Kumbh Mela: ದಕ್ಷಿಣದ ಕುಂಭಮೇಳದ ಸೊಬಗು


Team Udayavani, Feb 21, 2024, 12:38 PM IST

8-uv-fusion

ಪ್ರತಿವರ್ಷವೂ ಪುಷ್ಯ ಬಹುಳ ಬಿದಿಗೆಯಂದು ನಡೆವ ಗವಿಮಠದ ಜಾತ್ರಾ ಮಹೋತ್ಸವಕ್ಕೆ ನಾಡಿನಾದ್ಯಂತ ಸಾಗರೋಪಾದಿಯಲ್ಲಿ ಜನ ಸೇರುತ್ತಾರೆ. ಹಾಗಾಗಿಯೇ ಇದನ್ನು ದಕ್ಷಿಣದ ಕುಂಭಮೇಳವೆಂದೇ ಕರೆಯುತ್ತಾರೆ. ಇಲ್ಲಿ ಜರಗುವ ಉತ್ಸವ, ಜಾತ್ರೆ ಕೇವಲ ಆಡಂಬರಕ್ಕೆ ಸೀಮಿತವಾಗಿಲ್ಲ. ಸಾಮಾನ್ಯವಾಗಿ ಎಲ್ಲ ಕಡೆಯಲ್ಲೂ ಜಾತ್ರೆ ಬೆಳಗ್ಗೆ ಆರಂಭವಾಗಿ ಸಂಜೆ ರಥೆ ಎಳೆಯುವ ಮೂಲಕ ಅಂತ್ಯಗೊಳ್ಳುತ್ತದೆ.

ಒಂದು ದಿನಕ್ಕೆ ಸೀಮಿತವಾಗಿರುತ್ತದೆ. ಗವಿಮಠದ ಐದಿನೈದು ದಿನಗಳ ಕಾಲ ನಡೆಯುತ್ತದೆ. ಇನ್ನು ಒಂದು ತಿಂಗಳು ಇರುವಾಗಲೇ ಇಲ್ಲಿಯ ಜಾತ್ರೆಯ ಸಿದ್ಧತೆಗಳು ಆರಂಭಗೊಳ್ಳುತ್ತವೆ. ಇಲ್ಲಿಯ ಯಾವ ಕಾರ್ಯಕ್ರಮಗಳು ಸರಕಾರದ ಅನುದಾನದಲ್ಲಿ ಜರಗುವುದಿಲ್ಲ. ಎಲ್ಲವೂ ಭಕ್ತರದ್ದೆ. ಜಿಲ್ಲೆಯ ಸುತ್ತಮುತ್ತ ಹಳ್ಳಿಯ ಜನರೆಲ್ಲಾ ಇಲ್ಲಿ ನಡೆವ ಏಳು ದಿನಗಳ ಮಹಾದಾಸೋಹಕ್ಕೆ ಜೋಳದ ಕಡಕ್‌ ರೊಟ್ಟಿ, ಥರಥರ ಚಟ್ನಿ ಪುಡಿಗಳು, ಕಾಯಿಪಲ್ಯಗಳು, ಮಾದಿಲಿ, ಬೂಂದಿ ಹೀಗೆ ವಿಭಿನ್ನ ಖಾದ್ಯ ಪದಾರ್ಥಗಳನ್ನು ಸ್ವತಃ ಮನೆಯಲ್ಲಿ ತಯಾರಿಸಿ,ಎತ್ತು ಬಂಡಿಗಳಲ್ಲಿ ಮಠಕ್ಕೆ ಬಂದು ಅರ್ಪಿಸುತ್ತಾರೆ. ಸ್ವ ಇಚ್ಚೆಯಿಂದ ಜಾತ್ರಾ ಸಿದ್ಧತೆಯಲ್ಲಿ ಪಾಲ್ಗೊಂಡು ಕರ ಸೇವೆಯನ್ನು ಮಾಡುತ್ತಾರೆ. ಕೆಲವರಂತೂ ಒಂದು ವಾರಗಳ ಕಾಲ ಮಠದಲ್ಲಿ ಉಳಿದುಕೊಂಡು ನಿರಪೇಕ್ಷವಾಗಿ, ನಿಷ್ಕಲ್ಮಶ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಇಲ್ಲಿನ ಭಕ್ತರ ಭಕ್ತಿಯ ಪರಾಕಾಷ್ಠೆಗೆ ಪಾರವೇ ಇಲ್ಲ.

