Desi Swara: ಮಾತೃಭಾಷೆ ಎಂಬ ಮಮಕಾರ-ಮಾತೃಭಾಷೆಯನ್ನು ಬಳಸೋಣ; ಇತರರಿಗೂ ಕಲಿಸೋಣ

ಪೀಳಿಗೆಗಳ ನಡುವಿನ ಸಂಬಂಧವನ್ನು ಬಲಗೊಳಿಸುವುದೇ ಇದರ ಉದ್ದೇಶ

Team Udayavani, Feb 24, 2024, 1:20 PM IST

Desi Swara: ಮಾತೃಭಾಷೆ ಎಂಬ ಮಮಕಾರ-ಮಾತೃಭಾಷೆಯನ್ನು ಬಳಸೋಣ; ಇತರರಿಗೂ ಕಲಿಸೋಣ

ಮಗು ಶಾಲೆಯನ್ನು ಆರಂಭಿಸುವುದು ಇಂಗ್ಲಿಷ್‌ನಲ್ಲಿ, ಮುಂದುವರೆಯುವುದು ಫ್ರೆಂಚ್‌ನಲ್ಲಿ, ಅನಂತರ ಉದ್ಯೋಗಕ್ಕಾಗಿ ಜರ್ಮನ್‌ ಭಾಷೆಯನ್ನು ಕಲಿತ ಉದಾಹರಣೆಗಳು ಬಹಳಷ್ಟಿವೆ. ಹಾಗಾದರೆ ಪರಭಾಷೆಯನ್ನು ಕಲಿಯುವುದು ಸೂಕ್ತವಲ್ಲವೇ? ಹಾಗೇನಿಲ್ಲ ಇಂದು ನಾವು ತಾಂತ್ರಿಕ ಯುಗದಲ್ಲಿ ಯಾವ ದೇಶದ ಯಾವ ಮೂಲೆಯಲ್ಲಿದ್ದು ಕೆಲಸ ಮಾಡಬೇಕಾಗುತ್ತದೆಯೋ ಅದೇ ರೀತಿ ಜೀವನ ಮಾಡಬೇಕಾಗುತ್ತದೆಯೋ ಗೊತ್ತಿಲ್ಲ. ಹಾಗಾಗಿ ಭಾಷೆಗಳು ಗೊತ್ತಿದ್ದಷ್ಟು ನಾವು ಯಾವುದೇ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಬಹುದು. ಆದರೆ ಮಾತೃಭಾಷೆಯನ್ನು ಮಾತ್ರ ಕಡೆಗಣಿಸಬಾರದು. ತಮ್ಮ ಮುಂದಿನ ಪೀಳಿಗೆಗೆ ಈ ಭಾಷೆ, ಸಂಸ್ಕೃತಿಯನ್ನು ಒಪ್ಪಿಸಲೇಬೇಕು.

ಮಾತೃಭೂಮಿ, ಮಾತೃಭಾಷೆ ಎಂದರೆ ರೋಮ ರೋಮದಲ್ಲೂ, ರಕ್ತದ ಪ್ರತೀ ಕಣಕಣದಲ್ಲೂ , ಪ್ರತೀ ಉಸಿರಿನಲ್ಲೂ ಅಪಾರವಾದ ಪ್ರೀತಿ, ಗೌರವ, ಭಕ್ತಿ ಮತ್ತು ಹೆಮ್ಮೆ ಸಮ್ಮಿಲನ ಎಂದು ಹೇಳಿದರೆ ತಪ್ಪಾಗಲಾರದು. ಯಾವುದೇ ರೀತಿಯ ಒಂದು ಸಂವಹನ ಯಶಸ್ವಿಯಾಗಬೇಕಾದರೆ ಅದು ಮಾತೃಭಾಷೆಯಲ್ಲಿ ಆದಾಗ ಮಾತ್ರ ಸಾಧ್ಯ. ಬೇರೆ ಯಾವುದೇ ಭಾಷೆಯಲ್ಲಿ ಸಂಪೂರ್ಣ ಹಿಡಿತವಿದೆ ಎಂದುಕೊಂಡರೂ ಒಂದಲ್ಲ ಒಂದು ನ್ಯೂನ್ಯತೆ ಕಂಡು ಬರುವ ಸಾಧ್ಯತೆ ಇದೆ. ಹಾಗಂತ ಮಾತೃಭಾಷೆಯಲ್ಲಿ ಸಂವಹನ ನಡೆದರೆ ತಪ್ಪುಗಳು ಆಗುವುದೇ ಇಲ್ಲ ಅಂತ ಹೇಳಲಾಗದು.

