5D movie review; ಬ್ಲಡ್‌ ಮಾಫಿಯಾಗೆ ಥ್ರಿಲ್ಲರ್‌ ಲೇಪನ


Team Udayavani, Feb 18, 2024, 10:11 AM IST

5D movie review; ಬ್ಲಡ್‌ ಮಾಫಿಯಾಗೆ ಥ್ರಿಲ್ಲರ್‌ ಲೇಪನ

ನಾಯಕನಿಗೆ ಬೋರ್‌ವೆಲ್‌ ತೋಡುವ ಕಾಯಕ. ನಾಯಕಿ ಆಟೋ ಓಡಿಸುವ ಚಾಲಕಿ. ಇವರಿಬ್ಬರದ್ದೂ ಸಾತ್ವಿಕ-ಸರಳ ಜೀವನ ಅಂದುಕೊಳ್ಳುವಷ್ಟರಲ್ಲಿ ಎರಡು ಭೀಕರ ಕೊಲೆಗಳಾಗುತ್ತವೆ. ಅದಕ್ಕೂ ನಾಯಕನಿಗೂ ಸಂಬಂಧವಿದೆಯಾ ಅಂದುಕೊಳ್ಳುತ್ತಿರುವಾಗಲೇ ಕಥೆಗೊಂದು ಟ್ವಿಸ್ಟ್‌ ಸಿಗುತ್ತದೆ. ಅದರ ಬೆನ್ನಲ್ಲೇ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಅಭಿನಂದನ್‌ (ಎಸ್‌. ನಾರಾಯಣ್‌) ಎಂಟ್ರಿ ಕೊಡುತ್ತಾರೆ. ಅಲ್ಲಿಂದ ಕಥೆಯ ಓಘ ಮತ್ತಷ್ಟು ಹೆಚ್ಚಾಗುತ್ತದೆ.

ತನಿಖೆಯಿಂದ ಒಂದೊಂದೇ ಸಿಕ್ಕುಗಳನ್ನು ಬಿಡಿಸುತ್ತಾ ಸಾಗುವ ಅಭಿನಂದನ್‌, ಮಧ್ಯಂತರದ ವೇಳೆಗೆ ಒಂದೊಳ್ಳೆ ಶಾಕ್‌ ಕೊಟ್ಟು ಬ್ರೇಕ್‌ ಕೊಡುತ್ತಾರೆ. ಮೊದಲಾರ್ಧದಲ್ಲಿ ನಡೆದ ಕೊಲೆಗಳು ಹಾಗೂ ದ್ವಿತೀಯಾರ್ಧದಲ್ಲಿ ನಡೆಯುವ ಮತ್ತಷ್ಟು ಕೊಲೆಗಳ ಜಾಡು ಹಿಡಿಯುವುದೇ ಅಭಿನಂದನ್‌ ಫ‌ುಲ್‌ ಟೈಂ ಕೆಲಸ. ಸರಣಿ ಕೊಲೆಗಳು, ಐವರ ದುಷ್ಟಕೂಟ, ಬ್ಲಿಡ್‌ ಮಾಫಿಯಾ, ನಡುನಡುವೆ ಕೆಲವೊಂದು ಟ್ವಿಸ್ಟ್‌ಗಳು…

ಒಂದು ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾಕ್ಕೆ ಬೇಕಾದ ಎಲ್ಲ ಸರಕನ್ನು ಇಟ್ಟುಕೊಂಡು ಎಸ್‌. ನಾರಾಯಣ್‌ “5ಡಿ’ ಸಿನಿಮಾ ಮಾಡಿದ್ದಾರೆ. ಸಿನಿಮಾದಲ್ಲಿ ಅಲ್ಲಲ್ಲಿ ಒಂದಷ್ಟು ತಿರುವುಗಳು ನೋಡುಗರಿಗೆ ಎದುರಾಗುತ್ತವೆ. ಪ್ರಮುಖ ಪಾತ್ರಧಾರಿಗಳ ಜತೆಗೆ ಅವರೂ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ನಾನಾ ದಿಕ್ಕಿನಲ್ಲಿ ಸಾಗುವ ಕಥೆಯಲ್ಲಿ ಒಂದು ಸಂದೇಶ ಹೇಳುವ ಪ್ರಯತ್ನ ಕೂಡ ಮಾಡಲಾಗಿದೆ. ಅಂತಿಮವಾಗಿ ಕಥೆಯ ಕೊನೆಗೆ ಒಂದು ತೀರ್ಪು ಕೊಟ್ಟು “ಶುಭಂ’ ಹಾಡಲಾಗುತ್ತದೆ.

