Artificial Intelligence; ಕಂಬಳಕ್ಕೆ AI ಎಂಟ್ರಿ; ಕೋಣಗಳ ಚಲನವಲನ ಅರಿಯಲು ಹೊಸ ತಂತ್ರಜ್ಞಾನ


ಕೀರ್ತನ್ ಶೆಟ್ಟಿ ಬೋಳ, Feb 15, 2024, 5:39 PM IST

kambalaArtificial Intelligence; ಕಂಬಳಕ್ಕೆ AI ಎಂಟ್ರಿ; ಕೋಣಗಳ ಚಲನವಲನ ಅರಿಯಲು ಹೊಸ ತಂತ್ರಜ್ಞಾನ

ಒಂಟಿಕರೆಯಿಂದ ಜೋಡು ಕರೆಯಾಗಿ, ಫ್ಲಡ್ ಲೈಟ್ ವ್ಯವಸ್ಥೆಯಿಂದ ಹಗಲು ರಾತ್ರಿಯ ಕೂಟ, ವಿಡಿಯೋ ಫಿನಿಶಿಂಗ್, ಸೆನ್ಸಾರ್ ಟೈಮಿಂಗ್ ಹೀಗೆ ಹಲವು ಹೊಸತನಕ್ಕೆ ಒಗ್ಗಿಕೊಂಡು ಬಂದ ತುಳುನಾಡಿದ ಜಾನಪದ ಕ್ರೀಡಾಚರಣೆ ಕಂಬಳವು ಇದೀಗ ಹೊಸ ಮಗ್ಗುಲಿಗೆ ಹೊರಳಿದೆ. ಅದುವೇ ಗೇಟ್ ಸಿಸ್ಟಂ.

ಗೇಟ್ ಸಿಸ್ಟಂ ಈಗಾಗಲೇ ಕಂಬಳದಲ್ಲಿ ಬಂದಿದೆ. ಫೆಬ್ರವರಿ 3ರಂದು ನಡೆದ ಐಕಳ ಕಂಬಳದಲ್ಲಿ ಗೇಟ್ ವ್ಯವಸ್ಥೆಯ ಪ್ರಾಯೋಗಿಕ ಪ್ರದರ್ಶನವೂ ನಡೆದಿದೆ. ಹೀಗಾಗಿ ಇದೀಗ ಇದರಲ್ಲಿ ವಿಶೇಷವೇನಿದೆ ಎನ್ನುವುದಾದರೆ, ಹೌದು ವಿಶೇಷವಿದೆ. ಅದು ಗೇಟ್ ಸಿಸ್ಟಂಗೆ ಕೃತಕ ಬುದ್ದಿಮತ್ತೆ ಅಂದರೆ ಎಐ (Artificial Intelligence) ಅಳವಡಿಕೆ.

ಕಂಬಳದಲ್ಲಿ ಸೆನ್ಸಾರ್ ಟೈಮಿಂಗ್ ನೊಂದಿಗೆ ಸಂಚಲನ ಮೂಡಿಸಿದ್ದ ಕಾರ್ಕಳದ ಸ್ಕೈ ವೀವ್ ಸಂಸ್ಥೆಯ ರತ್ನಾಕರ ನಾಯಕ್ ಅವರು ಗೇಟ್ ಅಭಿವೃದ್ದಿ ಪಡಿಸಿ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಕೋಣಗಳನ್ನು ಓಟಕ್ಕೆ ಸಿದ್ದಪಡಿಸುವ ಜಾಗದಲ್ಲಿ ಗೇಟ್ ಅಳವಡಿಸಿ ನಿಗದಿತ ಸಮಯದಲ್ಲಿ ಏಕಕಾಲದಲ್ಲಿ ಗೇಟ್ ತೆರೆದುಕೊಳ್ಳುತ್ತದೆ. ಈ ತಂತ್ರಜ್ಞಾನವನ್ನು ಮತ್ತೆ ಅಭಿವೃದ್ದಿಗೊಳಿಸಲು ಮುಂದಾಗಿದ್ದಾರೆ ರತ್ನಾಕರ ನಾಯಕ್.

