Desi Swara: ಓದುಗರನ್ನು ಕಾಣದ ಲೋಕಕೊಯ್ಯುವ “ನಂಬಿಕೆಯೆಂಬ ಗಾಳಿಕೊಡೆ’

ಪತ್ತೆದಾರಿ ಅಂಶ ಇರುವುದು ಕತೆಯಲ್ಲಿ ಎದ್ದು ಕಾಣುತ್ತದೆ.

Team Udayavani, Feb 17, 2024, 2:42 PM IST

Desi Swara: ಓದುಗರನ್ನು ಕಾಣದ ಲೋಕಕೊಯ್ಯುವ “ನಂಬಿಕೆಯೆಂಬ ಗಾಳಿಕೊಡೆ’

ಬದುಕಿನ ಅನೂಹ್ಯ ಸಂಬಂಧಗಳ ಪೇಚುಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತ ಕಣ್ಣೆದುರಿಗಿದ್ದರೂ ಕಾಣದ ಲೋಕವೊಂದರ ಒಳನೋಟಗಳನ್ನು ವೀರಲೋಕ ಬುಕ್ಸ್‌ ಪ್ರಕಾಶನದ ಡಾ| ಪ್ರೇಮಲತಾ ಬಿ. ಅವರ ನಂಬಿಕೆಯೆಂಬ ಗಾಳಿಕೊಡೆ ಕಥಾಸಂಕಲನದಲ್ಲಿ ಕಾಣಬಹುದು.

ಹತ್ತು ಕತೆಗಳಿರುವ ಈ ಸಂಕಲನದ ಶೀರ್ಷಿಕೆಯ ನಂಬಿಕೆಯೆಂಬ ಗಾಳಿಕೊಡೆ ಅರ್ಥದಂತೆ ನಂಬಿಕೆಯೇ ಮೂಲಾಧಾರವಾಗಿ ಓದುಗರಿಗೆ ಕತೆಯಿಂದ ಕತೆಗೆ ಹೊಸ ಜಗತ್ತನ್ನು ಪರಿಚಯಿಸುತ್ತ ಸಾಗುತ್ತದೆ. ಅದರಲ್ಲೂ ಭಾಷೆಯನ್ನು ನುರಿತ ಕತೆಗಾರರಂತೆ ಬಳಸಿರುವುದು ಅವರು ಕಥಾಲೋಕವನ್ನು ಗಂಭೀರವಾಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಉದಾಹರಣೆಯಾಗಿದೆ. ಇಲ್ಲಿರುವ ಕತೆಗಳು ಒಂದಕ್ಕಿಂತ ಒಂದು ವಿಷಯ ಮತ್ತು ವಸ್ತುವಿನ ಆಯ್ಕೆಯಿಂದ ವಿಶೇಷತೆಯಿಂದ ಕೂಡಿವೆ. ಗ್ರಾಮ ಜಗತ್ತಿನಿಂದ ಹಿಡಿದು ಸಿರಿಯಾ ದೇಶದವರಿಗೂ ಇವರ ಕತೆಗಳ ವಿಷಯ ವಸ್ತುಗಳು ಹರಡಿವೆ.

ಮ್ಯಾಜಿಕ್‌ ಮಶ್ರೂಮ್‌ ಸಂಕಲನದ ಮೊದಲ ಕತೆಯಾದ ಮ್ಯಾಜಿಕ್‌ ಮಶ್ರೂಮ್‌ ಕತೆಯಲ್ಲಿ ನಂಬಿಕೆಗಳ ನಡುವೆ ಸಿಲುಕಾಡುವ ಮನುಷ್ಯನ ದ್ವಂದ್ವಗಳ ನಡುವಿನ ಹೊಯ್ದಾಟವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಕತೆಯೊಳಗಿನ ಕತೆಯಂತೆ ಸಾಗುವ ಈ ಕತೆಯ ವಿಶೇಷತೆ ಎಂದರೆ ಕತೆಯ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡು ಆಪ್ತವಾದ ಮತ್ತು ಗಟ್ಟಿ ನಿರೂಪಣೆಯೊಂದಿಗೆ ಹೊಸ ಲೋಕದೊಡನೆ ಮುಖಾಮುಖೀ ಮಾಡಿಸುತ್ತದೆ.

