ಕೊಪ್ಪಳ: ಹುಬ್ಬಳ್ಳಿ-ಕುಷ್ಟಗಿ ರೈಲು ಸಂಚಾರಕ್ಕೆ ಸಿದ್ಧತೆ


Team Udayavani, Feb 21, 2024, 5:51 PM IST

ಕೊಪ್ಪಳ: ಹುಬ್ಬಳ್ಳಿ-ಕುಷ್ಟಗಿ ರೈಲು ಸಂಚಾರಕ್ಕೆ ಸಿದ್ಧತೆ

ಉದಯವಾಣಿ ಸಮಾಚಾರ
ಕುಷ್ಟಗಿ: ನೈಋತ್ಯ ರೈಲ್ವೆ ವಲಯದ ಕುಷ್ಟಗಿ ಪಟ್ಟಣಕ್ಕೆ ಗದಗ-ವಾಡಿ ರೈಲು ಮಾರ್ಗದ ಕುಷ್ಟಗಿ-ಹುಬ್ಬಳ್ಳಿ ರೈಲು ಸಂಚಾರ ಸೇವೆಗೆ ರೈಲ್ವೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಮೀನುಗಳಿಗೆ ಹೋಗಿ ಬರುವ ಸಂಪರ್ಕ ರಸ್ತೆಗೆ ಅಡಚಣೆಯಾಗಿರುವ ರೈಲು ಮಾರ್ಗದ ಅಡಚಣೆ ಸರಿದೂಗಿಸಲು ರೈತರ ತಕರಾರಿಗೆ ಮಣಿದ ರೈಲ್ವೆ ಇಲಾಖೆ, ಕೆಳಸೇತುವೆ ಬದಲಿಗೆ ಮೇಲ್ಸೇತುವೆ ನಿರ್ಮಿಸುವುದಕ್ಕೆ ತಾತ್ವಿಕವಾಗಿ ಸಮ್ಮತಿಸಿದೆ. ನೆರೆಬೆಂಚಿ ಸೀಮಾ ವ್ಯಾಪ್ತಿಯ ಹಳೆ ನಿಡಶೇಸಿ ರಸ್ತೆಯ ಜಮೀನು ಮೂಲ ಸಂಪರ್ಕ ರಸ್ತೆಯಾಗಿದೆ.

ಈ ಸಂಪರ್ಕ ರಸ್ತೆಯಲ್ಲಿ ತಮ್ಮ ಜಮೀನುಗಳಿಗೆ ಹೋಗಿ ಬರುವುದು ಈ ರೈಲು ಮಾರ್ಗ ಅಡ್ಡಿಯಾಗಿದೆ. ಕಾಮಗಾರಿ ಆರಂಭದಿಂದ ತಕರಾರು ಶುರುವಾಗಿತ್ತು. ಈಗ ರೈಲು ಹಳಿಗಳನ್ನು ಜೋಡಿಸಲಾಗಿದೆ. ಕಾಮಗಾರಿ ಮುಗಿಯುತ್ತಾ ಬಂದಾಗ್ಯೂ ಜಮೀನು ಸಂಪರ್ಕ ರಸ್ತೆಗೆ ಮೇಲ್ಸೇತುವೆ ನಿರ್ಮಾಣ ವೆಚ್ಚದಾಯಕ ಎಂದು ಬೇಡಿಕೆ ನಿರ್ಲಕ್ಷಿಸಿದ್ದರು.

ಆಗ ರೈತರು ಹೊಸ ಹಳಿಗಳ ಜೋಡಣೆಗೆ ಹಾಗೂ ಜಲ್ಲಿ ಕಲ್ಲು ಹಾಕುವ ಕೆಲಸಕ್ಕೆ ಅಡ್ಡಿಪಡಿಸಿದರು. ಆಗ ಪಿಎಸ್‌ಐ ಮುದ್ದುರಂಗಸ್ವಾಮಿ ಅವರು, ರೈಲ್ವೆ ಇಲಾಖೆ ಅಧಿಕಾರಿಗಳನ್ನು ತಹಶೀಲ್ದಾರ್‌ ರವಿ ಅಂಗಡಿ ಸಮ್ಮುಖದಲ್ಲಿ ಚರ್ಚಿಸಿ ಪರಿಹಾರ ಕಲ್ಪಿಸುವ ಭರವಸೆಗೆ ರೈತರು ಸಮ್ಮತಿಸಿದ್ದರು.