ಸದ್ಯ ಇರುವ ಗೇಟ್ ನಲ್ಲಿ ನೂರು ಸೆಕೆಂಡ್ ಗಳ ಕ್ಷಣಗಣನೆ (Count down) ಮುಗಿದ ಬಳಿಕ ಗೇಟ್ ತನ್ನಷ್ಟಕ್ಕೆ ತೆರೆದುಕೊಳ್ಳುತ್ತದೆ. ಈ ವೇಳೆ ಎರಡೂ ಕರೆಯಲ್ಲಿರುವ ಕೋಣಗಳನ್ನು ಸರಿಯಾದ ಸ್ಥಾನದಲ್ಲಿರಿಸಬೇಕು. ಇದು ಕೋಣಗಳನ್ನು ಹಿಡಿದುಕೊಂಡಿರುವವರ ಜವಾಬ್ದಾರಿ. ಆದರೆ ಈ ವಿಚಾರದಲ್ಲಿ ಕೆಲವು ಭಿನ್ನ ಅಭಿಪ್ರಾಯಗಳು ಕೇಳಿಬಂದಿದ್ದವು. ಆ ಕ್ಷಣದಲ್ಲಿ ಕೋಣ ಸರಿ ನಿಲ್ಲದಿದ್ದರೆ, ಒಂದು ವೇಳೆ ಕೋಣಗಳು ಮೂತ್ರ ಮಾಡುತ್ತಿದ್ದರೆ ಆಗ ಹೇಗೆ ಸ್ಪರ್ಧೆ ಆರಂಭಿಸಲು ಸಾಧ್ಯ ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ಇದಕ್ಕೆ ಉತ್ತರ ಹುಡುಕುತ್ತಾ ಎಐ ತಂತ್ರಜ್ಞಾನ ಮೊರೆ ಹೋಗಿದ್ದಾರೆ ರತ್ನಾಕರ್ ನಾಯಕ್.

ಗೇಟ್ ರಚನೆಯಲ್ಲಿ ಉತ್ತಮ ದರ್ಜೆಯ ಕ್ಯಾಮರಾ ಅಳವಡಿಸಿ ಅದರಲ್ಲಿ ಕೋಣಗಳ ಚಲನವನ ಅರಿಯಲಾಗುತ್ತದೆ. ಕ್ಯಾಮರಾದಲ್ಲಿ ಗ್ರಿಡ್ ರಚನೆಯಾಗುತ್ತದೆ, ಆ ರೇಖೆಗಳ ಸಮಾನಂತರವಾಗಿ ಕೋಣಗಳನ್ನು ನಿಲ್ಲಿಸಬೇಕಾಗುತ್ತದೆ. ಕೋಣಗಳು ಸರಿಯಾಗಿ ನಿಂತ ಕೂಡಲೇ ಗೇಟ್ ತೆರೆದುಕೊಳ್ಳುತ್ತದೆ ಎಂದು ಮಾಹಿತಿ ನೀಡುತ್ತಾರೆ ರತ್ನಾಕರ್ ನಾಯಕ್.

ವಿವರವಾಗಿ ಹೇಳಬೇಕಾದರೆ, ಕೋಣಗಳನ್ನು ಸ್ಪರ್ಧೆಗೆ ಬಿಡುವ ಗಂತಿನಲ್ಲಿ ಅಳವಡಿಸುವ ಕ್ಯಾಮರಾದಲ್ಲಿ ಮೂರು ಸಮಾನಂತರ ರೇಖೆಗಳು ಮೂಡುತ್ತದೆ. ಇಲ್ಲಿ ಕೋಣಗಳು ಯಾವುದಾದರು ಒಂದು ರೇಖೆಗೆ ಸರಿಯಾಗಿ ನಿಲ್ಲಬೇಕು. ಒಂದು ಕರೆಯ ಕೋಣ ಆ ರೇಖೆಗೆ ಹಿಂದಿದ್ದರೆ ಆ ಕರೆಯ ಬದಿಯಲ್ಲಿ ಬೀಪ್ ಶಬ್ದವಾಗಿ ಸೂಚನೆ ನೀಡುತ್ತದೆ, ಆಗ ಕೋಣ ಹಿಡಿದುಕೊಂಡವರು ಕೋಣವನ್ನು ಸರಿಯಾಗಿ ನಿಲ್ಲಿಸಬೇಕು. ಕೋಣಗಳು ಸರಿಯಾದ ರೇಖೆಗೆ ಬಂದ ಕೂಡಲೇ (ಎರಡು ಜೋಡಿ ಕೋಣಗಳ ನೊಗಗಳು ಸಮಾನವಾಗಿ ಬಂದಾಗ) 3.2.1 ಕೌಂಟ್ ಡೌನ್ ಆಗಿ ಗೇಟ್ ತೆರೆದುಕೊಳ್ಳುತ್ತದೆ.

