Farmers: ನೂರಾರು ಎಕರೆ ಅನ್ನದಾತರ ಕೃಷಿ ಭೂಮಿಗೆ ಕೈ ಹಾಕಿದ ಕೆಐಎಡಿಬಿ!


Team Udayavani, Feb 21, 2024, 2:42 PM IST

9

ಚಿಕ್ಕಬಳ್ಳಾಪುರ: ಒಂದಲ್ಲ, ಎರಡಲ್ಲ ಬರೋಬ್ಬರಿ 700 ಎಕೆರೆಗೂ ಅಧಿಕ ಪ್ರಮಾಣದ ಕೃಷಿ ಫ‌ಲವತ್ತಾದ ಭೂಮಿಯನ್ನು ಕೈಗಾರಿಕಾ ಸ್ಥಾಪನೆ ಹೆಸರಲ್ಲಿ ಕೆಐಎಡಿಬಿ ಅಧಿಕಾರಿಗಳು ಭೂ ಸ್ವಾಧೀನಕ್ಕೆ ಮುಂದಾಗಿ ರೈತರ ಗಮನಕ್ಕೆ ತರದೇ ರೈತರ ಪಹಣಿಗಳಲ್ಲಿ ಕೆಐಎಡಿಬಿ ಭೂ ಸ್ವಾಧೀನ ಎಂದು ನಮೂದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಸಬಾ ಹೋಬ ಳಿಯ ಬಡಗವಾರಹಳ್ಳಿ ಸಮೀಪ ನೂರಾರು ಎಕರೆ ರೈತರ ಕೃಷಿ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗೆ ತನ್ನ ವಶಕ್ಕೆ ಪಡೆದುಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಂದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಕೈಗಾರಿಕಾ ಅಭಿವೃದ್ಧಿಗೆಂದೇ ಗುರುತಿಸಿರುವ ಸಾವಿರಾರು ಎಕೆರೆ ಕೈಗಾರಿಕಾ ಅಭಿವೃದ್ಧಿ ಕಾಣದೇ ಪಾಳು ಬಿದ್ದಿದೆ. ಅದರಲ್ಲೂ ಚಿಂತಾಮಣಿ ತಾಲೂಕಿನಲ್ಲಿ ಮಸ್ತೇನಹಳ್ಳಿ ಕೈಗಾರಿಕಾ ಅಭಿವೃದ್ಧಿಗೆಂದು ಮೊದಲ ಹಂತದಲ್ಲಿ ಗುರುತಿಸಿರುವ 793.39 ಎಕರೆ, ಎರಡನೇ ಹಂತದಲ್ಲಿ ಗುರುತಿಸಿರುವ 501.58 ಕೆರೆ ಹಾಗೂ ಮೂರನೇ ಹಂತದಲ್ಲಿ ಗರಿತಿಸಿರುವ 1,494.30 ಜಮೀನು ಒಂದು ಕೈಗಾರಿಕೆ ತಲೆ ಎತ್ತದೇ ಇದುವರೆಗೂ ಇಡೀ ಕೈಗಾರಿಕಾ ಎಸ್ಟೇಟ್‌ ನನೆಗುದಿಗೆ ಬಿದ್ದಿದೆ.

ಇಂತ ಸಂದರ್ಭದಲ್ಲಿ ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯಲ್ಲಿ ಮತ್ತೆ 700 ಎಕರೆಯಷ್ಟು ರೈತರ ಕೃಷಿ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆ ಹೆಸರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಭೂ ಸ್ವಾಧೀನಕ್ಕೆಂದು ಪಹಣಿಗಳಲ್ಲಿ ರೈತರ ಗಮನಕ್ಕೆ ತರದೇ ಕೆಐಎಡಿಬಿ ಭೂ ಸ್ವಾಧೀನ ಎಂದು ನಮೂದಿರುವುದು ರೈತರಲ್ಲಿ ತೀವ್ರ ಕಳವಳ ಸೃಷ್ಟಿಯಾಗಿದ್ದು, ಹಲವು ದಶಕಗಳಿಂದ ತಮ್ಮ ಜೀವನೋ ಪಾಯಕ್ಕಾಗಿ ಕೃಷಿ ಚಟುವಟಿಕೆಗಳ ಮೂಲಕ ಬದುಕು ಕಟ್ಟಿಕೊಂಡಿರುವ ರೈತರಿಗೆ ಈಗ ಕೆಐಎಡಿಬಿ ಭೂ ಸ್ವಾಧೀನ ವಿಚಾರ ತೀವ್ರ ಆತಂಕವನ್ನು ತಂದೊಡ್ಡಿದೆ.

