಾಯಕ ಮನೋಜ್ ತಿವಾರಿ ಅವರು ರಣಜಿ ಟ್ರೋಪಿ ಕೂಟವನ್ನೇ ರದ್ದು ಮಾಡಿ ಎಂದು ಕಿಡಿಕಾರಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ರಣಜಿ ಟ್ರೋಫಿಯ ಆಯೋಜನೆಯ ಬಗ್ಗೆ ಸಂಪೂರ್ಣವಾಗಿ ಸಂತೋಷವಾಗಿಲ್ಲ. ಈ ಮೆಗಾ ಈವೆಂಟ್ ನಲ್ಲಿರುವ ವಿವಿಧ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಾಗ್ದಾಳಿ ನಡೆಸಿದ ತಿವಾರಿ, ಮುಂದಿನ ಋತುವಿನಿಂದ ಪಂದ್ಯಾವಳಿಯನ್ನು ರದ್ದುಗೊಳಿಸುವಂತೆ ಕೇಳಿಕೊಂಡಿದ್ದಾರೆ.
“ಮುಂದಿನ ಋತುವಿನಿಂದ ರಣಜಿ ಟ್ರೋಫಿಯನ್ನು ದೇಶಿಯ ಕ್ಯಾಲೆಂಡರ್ ನಿಂದ ರದ್ದುಗೊಳಿಸಬೇಕು. ಪಂದ್ಯಾವಳಿಯಲ್ಲಿ ಹಲವು ವಿಷಯಗಳು ತಪ್ಪಾಗುತ್ತಿವೆ. ಶ್ರೀಮಂತ ಇತಿಹಾಸ ಹೊಂದಿರುವ ಈ ಪ್ರತಿಷ್ಠಿತ ಪಂದ್ಯಾವಳಿಯನ್ನು ಉಳಿಸಲು ಹಲವು ವಿಷಯಗಳನ್ನು ಪರಿಶೀಲಿಸಬೇಕಾಗಿದೆ. ಇದು ತನ್ನ ಆಕರ್ಷಣೆ ಮತ್ತು ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ. ಸಂಪೂರ್ಣವಾಗಿ ನಿರಾಶೆಗೊಂಡಿದ್ದೇನೆ” ಎಂದು ತಿವಾರಿ ಎಕ್ಸ್ ಜಾಲತಾಣದಲ್ಲಿ ಬರೆದಿದ್ದಾರೆ.
ಬಳಿಕ ಫೇಸ್ ಬುಕ್ ಲೈವ್ ಬಂದಿರುವ ಮನೋಜ್ ತಿವಾರಿ, ಮೊದಲಿಗೆ ತಿರುವನಂತಪುರಂನ ತುಂಬಾದಲ್ಲಿರುವ ಸೇಂಟ್ ಕ್ಸೇವಿಯರ್ ಕಾಲೇಜ್ ಮೈದಾನದಲ್ಲಿ ಕಳಪೆ ಡ್ರೆಸ್ಸಿಂಗ್ ರೂಮ್ ಸೌಲಭ್ಯದ ಬಗ್ಗೆ ಕಿಡಿಕಾರಿದರು. ಅಲ್ಲಿ ಬಂಗಾಳ ತಂಡವು ಎಲೈಟ್ ಗ್ರೂಪ್ ಬಿ ಗೇಮ್ ನಲ್ಲಿ ಕೇರಳ ವಿರುದ್ಧ ಆಡುತ್ತಿದೆ.
Ranji trophy should be scrapped off from the calendar from the next season onwards. So many things going wrong in the tournament. So many things need to looked into in order to save this prestigious tournament which has a rich history. It’s losing its charm and importance.…
— MANOJ TIWARY (@tiwarymanoj) February 10, 2024
“ನಾವು ಕೇರಳದ ಒಂದು ಮೈದಾನದಲ್ಲಿ ಆಡುತ್ತಿದ್ದೇವೆ, ವರ್ಷಗಳ ಹಿಂದೆ ಒಂದು ಕ್ರೀಡಾಂಗಣವನ್ನು ನಿರ್ಮಿಸಿದ್ದರೂ ಅಲ್ಲ, ನಮಗೆ ರಾಜ್ಯದ ಹೊರವಲಯದಲ್ಲಿರುವ ಮೈದಾನದಲ್ಲಿ ಆಡಲು ಕೇಳಲಾಗುತ್ತಿದೆ. ನಮ್ಮ ಡ್ರೆಸ್ಸಿಂಗ್ ರೂಮ್ ಮತ್ತು ಎದುರಿನ ಡ್ರೆಸ್ಸಿಂಗ್ ರೂಮ್ ಪರಸ್ಪರ ಹತ್ತಿರವಾಗಿರುವುದರಿಂದ ಆ ಕಡೆಯವರು ಏನು ಹೇಳುತ್ತಿದ್ದಾರೆಂದು ನೀವು ಕೇಳಬಹುದು. ಡ್ರೆಸ್ಸಿಂಗ್ ರೂಮ್ ಗಳಲ್ಲಿ ಗೌಪ್ಯತೆ ಇಲ್ಲ. ಭವಿಷ್ಯದಲ್ಲಿ ಇದನ್ನು ಪರಿಶೀಲಿಸಲಾಗುವುದು ಎಂದು ನಾನು ಭಾವಿಸುತ್ತೇನೆ.” ಎಂದಿದ್ದಾರೆ.
ಇದೇ ವೇಳೆ ಈ ಋತುವಿನ ಕೊನೆಯಲ್ಲಿ ತಮ್ಮ ರಣಜಿ ಟ್ರೋಫಿ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಮನೋಜ್ ತಿವಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು
ENGvsAUS: ಏಕದಿನ ಸರಣಿಗೂ ಬಟ್ಲರ್ ಅಲಭ್ಯ; ಎಸ್ಆರ್ಎಚ್ ಆಟಗಾರನಿಗೆ ನಾಯಕತ್ವ
B–G Trophy: ಈತನೇ ಭಾರತದ ಮುಂದಿನ ಸೂಪರ್ ಸ್ಟಾರ್ ಎಂದ ಸ್ಟೀವ್ ಸ್ಮಿತ್, ಸ್ಟಾರ್ಕ್
Asian Champions Trophy ಸೆಮಿಫೈನಲ್ : ಕೊರಿಯಾ ವಿರುದ್ಧ ಭಾರತ ಫೇವರಿಟ್
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.