ಆಪ್ಟಿಕಲ್ ಸೆನ್ಸಾರ್, ಐಆರ್ ಸೆನ್ಸಾರ್, ಡಿಸ್ಟಾನ್ಸ್ ಸೆನ್ಸಾರ್ ಗಳನ್ನು ಬಳಸಲಾಗುತ್ತದೆ. ಸದ್ಯ ಇದು ಯೋಜನಾ ಹಂತದಲ್ಲಿದೆ. ಇದರ ಬಗ್ಗೆ ಹಲವು ಆಯಾಮಗಳಲ್ಲಿ ಅಧ್ಯಯನ ನಡೆಸಿ ಒಂದು ಅಂತಿಮ ಮಾಡೆಲ್‌ ಹೊರತರುವ ವಿಶ್ವಾಸದಲ್ಲಿದ್ದಾರೆ.

ರತ್ನಾಕರ ನಾಯಕ್

ಆಳ್ವಾಸ್ ಬೆಂಬಲ: ರತ್ನಾಕರ್ ನಾಯಕ್ ಅವರು ಯೋಜನೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಬೆಂಬಲವಾಗಿ ನಿಂತಿದೆ. ಐಕಳ ಕಂಬಳದಲ್ಲಿ ಗೇಟ್ ಮಾದರಿಯನ್ನು ಗಮನಿಸಿದ್ದ ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಅವರು ರತ್ನಾಕರ ನಾಯಕ್ ಅವರಿಗೆ ಬೆಂಬಲ ಸೂಚಿಸಿ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ಗೇಟ್ ಅಭಿವೃದ್ದಿಗೆ ಕೈಜೋಡಿಸಿದ್ದಾರೆ. ಹೀಗಾಗಿ ಆಳ್ವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದೀಗ ಎಐ ತಂತ್ರಜ್ಞಾನ ಅಳವಡಿಕೆಗೆ ಕೆಲಸ ಮಾಡುತ್ತಿದ್ದಾರೆ.

ಈ ಕಂಬಳ ಸೀಸನ್ ನಲ್ಲಿ ಹೊಸ ತಂತ್ರಜ್ಞಾನದ ಬಳಕೆ ಕಷ್ಟ. ಇನ್ನಷ್ಟು ಅಧ್ಯಯನ ನಡೆಸಿ ಕಂಬಳಕ್ಕೆ ಅನುಕೂಲವಾಗುವಂತೆ ಕೆಲಸ ನಡೆಸುತ್ತಿದ್ದೇವೆ. ಮುಂದಿನ ಸೀಸನ್ ನಲ್ಲಿ ಇದನ್ನು ಜಾರಿಮಾಡುತ್ತೇವೆ ಎನ್ನುತ್ತಾರೆ ರತ್ನಾಕರ್ ನಾಯಕ್.

*ಕೀರ್ತನ್ ಶೆಟ್ಟಿ ಬೋಳ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Recipe; ಈ ಸ್ನಾಕ್ಸ್ ಒಂದು ಸಲ ಮಾಡಿದ್ರೆ ಸಾಕು ಪದೇ ಪದೇ ಮಾಡ್ತೀರಾ ಏನ್ ರುಚಿ ಗೊತ್ತಾ!

Recipe; ಈ ಸ್ನಾಕ್ಸ್ ಒಂದು ಸಲ ಮಾಡಿದ್ರೆ ಸಾಕು ಪದೇ ಪದೇ ಮಾಡ್ತೀರಾ ಏನ್ ರುಚಿ ಗೊತ್ತಾ!

Sheetal Devi: ಕೈಗಳಿಲ್ಲದ ಹುಡುಗಿ ಬಿಲ್ಗಾರಿಕೆಯಲ್ಲಿ ನಿಪುಣೆ; ಇದು ಸ್ಪೂರ್ತಿಯ ಕಥೆ

Sheetal Devi: ಕೈಗಳಿಲ್ಲದ ಹುಡುಗಿ ಬಿಲ್ಗಾರಿಕೆಯಲ್ಲಿ ನಿಪುಣೆ; ಇದು ಸ್ಪೂರ್ತಿಯ ಕಥೆ

1-asaasas

Haryana ಗೆಲ್ಲಲು ಕೈ ಕಸರತ್ತು: ರಾಹುಲ್ ಭೇಟಿಯಾದ ವಿನೇಶ್, ಬಜರಂಗ್ !

6-WLD

Weight Loss Drinks: ತೂಕ, ಕೊಬ್ಬು ಕಡಿಮೆ ಮಾಡಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ

Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.