Health: ಹೃದಯದ ಮೇಲೆ ಕೀಟೊ ಪರಿಣಾಮವೇನು ?


Team Udayavani, Feb 18, 2024, 11:00 AM IST

4-keto

ಹೃದಯದ ಆರೋಗ್ಯದ ಮೇಲೆ ಕಿಟೊಜೆನಿಕ್‌ (ಕಿಟೊ) ಪಥ್ಯಾಹಾರದ ಪರಿಣಾಮಗಳ ಬಗೆಗಿನ ಚರ್ಚೆ ಮತ್ತು ಸಂಶೋಧನೆಗಳು ಇನ್ನೂ ನಡೆಯುತ್ತಿವೆ. ಕೆಲವು ಸಂಶೋಧನೆಗಳು ಕಿಟೊ ಪಥ್ಯಾಹಾರವು ಹೃದಯ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳುತ್ತವೆಯಾದರೆ ಹೃದ್ರೋಗಗಳ ಕೆಲವು ಅಪಾಯ ಕಾರಣಗಳ ಮೇಲೆ ಕೀಟೊ ಪಥ್ಯಾಹಾರ ಬೀರುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಇನ್ನು ಕೆಲವು ಅಧ್ಯಯನಗಳು ಬೊಟ್ಟು ಮಾಡುತ್ತವೆ. ಹೀಗಾಗಿ ಪಥ್ಯಾಹಾರ ಆಯ್ಕೆ ಮಾಡಿಕೊಳ್ಳುವುದಕ್ಕೆ ಮುನ್ನ ವಾದ-ವಿವಾದದ ಎರಡೂ ಆಯಾಮಗಳನ್ನು ಅರ್ಥ ಮಾಡಿಕೊಂಡು ವೈಯಕ್ತಿಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಒಳಿತು. ಹೃದಯ ಆರೋಗ್ಯದ ಮೇಲೆ ಕಿಟೊ ಪಥ್ಯಾಹಾರ ಹೇಗೆ ಪರಿಣಾಮ ಬೀರಬಹುದು ಎಂಬ ವಿವರ ಇಲ್ಲಿದೆ. ­

ತೂಕ ಇಳಿಕೆ: ಕೀಟೊ ಪಥ್ಯಾಹಾರದಿಂದ ದೇಹತೂಕದಲ್ಲಿ ಗಮನಾರ್ಹ ಇಳಿಕೆಯಾಗುತ್ತದೆ. ಇದರಿಂದ ರಕ್ತದೊತ್ತಡ ಇಳಿಕೆ, ಕೊಲೆಸ್ಟರಾಲ್‌ ಮಟ್ಟ ನಿಯಂತ್ರಣ, ರಕ್ತದಲ್ಲಿ ಸಕ್ಕರೆಯಂಶದ ಮೇಲೆ ನಿಯಂತ್ರಣದಂತಹ ಹೃದಯ ಆರೋಗ್ಯಕ್ಕೆ ಪೂರಕವಾದ ಅನುಕೂಲಗಳು ಆಗಬಹುದು. ­

ಟ್ರೈಗ್ಲಿಸರೈಡ್‌ ಇಳಿಕೆ: ಕಿಟೊ ಪಥ್ಯಾಹಾರದಿಂದ ಟ್ರೈಗ್ಲಿಸರೈಡ್‌ ಮಟ್ಟ ಇಳಿಕೆಯಾಗಬಹುದು ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಟ್ರೈಗ್ಲಿಸರೈಡ್‌ ಮಟ್ಟ ತಗ್ಗಿದರೆ ಹೃದಯದ ಆರೋಗ್ಯಕ್ಕೆ ಪೂರಕ. ಟ್ರೈಗ್ಲಿಸರೈಡ್‌ ಮಟ್ಟ ಹೆಚ್ಚಿದ್ದರೆ ಹೃದ್ರೋಗ ಉಂಟಾಗುವ ಅಪಾಯ ಅಧಿಕ. ­