ಮಂಗಳವಾರ ಬೆಳಗ್ಗೆ ಹಳೆ ನಿಡಶೇಸಿ ರಸ್ತೆಯಲ್ಲಿ ಉದ್ದೇಶಿತ ಮೇಲ್ಸೇತುವೆ ಸ್ಥಳದಲ್ಲಿ ತಹಶೀಲ್ದಾರ್‌ ರವಿ ಅಂಗಡಿ, ಸಿಪಿಐ ಯಶವಂತ ಬಿಸನಲಳ್ಳಿ ಸಮ್ಮುಖದಲ್ಲಿ ರೈಲ್ವೆ ಇಲಾಖೆ ಮುಖ್ಯ ಎಂಜಿನಿಯರ್‌ ವೆಂಕಟೇಶ್ವರರಾವ್‌, ಉಪ ಮುಖ್ಯ ಎಂಜಿನಿಯರ್‌ ರವೀಂದ್ರ ಬಿರಾದಾರ, ಎಇಇ ಅಶೋಕ ಮುದಗೌಡ್ರು ರೈತರೊಂದಿಗೆ ಚರ್ಚಿಸಿದರು.

ಲಿಂಗಲಬಂಡಿ-ಕುಷ್ಟಗಿ ರೈಲು ನಿಲ್ದಾಣಗಳ ಮಧ್ಯೆ ಶಾಖಾಪೂರ ಮೇಲ್ಸೇತುವೆ ರಸ್ತೆಯಿಂದ 49.860 ಕಿ.ಮೀ. ಈಗಾಗಲೇ ಕೆಳ ಸೇತುವೆ ನಿರ್ಮಿಸಿರುವುದು ಅವೈಜ್ಞಾನಿಕವಾಗಿದೆ. ರೈತರ ಬೇಡಿಕೆ ಇದ್ದಲ್ಲಿ ಮೇಲ್ಸೇತುವೆ ನಿರ್ಮಿಸದೇ ಅವಶ್ಯಕತೆ ಇಲ್ಲದ ಸ್ಥಳದಲ್ಲಿ ಕೆಳಸೇತುವೆ ನಿರ್ಮಿಸಿದ್ದಾರೆ. ಇದರಲ್ಲಿ ಮೇವು, ಕೃಷಿ ಉತ್ಪನ್ನ ತುಂಬಿದ ಚಕ್ಕಡಿ, ಟ್ರಾಕ್ಟರ್‌ ಸಹ ಹೋಗದು.

ಮಳೆಯಾದರೆ ಮಳೆ ನೀರು ಅಲ್ಲಿ ಜಮಾಯಿಸಿ ಸಂಚಾರ ಅಡಚಣೆಯಾಗುತ್ತಿದ್ದು, ಹಳೆ ನಿಡಶೇಸಿ ರಸ್ತೆಗೆ ಮೇಲ್ಸೇತುವೆ ನಿರ್ಮಿಸಬೇಕೆಂದು ನೆರೆಬೆಂಚಿ ಗ್ರಾಮದ ಬಸವರಾಜ ಗುರಿಕಾರ, ಹುಬ್ಬೇಶ ಆದೋನಿ, ಲಕ್ಷ್ಮವ್ವ ಟಕ್ಕಳಕಿ ಸೇರಿದಂತೆ ರೈತರು ಬಿಗಿಪಟ್ಟ ಹಿಡಿದರು.

ರೈಲ್ವೆ ಅಧಿಕಾರಿಗಳು ಹಳೆ ನಿಡಶೇಸಿ ಜಮೀನು  ಸಂಪರ್ಕ ರಸ್ತೆಗೆ ಮೇಲ್ಸೇತುವೆ ನಿರ್ಮಿಸುವುದಾದರೆ ಭೂ ಸ್ವಾಧೀನ ಮೊದಲಾದ ಪ್ರಕ್ರಿಯೆಗಳಿಗೆ ಸಮಯ ಹಿಡಿಯುತ್ತಿದ್ದು, ತುರ್ತಾಗಿ ರೈತರ ಬೇಡಿಕೆಗೆ ಅನಗುಣವಾಗಿ ರೈಲ್ವೆ ಕೆಳ ಸೇತುವೆ ನಿರ್ಮಿಸಿ ಒಳ ಚರಂಡಿಯ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದಾಗ ರೈತರು ತಕರಾರು ವ್ಯಕ್ತಪಡಿಸಿದರು. ಆಗ ರೈಲ್ವೆ ಅಧಿ ಕಾರಿಗಳೊಂದಿಗೆ ವಾಗ್ವಾದ ನಡೆಯಿತು.

