Desi Swara: ಆರ್ಯ ವೈಶ್ಯರು ವಾಸವಿ ಕ್ಲಬ್ ಮೆರ್ಲಿಯನ್ -ವಿಶೇಷ ಪೂಜೆ, ಲಲಿತಾ ಸಹಸ್ರ ನಾಮ
Team Udayavani, Feb 17, 2024, 1:45 PM IST
ಸಿಂಗಾಪುರ: ಆರ್ಯ ವೈಶ್ಯರ ಆರಾಧ್ಯ ದೈವ ಶ್ರೀ ವಾಸವಿ ಮಾತೆಯ ಅಗ್ನಿಪ್ರವೇಶ (ಸ್ವಯಂದಹನ) ದಿನದ ನಿಮಿತ್ತ ಸಿಂಗಾಪುರದ ಆರ್ಯ ವೈಶ್ಯರು ವಾಸವಿ ಕ್ಲಬ್ ಮೆರ್ಲಿಯನ್ ಆಶ್ರಯದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರಗಿತು.
ಸೇಂಗ್ಕಾಂಗ್ ಶ್ರೀ ಅರುಲ್ಮಿಗು ವೇಲ್ಮುರುಗನ್ ಜ್ಞಾನಮುನೀಶ್ವರರ್ ದೇವಸ್ಥಾನದಲ್ಲಿ ಹಿರಿಯ ಸಮಿತಿ ಸದಸ್ಯರಾದ ಕಿಶೋರ್ ಮುಕ್ಕ ಅವರ ನೇತೃತ್ವದಲ್ಲಿ ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಮೊದಲಿಗೆ ಅಮ್ಮನವರ ಮೂಲವಿರಟ್ಟಕ್ಕೆ ವಿಶೇಷ ಅಭಿಷೇಕ ಮಾಡಲಾಯಿತು. ಅನಂತರ ಆರ್ಯ ವೈಶ್ಯ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಮೂಹಿಕವಾಗಿ ಲಲಿತಾ ಸಹಸ್ರ ನಾಮಗಳನ್ನು ಜಪಿಸಿದರು. ವಿಶೇಷ ಅಲಂಕಾರವಾಗಿ ಪಿಡಪ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ವಾಸವಿ ಮಾತಾ ಅಷ್ಟೋತ್ತರ ಪಾರಾಯಣ ನಡೆಯಿತು.
ಸುಮಾರು ನೂರೆಂಟು ಭಕ್ತರ ಜಯಘೋಷಗಳ ನಡುವೆ ನಡೆದ ಈ ಪೂಜಾ ಕಾರ್ಯಕ್ರಮವು ಭಕ್ತರನ್ನು ಹಾಗೂ ನೋಡುಗರನ್ನು ಪುಳಕಿತಗೊಳಿಸಿತು. ಭಕ್ತರಿಗೆ ತೀರ್ಥ, ಅನ್ನ ಪ್ರಸಾದ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾಗಿ ಕಾರ್ಯನಿರ್ವಹಿಸಿದ ದಾನಿಗಳಾದ ತೋಟಂಶೆಟ್ಟಿ ವಸಂತ ಮಧುಸೂದನ್ ಮತ್ತು ಪಬ್ಬಟಿ ಮುರಳಿಕೃಷ್ಣ ಅವರನ್ನು ಸಮಿತಿಯ ಸದಸ್ಯರು ಸಮ್ಮಾನಿಸಿದರು. ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ಮುರಳಿಕೃಷ್ಣ, ಕಾರ್ಯದರ್ಶಿ ಸುಮನ್ ರಾಯಲ ಗಾರ್ಲು ಅವರು ಸಂಸ್ಕೃತಿಯನ್ನು ಪರಿಚಯಿಸುವ ಮತ್ತು ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಿರುವ ಎಲ್ಲ ಆರ್ಯ ವೈಶ್ಯರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದರು. ಕೋರ್ ಕಮಿಟಿ ಸದಸ್ಯರಾದ ಮುಕ್ಕ ಕಿಶೋರ್, ಕಿಶೋರ್ ಶೆಟ್ಟಿ, ಆನಂದ ಗಾಂಡೆ, ರಾಜಾ ವಿಶ್ವನಾಥು, ಫಣೇಶ್ ಆತ್ಮೂರಿ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”
Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ
Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ
ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್: ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಯಕ್ಷಧ್ರುವ ಪಟ್ಲ ಫೌಂಡೇಶನ್: 75 ದಿನಗಳ ಯಕ್ಷಯಾನ ಸಮಾರೋಪ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ
Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.