Udupi: ಕರಿಮಣಿ ಮಾಲಕರು ಪತ್ತೆ! ಪ್ರಾಮಾಣಿಕತೆ ಮೆರೆದ ಬಸ್ ಸಿಬಂದಿ
Team Udayavani, Feb 22, 2024, 8:33 PM IST
ಉಡುಪಿ: ಬಸ್ನಲ್ಲಿ ಕಳೆದುಕೊಂಡ ಲಕ್ಷಾಂತರ ರೂ.ಬೆಲೆಬಾಳುವ ವಜ್ರದ ಕರಿಮಣಿ ಸರವನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಬಸ್ ಚಾಲಕ ಹಾಗೂ ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ಗುರುವಾರ ಮಣಿಪಾಲದಿಂದ ಮಂಗಳೂರಿಗೆ ಬೆಳಗ್ಗೆ ಮೊದಲ ಟ್ರಿಪ್ ಹೋಗುತ್ತಿದ್ದ ರೇಷ್ಮಾ ಹೆಸರಿನ ಖಾಸಗಿ ಬಸ್ನಲ್ಲಿ ತೆರಳುತ್ತಿದ್ದ ಮಣಿಪಾಲ ಮೂಲದ ದಂಪತಿಗೆ ಮಂಗಳೂರಿಗೆ ತಲುಪಿದಾಗ ಕರಿಮಣಿ ನಾಪತ್ತೆಯಾಗಿರುವುದು ತಿಳಿದುಬಂದು. ಕೂಡಲೇ ಅವರು ಟಿಕೆಟ್ನಲ್ಲಿದ್ದ ರೇಷ್ಮಾ ಬಸ್ನ ಸಂಖ್ಯೆಗೆ ಕರೆಮಾಡಿ ವಿಚಾರ ತಿಳಿಸುತ್ತಾರೆ. ಕರಿಮಣಿಯನ್ನು ಯಾರೋ ಮರೆತು ಬಸ್ನಲ್ಲಿ ಬಿಟ್ಟುಹೋಗಿದ್ದಾರೆ ಎಂದು ತಿಳಿದ ಬಸ್ ಸಿಬಂದಿ ಅದನ್ನು ಜೋಪಾನವಾಗಿ ತೆಗೆದಿರಿಸಿದ್ದಾರೆ. ಕರಿಮಣಿ ಮಾಲಕರು ಕರೆಮಾಡಿದಾಗ ಸೂಕ್ತ ದಾಖಲೆ ನೀಡಿದರೆ ವಾಪಾಸು ನೀಡುವುದಾಗಿ ತಿಳಿಸಿ ಮಣಿಪಾಲಕ್ಕೆ ಬರುವಂತೆ ಸೂಚಿಸಿದ್ದಾರೆ. ಅದರಂತೆ ಮಂಗಳೂರಿನಿಂದ ಮಣಿಪಾಲಕ್ಕೆ ಆಗಮಿಸಿದ ಕರಿಮಣಿ ಮಾಲಕರಿಗೆ ಬಸ್ ಚಾಲಕ ಪುರಂದರ, ನಿರ್ವಾಹಕ ಆಸಿಫ್ ಅವರು ಬಸ್ನಲ್ಲಿ ದೊರೆತ ನಾಲ್ಕೂವರೆ ಲ.ರೂ.ಬೆಲೆ ಬಾಳುವ ವಜ್ರದ ಕರಿಮಣಿಸರವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.