UV Fusion: ಜತೆಯಾಗಿ…ಹಿತವಾಗಿ… ಎಲ್ಲರೊಳಗೊಂದಾಗಿ…


Team Udayavani, Feb 19, 2024, 7:45 AM IST

10-uv-fusion

ಬದಲಾವಣೆ ಎಲ್ಲದರೊಳಗು, ಎಲ್ಲರೊಳಗು ನಿರಂತರವಾಗಿ ಘಟಿಸುವ ಸಂಗತಿ. ಬದಲಾವಣೆ ಸೃಷ್ಟಿಯ ನಿಯಮ. ನಾವೆಲ್ಲರೂ ಹುಟ್ಟಿನಿಂದಲೇ ನಿರಂತರ ಬದಲಾವಣೆಗೆ ನಮ್ಮನ್ನು ಒಡ್ಡಿಕೊಳ್ಳುತ್ತಲೇ ಇರುತ್ತೇವೆ. ಹಾಗಾದಾಗ ಮಾತ್ರ ಬೆಳವಣಿಗೆ ಸಾಧ್ಯ. ಚಲನಶೀಲತೆ ಇಲ್ಲದಿದ್ದರದೊಂದು ಬದುಕೇ ಅಲ್ಲ, ನಿಂತ ನೀರಂತೆ ಕೊಳಚೆಯಾಗುತ್ತದೆ ಅಷ್ಟೇ. ಎಷ್ಟೋ ವರ್ಷಗಳ ಹಳೆಯ ಗೆಳೆತನ, ಹುಟ್ಟುತ್ತಲೇ ಜತೆಗೆ ಅಂಟಿಕೊಂಡು ಬಂದ ಬಂಧ, ಸುತ್ತಲಿನ ವಾತಾವರಣದೊಟ್ಟಿಗೆ ಬೆಳೆದ ಸ್ನೇಹ, ಹೀಗೆ ಬದುಕಿನ ಹಾದಿಯಲ್ಲಿ ಅನೇಕರು ಎದುರಾಗುತ್ತಾರೆ. ನಮಗೆ ಅರಿವಿದ್ದೋ ಅಥವಾ ಇಲ್ಲದೆಯೋ ಅವರೆಡೆಗೊಂದು ನಿರೀಕ್ಷೆ ಅಥವಾ ಅವರೆಂದರೆ ಹೀಗೆಯೇ ಅನ್ನೋ ಅಲಿಖೀತ ಸರ್ಟಿಫಿಕೇಟ್‌ಗಳನ್ನು ತಲೆಯಲ್ಲಿ ತುಂಬಿಸಿಕೊಂಡಿರುತ್ತೇವೆ.

ನಮ್ಮ ಅನಿಸಿಕೆಗಳನ್ನು ಮೀರಿ ಅಥವಾ ನಿರೀಕ್ಷೆಗಳನ್ನು ತಪ್ಪಿ ಅವರೇನಾದರೂ ನಡೆದುಕೊಂಡರೆ, ನಮ್ಮೊಳಗೆ ನಾವು ಅರ್ಥವಿಲ್ಲದ ದೊಡ್ಡ ಕೋಲಾಹಲ ಅಥವಾ ವಿಪರೀತದ ಭಾವನೆಗಳನ್ನು ಸೃಷ್ಟಿಸಿಕೊಂಡು ನರಳುತ್ತೇವೆ. ಬದಲಾವಣೆಗಳನ್ನು ಒಪ್ಪಿಕೊಳ್ಳದಿರುವುದು ನಮ್ಮ ಮನಸ್ಸಿನ ದೌರ್ಬಲ್ಯ.

ಮತ್ತೂಬ್ಬರ ಸಣ್ಣ ಸಣ್ಣ ವರ್ತನೆಗಳು, ಮಾತುಗಳು ನಡವಳಿಕೆಗಳೂ ನಮ್ಮನ್ನು ಅಷ್ಟು ಡಿಸ್ಟರ್ಬ್ ಮಾಡಿ, ಸಂಬಂಧಗಳೆಡೆಗೆ ನಂಬಿಕೆ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತೇವೆ ಅಂದರೆ ತಪ್ಪು ನಮ್ಮದಾ ಅಥವಾ ಎದುರಿನವರದ್ದಾ?

ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧರಿರದ ನಾವು ಮತ್ತೂಬ್ಬರ ತಪ್ಪುಗಳನ್ನು ಬೇಗ ಗುರುತಿಸುತ್ತೇವೆ! ಅಫ್ಕೋರ್ಸ್‌ ಕಾಲಕ್ಕೆ ತಕ್ಕಂತೆ ಬದಲಾಗಲೇಬೇಕು. ಅವಶ್ಯಕತೆಗೆ ತಕ್ಕಷ್ಟು ಸಾಕು. ಇಲ್ಲದಿದ್ದರೆ ಜಗತ್ತು ಓಡುತ್ತಿರುತ್ತದೆ. ನಾವು ನಿಂತಲ್ಲೇ ನಿಂತು ವಿಕಲರಾಗುತ್ತೇವೆ ಅಷ್ಟೇ. ಅಸಲಿಗೆ ಯಾರಾದರೂ ಯಾಕೆ ನಾವಂದುಕೊಂಡಂತೆ ಇರಬೇಕು?

ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಸ್ವಾದ ಕಳೆದುಕೊಳ್ಳುತ್ತಿರುವುದೇ ಇದಕ್ಕೇ ಅಂತ ನನಗನ್ನಿಸುತ್ತದೆ. ಅವರು, ಹಾಗಿರಬೇಕಿತ್ತು, ಹೀಗಿರಬೇಕಿತ್ತು, ಹೀಗೆ ಮತ್ತೇನೇನೋ ಅಭಿಪ್ರಾಯಗಳೇ ಸಂಬಂಧಗಳನ್ನು ಇಂಚಿಂಚು ಕೊಲ್ಲುತ್ತಿರುವುದು ಅಲ್ಲವೇ? ನಾವು ಬೇರೆಯವರ ಮೇಲೆ ನಿರೀಕ್ಷೆ ಇಟ್ಟುಕೊಂಡಂತೆ, ನಮ್ಮ ಮೇಲೂ ಇತರರು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅವರೆಲ್ಲರ ಇಚ್ಛೆಯಂತೆ ನಾವು ಬದುಕುತ್ತಿದ್ದೇವಾ? ನಮ್ಮ ಯೋಚನೆಗಳೇ ಪದೇ ಪದೆ ಬದಲಾಗುವಾಗ ಮತ್ತೂಬ್ಬರ ಬದಲಾವಣೆ ನಮ್ಮನ್ನು ಅಷ್ಟೇಕೆ ಕಾಡಬೇಕು? ಯೋಚಿಸಬೇಕಾದ ವಿಷಯವೇ.

ಅನೇಕ ಕಾರಣಗಳಿಂದ ಜತೆಯಾದವರಿಗಿಂತ, ನಿತ್ಯವೂ ಕಾಫಿ ಶಾಪ್‌ನಲ್ಲಿ ಎದುರಾಗುವ ಮುಖ ಪರಿಚಯಕ್ಕೋ?ಮತ್ಯಾವುದೋ ವೇದಿಕೆಯಲ್ಲಿನ ಅನಿರೀಕ್ಷಿತ ಭೇಟಿಯಿಂದಾದ ಎಷ್ಟೋ ಪರಿಚಯಗಳು ನಮ್ಮ ಮೊಗದ ಮೇಲೆ ಮುಗುಳ್ನಗೆ

ಮೂಡಿಸಲು ಯಶಸ್ವಿಯಾಗುತ್ತವೆ. ಯಾಕೆ ಹಾಗೆ? ಕಾರಣವಿಷ್ಟೇ, ಅಲ್ಲಿ ಯಾರ ಇಷ್ಟ ಕಷ್ಟಗಳ ಹಂಗು ಯಾರಿಗೂ ಇರುವುದಿಲ್ಲ. ಯಾರೊಬ್ಬರ ಬದಲಾವಣೆಯು

ಮತ್ತೂಬ್ಬರ ಮೇಲೆ ಅಂತ ದೊಡ್ಡ ಪರಿಣಾಮವನ್ನೇನು ಬೀರುವುದಿಲ್ಲ. ಮುಖ್ಯವಾಗಿ ಅಲ್ಲಿ ಒಬ್ಬರಿಗೊಬ್ಬರ ಮೇಲೆ ಯಾವುದೇ ನಿರೀಕ್ಷೆಗಳಿರುವುದಿಲ್ಲ. ಆದ್ದರಿಂದಲೇ ಅಂತ ಅನಿರೀಕ್ಷಿತ ಬಂಧ/ಬಂಧುಗಳು ಮಧುರ ಅನ್ನಿಸುವುದು.

ಇನ್ನಾದರೂ ಬದಲಾಗೋಣ. ಎಲ್ಲರೂ ಅವರವರು ಸಾಗುವ ಹಾದಿಯಲ್ಲಿ ವಿಭಿನ್ನರೆ. ನಾವು ಮನದೊಳಗೆ ಮತ್ತೂಬ್ಬರ ಮೇಲೆ ಹುಟ್ಟಿಸಿಕೊಂಡ ನಿರೀಕ್ಷೆಗಳ ಅಂಟುಗಳನ್ನು ಕಿತ್ತೂಗೆದು, ನಿರಾಳವಾಗಿ ಮುಂದೆ ಸಾಗೋಣ, ಜತೆಯಾಗಿ…. ಹಿತವಾಗಿ.. ಎಲ್ಲರೊಳಗೊಂದಾಗಿ. ಪರಿವರ್ತನೆ ಜಗದ ನಿಯಮ. ಇದೇ ಬದುಕಿನ ಸುಂದರತೆ.

-ಪಲ್ಲವಿ ಚೆನ್ನಬಸಪ್ಪ

ಟಾಪ್ ನ್ಯೂಸ್

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-uv-fusion

Life: ಬಯಸಿದಂತೆಲ್ಲಾ ಇರುವುದಿಲ್ಲ ಬದುಕು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

6-uv-fusion

UV Fusion: ಸಹವಾಸ ದೋಷ

5-uv-fusion

UV Fusion: ಬೆಳವಣಿಗೆ ಯಾವುದು?

4-uv-fusion

Women: ಹೆಣ್ಣು ಹೊರೆಯಲ್ಲ ಶಕ್ತಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

mantrika kannada movie

Kannada Cinema; ಮಾಂತ್ರಿಕ ಆಟ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.