ರೈತರ ಬಿಗಿ ನಿಲುವಿಗೆ ಸಮ್ಮತಿಸಿದ ರೈಲ್ವೆ ಅಧಿಕಾರಿಗಳು ರೈಲ್ವೆ ಮೇಲ್ಸೇತುವೆಗೆ ಹೆಚ್ಚುವರಿ ಭೂಮಿ, ಸರ್ವಿಸ್‌ ರಸ್ತೆಯ ಭೂಮೀಗೆ ಕೆಐಡಿಎಬಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸದರಿ ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರ ಹಣ ವರ್ಗಾಯಿಸಿದ ನಂತರ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಕ್ರಮದ ಭರವಸೆಗೆ ಲಿಖಿತ ಪತ್ರ ಪಡೆದ ಬಳಿಕವೇ ರೈತರು ಒಲ್ಲದ ಮನಸ್ಸಿನಿಂದಹಿಂಪಡೆದರು.

ಡಿಸಿಇ ಪಲಾಯನ
ರೈಲು ನಿಲ್ದಾಣದ ಪ್ಲಾಟ್‌ ಫಾರ್ಮ ಸೇರಿದಂತೆ ರೈಲು ಮಾರ್ಗ ಕೆಳ ಸೇತುವೆ ಮೆಟ್ಟಿಲು ಇತ್ಯಾದಿ  ಕಾಮಗಾರಿಗಳಿಗೆ ನೀರಿನ ಕ್ಯೂರಿಂಗ್‌ ಆಗದೇ ಕಲ್ಲುಗಳು ಸಡಿಲುಗೊಂಡು ಕುಸಿಯುವ ಸಾಧ್ಯತೆ ಬಗ್ಗೆ ಸುದ್ದಿಗಾರರ ಪ್ರಸ್ತಾಪಕ್ಕೆ ಉಪ ಮುಖ್ಯ ಎಂಜಿನಿಯರ್‌
ರವೀಂದ್ರ ಬಿರಾದಾರ ಸ್ಪಷ್ಟನೆ ನೀಡದೇ ಪಲಾಯನಗೈದ ಪ್ರಸಂಗ ನಡೆಯಿತು. ರೈಲು ಮಾರ್ಗದ ಸಿಮೆಂಟ್‌ ಕಾಮಗಾರಿಗೆ ನೀರಿನ ಕ್ಯೂರಿಂಗ್‌ ಆಗಿಲ್ಲ. ಬೆರಳಿನಿಂದ ಕೆದರಿದರೆ ಸಿಮೆಂಟು ಕಿತ್ತು ಬರುತ್ತಿದೆ. ಮಳೆಯಾದಲ್ಲಿ ಮೆಟ್ಟಿಲುಗಳ ಕಲ್ಲುಗಳು ಕಳಚಿ ಬೀಳುವ ಸಾಧ್ಯತೆಗಳಿವೆ. ರೈಲ್ವೆ ಅಧಿಕಾರಿಗಳು ಗುತ್ತಿಗೆದಾರರ ಕೆಲಸಗಳಿಗೆ ಚಕಾರವೆ ತ್ತದೇ ಸುಮ್ಮನಾಗಿರುವುದು ಸ್ಥಳೀಯರ ಆಕ್ರೋಶ ಕಾರಣವಾಗಿದೆ. ಕೊಪ್ಪಳ ಸಂಸದ, ಕುಷ್ಟಗಿ ಶಾಸಕರು ಈ ಬಗ್ಗೆ ತಲೆಕಡಿಸಿಕೊಳ್ಳದೇ ಇರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ಫೆಬ್ರುವರಿ ಮಾಸಾಂತ್ಯದ ವೇಳೆಗೆ ರೈಲು ಸಂಚರಿಸುವ ಒತ್ತಡಕ್ಕೆ ಸಿಲುಕಿರುವ ಅಧಿಕಾರಿಗಳು ಕಳಪೆ ಕಾಮಗಾರಿಗೆ ಜಾಣ ಕುರುಡು ವ್ಯಕ್ತವಾಗಿರುವುದು ಅಚ್ಚರಿಯಾಗಿದೆ.