“ಉತ್ತಮಎಚ್‌ಡಿಎಲ್‌ ಕೊಲೆಸ್ಟರಾಲ್‌ ಹೆಚ್ಚಳ: ಕಿಟೊ ಪಥ್ಯಾಹಾರದಿಂದ “ಉತ್ತಮ’ ಕೊಲೆಸ್ಟರಾಲ್‌ ಎಂದು ಕರೆಯಲ್ಪಡುವ ಹೈ ಡೆನ್ಸಿಟಿ ಲಿಪೊಪ್ರೊಟೀನ್‌ (ಎಚ್‌ಡಿಎಲ್‌) ಕೊಲೆಸ್ಟರಾಲ್‌ ಮಟ್ಟ ಹೆಚ್ಚುತ್ತದೆ. ಎಚ್‌ಡಿಎಲ್‌ ಮಟ್ಟ ಹೆಚ್ಚಿರುವುದಕ್ಕೂ ಹೃದ್ರೋಗ ಅಪಾಯ ಕಡಿಮೆಯಾಗುವುದಕ್ಕೂ ಸಂಬಂಧವಿದೆ.

ಸ್ಯಾಚುರೇಟೆಡ್‌ ಕೊಬ್ಬು ಸೇವನೆ ಹೆಚ್ಚಳ: ಕಿಟೊ ಪಥ್ಯಾಹಾರದ ಒಂದು ಕಳವಳಕಾರಿ ಅಂಶ ಎಂದರೆ ಸ್ಯಾಚುರೇಟೆಡ್‌ ಕೊಬ್ಬುಗಳ ಸೇವನೆ ಹೆಚ್ಚುವುದು. ಇದರಿಂದ “ಕೆಟ್ಟ’ ಕೊಲೆಸ್ಟರಾಲ್‌ ಎಂದು ಕರೆಯಲ್ಪಡುವ ಲೋ ಡೆನ್ಸಿಟಿ ಲಿಪೊಪ್ರೊಟೀನ್‌ (ಎಲ್‌ ಡಿಎಲ್‌) ಕೊಲೆಸ್ಟರಾಲ್‌ ಮಟ್ಟ ಹೆಚ್ಚುತ್ತದೆ. ಎಲ್‌ಡಿಎಲ್‌ ಮಟ್ಟ ಹೆಚ್ಚಿರುವುದು ಹೃದ್ರೋಗ ಅಪಾಯಕ್ಕೆ ಕಾರಣವಾಗುವ ಅಂಶಗಳಲ್ಲಿ ಒಂದು.

ಪೌಷ್ಟಿಕಾಂಶ ಅಸಮತೋಲನ: ಕಿಟೊ ಪಥ್ಯಾಹಾರವು ಹಣ್ಣುಹಂಪಲು, ತರಕಾರಿಗಳು ಮತ್ತು ಇಡೀ ಧಾನ್ಯಗಳಂತಹ ಕಾಬೊìಹೈಡ್ರೇಟ್‌ ಸಮೃದ್ಧ ಆಹಾರವಸ್ತುಗಳ ಸೇವನೆಯ ಮೇಲೆ ನಿಯಂತ್ರಣ ವಿಧಿಸುತ್ತದೆ. ಈ ಆಹಾರವಸ್ತುಗಳು ಹೃದಯ ಆರೋಗ್ಯಕ್ಕೆ ಪೂರಕವಾದ ಖನಿಜ, ವಿಟಮಿನ್‌ಗಳು ಮತ್ತು ನಾರಿನಂಶದ ಪ್ರಮುಖ ಮೂಲಗಳಾಗಿವೆ. ಪೌಷ್ಟಿಕಾಂಶಗಳ ಅಸಮತೋಲನದಿಂದ ದೀರ್ಘ‌ಕಾಲೀನವಾಗಿ ಋಣಾತ್ಮಕ ಪರಿಣಾಮಗಳು ಉಂಟಾಗಬಹುದು. ­