ಈ ಹಿಂದೆಯೆ ಚಿಂತಾಮಣಿ ತಾಲೂಕಿನ ಕನಿಶೆಟ್ಟಿಹಳ್ಳಿ ಸುತ್ತಮುತ್ತ ಸುಮಾರು 1.391.59 ಎಕರೆ ಜಾಗವನ್ನು ಕೈಗಾರಿಕಾ ಅಭಿವೃದ್ಧಿಗೆ ಜಾಗ ಗುರುತಿಸಲಾಗಿತ್ತು. ಅದು ಡಿಮ್ಡ್ ಫಾರಸ್ಟ್‌ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ಅದನ್ನು ಕೈ ಬಿಟ್ಟು ಈಗ ಕೃಷ್ಣರಾಜಪುರ, ಬಡಗವಾರಹಳ್ಳಿ, ದಿಗೂರು ಸುತ್ತಮುತ್ತ 700 ಎಕರೆಯಷ್ಟು ಕೃಷಿ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿ ಈಗಾಗಲೇ ಕೆಐಎಡಿಬಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ರೈತ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಚಿಂತಾಮಣಿ ತಾಲೂಕಿನಲ್ಲಿ ಕೈಗಾರಿಕಾ ಸ್ಥಾಪನೆಗೆ 700 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಕೆಐಎಡಿಬಿ ಅಧಿಕಾರಿಗಳನ್ನೇ ಕೇಳಬೇಕು. ● ವೀರಭದ್ರಯ್ಯ, ಜಂಟಿ ನಿರ್ದೇಶಕರು, ಕೈಗಾರಿಕೆ ಇಲಾಖೆ

ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Channapatna By-Election: ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿ?

Channapatna By-Election: ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿ?

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

fake court in gujarat

Gujarat: ನಕಲಿ ಪೊಲೀಸ್‌ ಆಯ್ತು, ಅರೆಸ್ಟ್‌ ಆಯ್ತು.. ಈಗ ನಕಲಿ ಕೋರ್ಟ್‌!

hockey; India playing against Germany

Hockey: ಜರ್ಮನಿ ವಿರುದ್ಧ “ಪ್ಯಾರಿಸ್‌ ಪ್ರತಿಕಾರ’ಕ್ಕೆ ಸಿದ್ಧತೆ

13 thousand recruitment in top 5 IT firms in first half of this year

IT: ಈ ವರ್ಷದ ಮೊದಲಾರ್ಧದಲ್ಲಿ ಅಗ್ರ 5 ಐಟಿ ಸಂಸ್ಥೆಗಳಲ್ಲಿ 13 ಸಾವಿರ ನೇಮಕ

Prime Minister Modi preached peace mantra to Putin again!

Narendra Modi: ಪುತಿನ್‌ಗೆ ಮತ್ತೆ ಶಾಂತಿ ಮಂತ್ರ ಬೋಧಿಸಿದ ಪ್ರಧಾನಿ ಮೋದಿ!

Madhya Pradesh: Three tourists were bitten by a leopard

Madhya Pradesh: ಚಿರತೆ ಕೆಣಕಿ, ಕಚ್ಚಿಸಿಕೊಂಡ ಮೂವರು ಪ್ರವಾಸಿಗರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

13-

Gudibanda: ದೇವಸ್ಥಾನದಲ್ಲಿ ಕಳವು; ಆರೋಪಿಗಳು ಪೊಲೀಸ್ ವಶಕ್ಕೆ

Cheque Bounce Case: ಚಿಂತಾಮಣಿ ಟಿಎಪಿಸಿಎಂಎಸ್‌ಗೆ 1.22 ಕೋಟಿ ದಂಡ

Cheque Bounce Case: ಚಿಂತಾಮಣಿ ಟಿಎಪಿಸಿಎಂಎಸ್‌ಗೆ 1.22 ಕೋಟಿ ದಂಡ

0528

Chikkaballapur: ಕೈ ಚೆಲ್ಲಿದ ಜನಪ್ರತಿನಿಧಿಗಳು: ಸುಂಕ ವಸೂಲಿಗೆ ನಗರಸಭೆ ಟೆಂಡರ್‌!

dinesh-gu

COVID ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ:ಚಿಕ್ಕಬಳ್ಳಾಪುರದಲ್ಲಿ ದಿನೇಶ್‌ ಗುಂಡೂರಾವ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Channapatna By-Election: ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿ?

Channapatna By-Election: ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿ?

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

fake court in gujarat

Gujarat: ನಕಲಿ ಪೊಲೀಸ್‌ ಆಯ್ತು, ಅರೆಸ್ಟ್‌ ಆಯ್ತು.. ಈಗ ನಕಲಿ ಕೋರ್ಟ್‌!

hockey; India playing against Germany

Hockey: ಜರ್ಮನಿ ವಿರುದ್ಧ “ಪ್ಯಾರಿಸ್‌ ಪ್ರತಿಕಾರ’ಕ್ಕೆ ಸಿದ್ಧತೆ

13 thousand recruitment in top 5 IT firms in first half of this year

IT: ಈ ವರ್ಷದ ಮೊದಲಾರ್ಧದಲ್ಲಿ ಅಗ್ರ 5 ಐಟಿ ಸಂಸ್ಥೆಗಳಲ್ಲಿ 13 ಸಾವಿರ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.