Politics: ನಮ್ಮ ಕುಟುಂಬದ ಒಂದು ಹೆಣವೂ ಬಿಜೆಪಿ ಸೇರಲ್ಲ: ಪ್ರಿಯಾಂಕ್ ಖರ್ಗೆ
Team Udayavani, Feb 22, 2024, 9:42 PM IST
ವಿಧಾನಸಭೆ: ನಮ್ಮ ಕುಟುಂಬದಿಂದ ಒಂದು ಹೆಣವೂ ಬಿಜೆಪಿಗೆ ಸೇರ್ಪಡೆಯಾಗುವುದಿಲ್ಲ, ನಮ್ಮ ರಕ್ತದಲ್ಲೇ ಆರ್ಎಸ್ಎಸ್, ಬಿಜೆಪಿ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಜೆಟ್ ಚರ್ಚೆ ಸಂದರ್ಭದಲ್ಲಿ, ಬಿಜೆಪಿ ಕಾಲದಲ್ಲಿ 40 ಪರ್ಸೆಂಟ್ ಕಮಿಷನ್ ಹಗರಣ ನಡೆದಿದೆ ಎಂದು ಪ್ರಿಯಾಂಕ್ ಖರ್ಗೆ ಪದೇಪದೆ ಆರೋಪಿಸಿದಾಗ ತಿರುಗೇಟು ಕೊಟ್ಟ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಇದನ್ನು ಪದೇಪದೆ ಹೇಳುವ ಬದಲು ತನಿಖೆ ನಡೆಸಿ, ಇಲ್ಲ ಸಿಬಿಐಗೆ ಕೊಡಿ. ಸುಮ್ಮನೆ ಆರೋಪ ಮಾಡಬೇಡಿ, ಎಲ್ಲ ಅಡ್ಜೆಸ್ಟ್ಮೆಂಟಾ? ಎಂದು ಕೆಣಕಿದರು.
“ನೀವು ಸಹಕರಿಸಿದರೆ ಆಗುತ್ತದೆ’ ಎಂದು ಖರ್ಗೆ ಹೇಳಿದಾಗ, ನಾನು ಸರ್ವಪಕ್ಷಗಳ ವಿರೋಧ ಪಕ್ಷ ನಾಯಕ. ಆದರೆ ನೀವು ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಆಕಾಂಕ್ಷೆ ವ್ಯಕ್ತಪಡಿಸಿದ್ದೀರಿ ಎಂದರು. ನೀವು ಶಾಶ್ವತವಾಗಿ ವಿಪಕ್ಷದಲ್ಲಿದ್ದರೆ ನಾನು ಆಗುತ್ತೇನೆ ಎಂದು ಪ್ರಿಯಾಂಕ್ ಹೇಳಿದಾಗ, “ಈ ದೇಶದಲ್ಲಿ ಕಟ್ಟಾ ಕಾಂಗ್ರೆಸಿಗರೇ ಬಿಜೆಪಿಗೆ ಬರುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಹೆಸರೂ ಕೇಳಿ ಬರುತ್ತಿದೆ’ ಎಂದು ಯತ್ನಾಳ್ ಕಾಲೆಳೆದರು. “ನಮ್ಮ ಕುಟುಂಬದ ಒಂದು ಹೆಣವೂ ಬಿಜೆಪಿಗೆ ಬರುವುದಿಲ್ಲ’ ಎಂದು ಪ್ರಿಯಾಂಕ್ ಹೇಳಿದಾಗ, “ಈ ರೀತಿ ಹೇಳಿದ ತುಂಬಾ ಜನರನ್ನು ನೋಡಿದ್ದೇನೆ’ ಎಂದು ಯತ್ನಾಳ್ ಚರ್ಚೆಗೆ ತೆರೆ ಎಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ಭ್ರಷ್ಟಾಚಾರ ಕ್ಷಮಿಸಲಾಗದು ಎಂದಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ಕೊಡಬೇಕು: ರಾಮುಲು
Kottigehara: ಪಿತೃ ಪಕ್ಷದ ಊಟಕ್ಕೆ ಮಾವನ ಮನೆಗೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ಭೂಪ
MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ಸಾಧ್ಯತೆ
MUDA Scam: ರಾಜೀನಾಮೆ ಪ್ರಶ್ನೆಯೇ ಇಲ್ಲ: ಮತ್ತೆ ಸಿಎಂ ಸಿದ್ದರಾಮಯ್ಯ ಖಡಕ್ ನುಡಿ
MUDA Scam: ಸಿಎಂ ರಾಜೀನಾಮೆಗೆ ಕೋಳಿವಾಡ ಆಗ್ರಹ; ಕಾಂಗ್ರೆಸ್ ನಾಯಕರ ಭಿನ್ನರಾಗ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.