ಎಂಡೊಥೇಲಿಯಲ್‌ ಕಾರ್ಯಚಟುವಟಿಕೆಯ ಮೇಲೆ ಸಂಭಾವ್ಯ ಪರಿಣಾಮ: ಕಿಟೊ ಪಥ್ಯಾಹಾರದಿಂದ ರಕ್ತನಾಳಗಳ ಆರೋಗ್ಯಕ್ಕೆ ಸಂಬಂಧಿಸಿದ ಎಂಡೊಥೇಲಿಯಲ್‌ ಕಾರ್ಯಚಟುವಟಿಕೆಗಳಿಗೆ ಅಡಚಣೆ ಉಂಟುಮಾಡಬಹುದು ಎಂದು ಕೆಲವು ಅಧ್ಯಯನಗಳು ಹೇಳಿವೆ. ಎಂಡೊಥೇಲಿಯಲ್‌ ಕಾರ್ಯಚಟುವಟಿಕೆಗಳಿಗೆ ಕುಂದು ಉಂಟಾಗುವುದು ಹೃದ್ರೋಗ ಬೆಳವಣಿಗೆ ಹೊಂದಲು ಪೂರಕ ಸನ್ನಿವೇಶವನ್ನು ನಿರ್ಮಿಸುತ್ತದೆ.

­ದೀರ್ಘ‌ಕಾಲೀನ ಅಧ್ಯಯನ ಕಡಿಮೆ: ಕಿಟೊ ಪಥ್ಯಾಹಾರವು ಹೃದಯ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತಾಗಿ ಇದುವರೆಗೆ ನಡೆದಿರುವ ಅಧ್ಯಯನಗಳು ತುಲನಾತ್ಮಕವಾಗಿ ಕಿರು ಅವಧಿಯವು. ದೀರ್ಘ‌ಕಾಲದಿಂದ ಕಿಟೊ ಪಥ್ಯಾಹಾರವನ್ನು ಅನುಸರಿಸಿದರೆ ಹೃದಯದ ಒಟ್ಟಾರೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗಬಲ್ಲವು ಎಂಬುದನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ದೀರ್ಘ‌ಕಾಲೀನ ಅಧ್ಯಯನದ ಅಗತ್ಯವಿದೆ.

ಹೃದಯದ ಆರೋಗ್ಯದ ಮೇಲೆ ಕಿಟೊಜೆನಿಕ್‌ ಪಥ್ಯಾಹಾರದ ಪರಿಣಾಮಗಳು ಸಂಕೀರ್ಣವಾಗಿವೆ ಮತ್ತು ಅವುಗಳನ್ನು ಇನ್ನೂ ಸಮಗ್ರವಾಗಿ ಅರಿತುಕೊಳ್ಳಲು ಆಗಿಲ್ಲ. ತೂಕ ಇಳಿಕೆ, ಹೃದ್ರೋಗಕ್ಕೆ ಕಾರಣವಾಗಬಲ್ಲ ಕೆಲವು ಅಂಶಗಳು ದೂರವಾಗುವಂತಹ ಸಂಭಾವ್ಯ ಪ್ರಯೋಜನಗಳು ಇವೆಯಾದರೂ ಹೈ ಸ್ಯಾಚುರೇಟೆಡ್‌ ಕೊಬ್ಬಿನಂಶ ಹಾಗೂ ಪೌಷ್ಟಿಕಾಂಶ ಸಮತೋಲನ ಮತ್ತು ರಕ್ತನಾಳಗಳ ಕಾರ್ಯಚಟುವಟಿಕೆಗಳ ಮೇಲೆ ಸಂಭಾವ್ಯ ಪ್ರತಿಕೂಲ ಪರಿಣಾಮಗಳು ಈ ಪಥ್ಯಾಹಾರದ ಋಣಾತ್ಮಕ ಅಂಶಗಳಾಗಿವೆ.

-ಡಾ| ಟಾಮ್‌ ದೇವಸ್ಯ,

ಪ್ರೊಫೆಸರ್‌ ಮತ್ತು ಯುನಿಟ್‌ ಹೆಡ್‌

ಕಾರ್ಡಿಯಾಲಜಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ, ಕೆಎಂಸಿ , ಮಂಗಳೂರು)

ಟಾಪ್ ನ್ಯೂಸ್

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

10-health

Asthma: ಎತ್ತರ ಪ್ರದೇಶಗಳು ಮತ್ತು ಅಸ್ತಮಾ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.