ಶಶಿ ಎಂಬುವನು ತನ್ನ ಗೆಳೆಯರ ಜತೆ ಸೇರಿ ಊರಲ್ಲಿ ಹಬ್ಬಿರುವ ಒಂದು ಕುತೂಹಲಕಾರಿ ಸುದ್ದಿಯನ್ನು ಬೆನ್ನು ಹತ್ತಿ ಹೊಸ ಹೊಸ ಅನುಭವಗಳಿಗೆ ತೆರೆದುಕೊಳ್ಳುತ್ತಾನೆ. ಇಡೀ ಊರಿಗೆ ಊರೇ ಆಗಂತುಕನ ಆಗಮನದಿಂದ ಭಯಭೀತರಾಗಿರುತ್ತಾರೆ. ಊರಲ್ಲಿ ಸಾವುನೋವುಗಳು ಹೆಚ್ಚಾಗುತ್ತವೆ. ಶಶಿ ಇದರ ಹಿನ್ನೆಲೆಯನ್ನು ಅರಿಯಲು ದುಸ್ಸಾಹಸ ಮಾಡಿ ಕೊನೆಗೆ ತಾನೂ ಸಹ ಅದರ ತಾಳಕ್ಕೆ ಸಿಲುಕಿ ಒದ್ದಾಡುವುದನ್ನು ಕತೆಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಪತ್ತೆದಾರಿ ಅಂಶ ಇರುವುದು ಕತೆಯಲ್ಲಿ ಎದ್ದು ಕಾಣುತ್ತದೆ.

ಎಂಕಣ್ಣ, ಶಶಿ, ರಾಜ, ಸೀನ, ಗೋಪಿ, ಅವನ ಹೆಂಡತಿ ಹೀಗೆ ಪಾತ್ರ ಪರಿಚಯ ಕತೆ ಬೆಳೆದಂತೆ ಹಠಾತ್ತನೆ ಆಗಿ ಎದುರು ಬಂದು ನಿಲ್ಲುತ್ತವೆ. ಇದು ಕತೆಗಾರರ ಪ್ರಯೋಗ ಎನ್ನಬಹುದಾದರೂ ಸಾಮಾನ್ಯ ಓದುಗರಿಗೆ ಒಂದಷ್ಟು ತೊಡಕಾಗಬಹುದು.

ನಂಬಿಕೆಯೆಂಬ ಗಾಳಿಕೊಡೆ ಪಾರ್ಟಿ ಮಾಡಿ ಬರುವಾಗ ತನ್ನ ಮೇಲೆ ಅತ್ಯಾಚಾರವಾಯಿತು ಎಂದು ಹೆಣ್ಣುಮಗಳು ತನ್ನ ಗಂಡನೆದುರು ನಡೆದ ವಿಷಯವನ್ನೆಲ್ಲ ಹಂಚಿಕೊಳ್ಳುತ್ತಾಳೆ. ಆ ಅನಾಮಿಕ ಆರೋಪಿಯ ಬಗ್ಗೆ ನಿರಂತರ ತನಿಖೆ ನಡೆಯುತ್ತದೆ. ಪೋಲಿಸ್‌ ಇಲಾಖೆ ಎಲ್ಲ ಕಡೆಗೂ ಪ್ರಯತ್ನಿಸಿದರೂ ಸುಳಿವು ಸಿಗುವುದಿಲ್ಲ. ಕೊನೆಗೆ ಹಳ್ಳಿಯವನೊಬ್ಬ ತಾನು ಮೂರು ವರ್ಷದ ಹಿಂದೆ ಡ್ರೈವರ್‌ ಆಗಿ ಕೆಲಸ ಮಾಡುವಾಗ ಆದ ಘಟನೆಯನ್ನು ಮೆಲುಕು ಹಾಕುವುದರೊಂದಿಗೆ ಕತೆಗೆ ಇನ್ನೊಂದು ಆಯಾಮ ಸಿಗುತ್ತದೆ. ಕತೆ ಕೊನೆಯವರೆಗೂ ಕುತೂಹಲದಿಂದ ಓದಿಸಿಕೊಳ್ಳುತ್ತದೆ.