ಗವಿಸಿದ್ದೇಶ್ವರನ ಜಾತ್ರೆ ಎಂದರೆ ಅದು ಸಾಮಾಜಿಕ ಜಾಗೃತಿಯಾತ್ರೆ’ ಗವಿಮಠದ ಶ್ರೀಗಳು ಮಹತ್ವಾಕಾಂಕ್ಷೆಯುಳ್ಳವರು. ಸಮಾಜದಲ್ಲಿ ವಿನೂತನ ಬದಲಾವಣೆ ತರುವ ನಿಟ್ಟಿನಲ್ಲಿ ಇಲ್ಲಿಯ ಕಾರ್ಯಶೈಲಿಯನ್ನು ರೂಪಿಸಿದವರು. ಸಮಾಜ ಸೇವೆಯೇ ಸಾಕ್ಷಾತ್ ಗವಿಸಿದ್ದೇಶ್ವರ ಸೇವೆ ಅಂದುಕೊಂಡವರು. ಹಾಗಾಗಿ ಪ್ರತಿವರ್ಷವೂ ಇಲ್ಲಿಯ ಜಾತ್ರೆ ಒಂದು ಮುಖ್ಯ ಧ್ಯೇಯವನ್ನು ಇಟ್ಟುಕೊಂಡು ಆರಂಭಗೊಳ್ಳುತ್ತದೆ.

ಪ್ರತಿವರ್ಷವೂ ಜಾತ್ರೆಯನ್ನು ಮಠಾಧಿಪತಿಗಳೇ ಆರಂಭಿಸುವುದಿಲ್ಲ. ಸಮಾಜದಲ್ಲಿ ಎಲೆ ಮರೆ ಕಾಯಿಯಂತೆ ಸಾಧನೆ ಮಾಡುತ್ತಿರುವ, ಮಾಡಿದ ಗಣ್ಯರನ್ನು ಅಂದು ಇಲ್ಲಿಗೆ ಆಹ್ವಾನಿಸಿ, ಅವರನ್ನು ಸಮ್ಮಾನಿಸಿ ಅವರಿಂದಲೇ ರಥೋತ್ಸವಕ್ಕೆ, ಚಾಲನೆಯನ್ನು ನೀಡಲಾಗುತ್ತದೆ.

ಮಠ ಮಂದಿರಗಳು ಇವತ್ತು ಸಾಮಾಜಿಕ ಕಳಕಳಿಯನ್ನು ಮೆರೆಯಬೇಕು. ಸಮಾಜದಲ್ಲಿ ಧರ್ಮಶ್ರದ್ಧೆ, ಸಮಾನತೆ, ಶಾಂತಿಯನ್ನು ಕಾಪಾಡಬೇಕು. ಈ ನಿಟ್ಟಿನಲ್ಲಿ ಗವಿಮಠ ಹಾಗೂ ಮಠಾಧಿಪತಿಗಳಾದ ಅಭಿನವ ಗವಿಶ್ರೀಗಳು ಅದನ್ನು ಚೆನ್ನಾಗಿ ಮಾಡಿಕೊಂಡು ಬರುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಸಮಾಜದಲ್ಲಿ ವಿನೂತನ ಸಾಮಾಜಿಕ ಕ್ರಾಂತಿಯೊಂದಕ್ಕೆ ನಾಂದಿಯಾಡಿದ್ದಾರೆ. ಕಾಯಕವೇ ಕೈಲಾಸ’ ಬಸವ ತತ್ತ್ವವನ್ನು ಅಕ್ಷರಶಃ ಪಾಲನೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

-ಗವಿಸಿದ್ದೇಶ್‌ ಕೆ. ಕಲ್ಗುಡಿ

ಗಂಗಾವತಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.