Suspension ಹಿಂಪಡೆಯಲು ಮೋಸದ ವಿಧಾನ ಮತ್ತೆ ಪ್ರತಿಭಟನೆ: ಸಾಕ್ಷಿ ,ಬಜರಂಗ್ ಬೆದರಿಕೆ
Team Udayavani, Feb 15, 2024, 6:10 AM IST
ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡರೇಶನ್ ಮೇಲಿನ ಅಮಾನತು ಆದೇಶವನ್ನು ವಿಶ್ವ ಕುಸ್ತಿ ಒಕ್ಕೂಟ (ಯುಡಬ್ಲ್ಯುಡಬ್ಲ್ಯು) ಹಿಂಪಡೆಯಲು ಫೆಡರೇಶನ್ನ ಅಧ್ಯಕ್ಷ ಸಂಜಯ್ ಸಿಂಗ್ ಅವರು ಮೋಸದ ವಿಧಾನ ಅನುಸರಿಸಿದ್ದಾರೆ ಎಂದು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯ ಆರೋಪಿಸಿದ್ದಾರೆ. ಒಂದು ವೇಳೆ ಇದು ನಿಜವಾದರೆ ಡಬ್ಲ್ಯುಎಫ್ಐ ವಿರುದ್ಧ ತಮ್ಮ ಪ್ರತಿಭಟನೆಯನ್ನು ಪುನರಾ ರಂಭಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಪ್ರತಿಭಟನೆ ನಡೆಸಿದ್ದ ಬಜರಂಗ್, ಸಾಕ್ಷಿ ಮತ್ತು ವಿನೇಶ್ ವಿರುದ್ಧ ಯಾವುದೇ ಕಠಿನ ಕ್ರಮ ತೆಗೆದು ಕೊಳ್ಳುವು ದಿಲ್ಲವೆಂದು ಲಿಖೀತ ಭರವಸೆ ನೀಡಿದರೆ ಡಬ್ಲ್ಯುಎಫ್ಐ ಮೇಲಿನ ತಾತ್ಕಾಲಿಕ ಅಮಾನತು ಆದೇಶ ವನ್ನು ಹಿಂಪಡೆಯುವುದಾಗಿ ಯುಡಬ್ಲ್ಯುಡಬ್ಲ್ಯು ಮಂಗಳವಾರ ತಿಳಿಸಿತ್ತು. ನಿಗದಿತ ಸಮಯದೊಳಗೆ ಚುನಾವಣೆ ನಡೆಸಲು ವಿಫಲವಾದ ಹಿನ್ನೆಲೆಯಲ್ಲಿ ಯುಡಬ್ಲ್ಯುಡಬ್ಲ್ಯು ಕಳೆದ ವರ್ಷದ ಆಗಸ್ಟ್ನಲ್ಲಿ ಡಬ್ಲ್ಯುಎಫ್ಐ ಅನ್ನು ಅಮಾನತುಗೊಳಿಸಿತ್ತು.
ಸಚಿವರ ಜತೆ ಮಾತುಕತೆ
“ಅಮಾನತು ಆದೇಶ ಹಿಂಪಡೆಯುವ ನಿಟ್ಟಿನಲ್ಲಿ ಸಂಜಯ್ ಸಿಂಗ್ ಮೋಸದ ವಿಧಾನ ಅನುಸರಿಸಿದ್ದಾರೆ ಎಂಬ ವಿಷಯ ನಮಗೆ ನಿನ್ನೆಯಷ್ಟೇ ತಿಳಿ ಯಿತು. ಈ ಬಗ್ಗೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಜತೆ ಕೇಳಿದಾಗ, ನಾವು ಏನು ಮಾಡುತ್ತೇವೆ ಎಂಬುದು ನಿಮಗೆ ತಿಳಿಯುತ್ತದೆ ಎಂದು ಹೇಳಿದರು. ಒಂದು ವೇಳೆ ಬೃಜ್ ಭೂಷಣ್ ಮತ್ತು ಸಂಜಯ್ ಸಿಂಗ್ ಅವರು ಡಬ್ಲ್ಯುಎಫ್ಐನ ವ್ಯವ ಹಾರ ಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದರೆ ನಾವು ಪ್ರತಿಭಟನೆ ಆರಂಭಿಸದೇ ಬೇರೆ ಮಾರ್ಗವಿಲ್ಲ’ ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.
“ನಮ್ಮ ಪ್ರತಿಭಟನೆ ಸದ್ಯ ಅಮಾನತು ಗೊಂಡಿದೆ. ನಾನು ಕುಸ್ತಿ ಸ್ಪರ್ಧೆಯಿಂದ ನಿವೃತ್ತಿ ಯಾಗಿರಬಹುದು. ಆದರೆ ಬೃಜ್ಭೂಷಣ್ ಮತ್ತು ಅವರ ಆಪ್ತರು ಫೆಡರೇಶನ್ ಕಾರ್ಯ ಚಟುವಟಿಕೆ ಯಲ್ಲಿ ಭಾಗಿಯಾಗಿ ವನಿತಾ ಕುಸ್ತಿಪಟುಗಳಿಗೆ ಕಿರುಕುಳ ನೀಡುವು ದನ್ನು ಸಹಿಸಲು ಸಾಧ್ಯವಿಲ್ಲ’ ಎಂದವರು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ: ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನೆರವಾದ ಸರ್ಫರಾಜ್ ಆಕರ್ಷಕ ಶತಕ
India Vs New Zealand Test: ಇನ್ನಿಂಗ್ಸ್ ಸೋಲು ತಪ್ಪಿಸಲು ಭಾರತ ಹೋರಾಟ
Ranaji Trophy: ಹೊರಮೈದಾನ ಒದ್ದೆ : ಕರ್ನಾಟಕ-ಕೇರಳ ಪಂದ್ಯಕ್ಕೆ ತೊಂದರೆ
London: ಡಬ್ಲ್ಯುಆರ್ ಚೆಸ್ ಮಾಸ್ಟರ್ ಅರ್ಜುನ್ ಎರಿಗೈಸ್ಗೆ ಪ್ರಶಸ್ತಿ
Test Cricket: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಪಾಕಿಸ್ಥಾನಕ್ಕೆ 152 ರನ್ಗಳ ಗೆಲುವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.