ವ್ಯಥೆಯೊಂದು ಭ್ರಮೆಯಾಗಿ ಅಮ್ಮ ಎನ್ನುವುದು ಯಾವಾಗಲೂ, ಎಲ್ಲರಿಗೂ ಭಾವನಾತ್ಮಕ ನಂಟು. ಸಣ್ಣಪುಟ್ಟ ವೈರುಧ್ಯಗಳ ನಡುವೆ ಸದಾ ಮೀಟುವ ಭಾವ ತಂತು. ತಾಯಿ ಮತ್ತು ಮಗಳ ನಡುವಿನ ತೊಳಲಾಟ ಈ ಕತೆಯಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿದೆ. ಅಮ್ಮ ಯಾವಾಗಲೂ ತನ್ನ ನೋವು ನಲಿವುಗಳನ್ನು ಬಚ್ಚಿಟ್ಟುಕೊಂಡು ತನ್ನ ಮಗನ ಪರವೇ ಇರುವವಳು, ಅದರಲ್ಲೂ ಹೆಣ್ಣುಮಕ್ಕಳ ಮೇಲೆ ಎಷ್ಟೇ ಪ್ರೀತಿ ಇದ್ದರೂ ತನ್ನ ಮಗನನ್ನು ಬಿಟ್ಟುಕೊಡಲಾರದವಳು. ಈ ಭಾವನಾತ್ಮಕ ವಿಷಯಗಳನ್ನು ಇರಿಸಿಕೊಂಡಿರುವ ಕತೆ ಓದುಗರನ್ನು ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. ಸರಳ ನಿರೂಪಣೆ ಇರುವ ಈ ಕತೆ ತಾಯಿ ಮಗಳ ನಡುವಿನ ಆಂತರಿಕ ತುಮಲಗಳಿಗೆ ಮುಖಾಮುಖಿಯಾಗಿಸುತ್ತದೆ.

“ಸಂಬಂಧಗಳು’ ಕತೆಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿಯೊಂದು ಬೇರ್ಪಟ್ಟು ಕೊನೆಗೆ ಸಾವಿನ ಸಂದರ್ಭಕ್ಕೆ ಬರುವ ಇದು ಸಂಬಂಧಗಳ ಬಗ್ಗೆ ಇರುವ ಕತೆ. ಸಂಕಲನದ ಇತರ ಕತೆಗಳಾದ ತೆರವು, ನಿರ್ವಾತ, ಗೊಡ್ಡು, ವರ್ತುಲ, ದ್ರೋಹ, ಹಿಂದಿಡದ ಹೆಜ್ಜೆ, ಹೊಸ ಲೋಕವನ್ನು ಪರಿಚಯಿಸುತ್ತವೆ. ಪ್ರೇಮಲತಾ ಬಿ. ಅವರ ಐದು ಬೆರಳುಗಳು ಎನ್ನುವ ಕಥಾಸಂಕಲನಕ್ಕೆ ಡಾ| ಎಚ್‌. ಗಿರಿಜಮ್ಮ ಪ್ರಶಸ್ತಿ ಬಂದಿದೆ.

*ಅನಿಲ್‌ ಗುನ್ನಾಪೂರ

ಟಾಪ್ ನ್ಯೂಸ್

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ

Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ

Police-Head

Karnataka Police ಸುಳ್ಳು ಸುದ್ದಿ ತಡೆಗೆ ಎಐ ಬಳಸಿ: ಸಿಎಂ ಸಿದ್ದರಾಮಯ್ಯ ಸೂಚನೆ

Prahalad-Joshi

MUDA Scam ತನಿಖೆ ಸಿಬಿಐಗೆ ವಹಿಸಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ

Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.