ಆದಿತ್ಯ ಮೊದಲಾರ್ಧ ಗಂಭೀರವಾಗಿದ್ದರೂ, ಅದು ಕಥೆಗೆ ಪೂರಕವಾಗಿದೆ ಎಂಬುದು ನಂತರ ತಿಳಿಯುತ್ತದೆ. ಅದಿತಿ ಇದ್ದಷ್ಟು ಹೊತ್ತು ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ. ಜ್ಯೋತಿ ರೈ ಎರಡೂ ಶೇಡ್‌ ಗಳಲ್ಲಿ ಗಮನ ಸೆಳೆಯುತ್ತಾರೆ. ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಸಿನಿಮಾಗಳನ್ನು ಇಷ್ಟಪಡುವವರು ಒಮ್ಮೆ “5ಡಿ’ ನೋಡಿಬರಬಹುದು.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Heavy-rain

Heavy Rain: ಕರಾವಳಿ ಜಿಲ್ಲೆಗಳು ಸೇರಿ ರಾಜ್ಯಾದ್ಯಂತ ಇನ್ನು 5 ದಿನ ಭಾರೀ ಮಳೆ

1-aaaa

Ex-Minister ಬಿ.ಸಿ.ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ

Ramanivas Rawat took oath as minister twice within 15 minutes

Bhopal; 15 ನಿಮಿಷದೊಳಗೆ ಎರಡು ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಮನಿವಾಸ್ ರಾವತ್

Rain Heavy

Heavy Rain ಅಬ್ಬರ; ಜು.9 ರಂದು ಉಡುಪಿ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

1-asaas

Manipur; ಪರಿಹಾರ ಶಿಬಿರಗಳಿಗೆ ರಾಹುಲ್ ಗಾಂಧಿ ಭೇಟಿ: ಅಚಲ ಬದ್ಧತೆ ಎಂದ ಕಾಂಗ್ರೆಸ್

Sandeshkhali Case:ಸಿಬಿಐ ತನಿಖೆ ಎತ್ತಿಹಿಡಿದ ಸುಪ್ರೀಂ,ಪಶ್ಚಿಮಬಂಗಾಳ ಸರ್ಕಾರದ ಅರ್ಜಿ ವಜಾ!

Sandeshkhali Case:ಸಿಬಿಐ ತನಿಖೆ ಎತ್ತಿಹಿಡಿದ ಸುಪ್ರೀಂ,ಪಶ್ಚಿಮಬಂಗಾಳ ಸರ್ಕಾರದ ಅರ್ಜಿ ವಜಾ!

SSMB29: ಮಹೇಶ್‌ – ಪ್ರಭಾಸ್‌ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್‌ ನೀಡಲಿದ್ದಾರೆ ಹಿರಿಯ ನಟ

SSMB29: ಮಹೇಶ್‌ – ಪ್ರಭಾಸ್‌ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್‌ ನೀಡಲಿದ್ದಾರೆ ಹಿರಿಯ ನಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jigar movie review

Jigar movie review; ಆ್ಯಕನ್‌ ಡ್ರಾಮಾದಲ್ಲೊಂದು ಪ್ರೇಮ್‌ ಕಹಾನಿ

Kaagada movie review

Kaagada movie review; ಕಾಗದ ಮೇಲೆ ಅರಳಿದ ಮುಗ್ಧ ಪ್ರೀತಿ

Sambhavami Yuge Yuge Review

Sambhavami Yuge Yuge Review; ಊರು ಗೆದ್ದ ಹಳ್ಳಿಹೈದ

love li movie review

Love Li movie review: ಪ್ರೀತಿ, ದ್ವೇಷ ಮತ್ತು ಅವನು!

Shivamma movie review;

Shivamma movie review; ಗಟ್ಟಿಗಿತ್ತಿಯ ಬದುಕಿನ ಕನಸು

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

Davanagere; ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಹರಿಹರ ನಗರಸಭೆ ಪೌರಾಯುಕ್ತ

Davanagere; ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಹರಿಹರ ನಗರಸಭೆ ಪೌರಾಯುಕ್ತ

ಬಳ್ಳಾರಿ: ವಿನಾಶದ ಅಂಚಿಗೆ ಸಂಡೂರು ನೈಸರ್ಗಿಕ ಸಂಪತ್ತು?

ಬಳ್ಳಾರಿ: ವಿನಾಶದ ಅಂಚಿಗೆ ಸಂಡೂರು ನೈಸರ್ಗಿಕ ಸಂಪತ್ತು?

TOOFAAN

Toofaan; ಭರವಸೆ ಮೂಡಿಸಿದ ತೂಫಾನ್‌ ನೋಟ

Heavy-rain

Heavy Rain: ಕರಾವಳಿ ಜಿಲ್ಲೆಗಳು ಸೇರಿ ರಾಜ್ಯಾದ್ಯಂತ ಇನ್ನು 5 ದಿನ ಭಾರೀ ಮಳೆ

1-aaaa

Ex-Minister ಬಿ.ಸಿ.ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.