ನೆರೆಬೆಂಚಿ ಸೀಮಾದಲ್ಲಿರುವ ಹಳೆ ನಿಡಶೇಸಿ ರಸ್ತೆ ಪೂರ್ವ ಕಾಲದಿಂದಲೂ ಬಳಕೆಯಲ್ಲಿದೆ. ಈ ಜಮೀನು ಸಂಪರ್ಕ ರಸ್ತೆಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸದೇ ಇದ್ದಲ್ಲಿ ಕೊಪ್ಪಳ ಸಂಸದ, ಕುಷ್ಟಗಿ ಶಾಸಕರನ್ನು ಊರೊಳಗೆ ಬರಲು ಬಿಡುವುದಿಲ್ಲ.
ಬಸವರಾಜ್‌ ಗುರಿಕಾರ, ನೆರೆಬೆಂಚಿ ಗ್ರಾಮಸ್ಥ

ರೈತರ ಚಕ್ಕಂಡಿ, ಟ್ರಾಕ್ಟರ್‌ ವಾಹನ ಸುಗಮ ಸಂಚಾರಕ್ಕೆ ರೈಲ್ವೆ ಮೇಲ್ಸೇತುವೆ ನಿರ್ಮಿಸಲೇ ಬೇಕು. ರೈಲ್ವೆ ಅಧಿಕಾರಿಗಳು ಇವತ್ತು ಇಲ್ಲಿಗೆ ಬಂದು ಮೂಗಿಗೆ ತುಪ್ಪ ಹಚ್ಚಿ ಹೋಗ್ತಾರೆ ಎಲ್ಲಾ ಕೆಲಸ ಮುಗಿದ ಮೇಲೆ ರೈತರ ವಿರುದ್ಧ ತಿರುಗಿ ಬೀಳ್ತಾರೆ.
ಹುಬ್ಬೇಶ ಅದೋನಿ, ಕುಷ್ಟಗಿ ರೈತ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala: ಲಾರಿ ಡಿಕ್ಕಿ ಹೊಡೆದು ಪಲ್ಟಿಯಾದ ಟ್ರ್ಯಾಕ್ಟರ್… ಗಣೇಶನ ವಿಗ್ರಹಕ್ಕೆ ಹಾನಿ

Koppala: ಲಾರಿ ಡಿಕ್ಕಿ ಹೊಡೆದು ಪಲ್ಟಿಯಾದ ಟ್ರ್ಯಾಕ್ಟರ್… ಗಣೇಶನ ವಿಗ್ರಹಕ್ಕೆ ಹಾನಿ

Kushtagi: ಸಾಕಿದ ಮಾಲೀಕನಿಗೆ ಬೈಕ್ ಗೆದ್ದು ಕೊಟ್ಟ ಟಗರು!

Kushtagi: ಸಾಕಿದ ಮಾಲೀಕನಿಗೆ ಬೈಕ್ ಗೆದ್ದು ಕೊಟ್ಟ ಟಗರು!

2-gangavathi

Gangavathi: ಪ್ಲಾಸ್ಟಿಕ್ ತಿಂದ ಕರುವಿಗೆ ಉಸಿರಾಟ ತೊಂದರೆ; ನೆರವಿಗೆ ಬಂದ ಕ್ರಿಕೆಟ್ ಆಟಗಾರರು

Kushtagi; ಶಿಕ್ಷಕರ ಶ್ರಮ-ಹಳ್ಳಿಯ ಸರ್ಕಾರಿ ಶಾಲೆಗೆ ʼಹೈಟೆಕ್‌ʼ ಸ್ಪರ್ಶ

Kushtagi; ಶಿಕ್ಷಕರ ಶ್ರಮ-ಹಳ್ಳಿಯ ಸರ್ಕಾರಿ ಶಾಲೆಗೆ ʼಹೈಟೆಕ್‌ʼ ಸ್ಪರ್ಶ

5

Gangavathi: ಐತಿಹಾಸಿಕ ಪಂಪಾ ಸರೋವರಕ್ಕೆ ಬೇಕಿದೆ ಮೂಲಸೌಕರ್ಯ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.