ಸಂವಹನ ಕ್ರಿಯೆಯಲ್ಲಿ ಹಾವ-ಭಾವ, ಧ್ವನಿಯಲ್ಲಿ ಏರಿಳಿತ, ಪದಗಳ ಉಪಯೋಗ ಇನ್ನೂ ಹಲವಾರು ಅಂಶಗಳು ಮುಖ್ಯವಾಗಿವೆ. ಒಂದಂತೂ ಸತ್ಯ ಇವೆಲ್ಲ ಅಂಶಗಳು ಮಾತೃಭಾಷೆಯಲ್ಲಿ ಎಷ್ಟು ಸರಿಯಾಗಿ ಬಳಸುತ್ತೇವೆಯೋ ಅಷ್ಟು ಸರಿಯಾಗಿ ಬೇರೆ ಭಾಷೆಯಲ್ಲಿ ಬಳಸಲಾಗುವುದಿಲ್ಲ, ಅದು ಸಾಧ್ಯವಾದರೂ ಕೂಡ ಬೇರೆ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಾಗ ಮಾತ್ರ.

ಭಾಷೆಯು ಕಲಿಯುವಿಕೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಶಿಕ್ಷಣದ ಯಶಸ್ಸು ಭಾಷೆಯನ್ನು ಅವಲಂಬಿಸಿದೆ. ಹಾಗಾಗಿ ಇಂದಿನ ದಿನಗಳಲ್ಲಿ ನಾವು ಅನೇಕ ಭಾಷೆಗಳ ಆಯ್ಕೆಯ ಪಟ್ಟಿಯನ್ನು ನೋಡಬಹುದಾಗಿದೆ. ಇದು ಶಾಲೆಯಿಂದಲೇ ಪ್ರಾರಂಭವಾಗುತ್ತದೆ. ತಮ್ಮ ತಮ್ಮ ಮಾತೃಭಾಷೆಯನ್ನು ಆಯ್ಕೆ ಮಾಡಿಕೊಂಡು ಅದೇ ಭಾಷೆಯಲ್ಲಿ ಕಲಿಯುವ ಶಿಕ್ಷಣವನ್ನು ಪೂರೈಸುವ ಉದ್ದೇಶ ಯುನೆಸ್ಕೊ ಸಂಸ್ಥೆಯದ್ದಾಗಿದೆ.

ಈ ಜಗತ್ತಿನಲ್ಲಿ ಸರಿ ಸುಮಾರು 7,139 ಅಧಿಕೃತವಾಗಿ ಬಳಸಲ್ಪಡುವ ಭಾಷೆಗಳಿವೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಇತಿಹಾಸ ಇದೆ. ಹಾಗೆಯೇ ಆ ಭಾಷೆಯನ್ನು ಬಳಸಲ್ಪಡುವ, ಪಸರಿಸುವ ಜನರಿ¨ªಾರೆ. ಎಲ್ಲರಿಗೂ ಅವರವರ ಭಾಷೆಯ ಬಗ್ಗೆ ಪ್ರೀತಿ, ಮೋಹ, ಗೌರವ, ಹೆಮ್ಮೆ ಇದ್ದೇ ಇರುತ್ತದೆ. ಹಾಗಾಗಿ ಈ ಎಲ್ಲ ಭಾಷೆಗಳಿಗಾಗಿ ಅಂತಾರಾಷ್ಟ್ರೀಯ ಮಾತೃಭಾಷೆಯ ದಿನವನ್ನಾಗಿ ಆಚರಿಸುವ ಉದ್ದೇಶ ಮೂಡಿತು. ಹೀಗೆ ಈ ದಿನವನ್ನು ಪ್ರತೀ ವರ್ಷವೂ ಆಚರಿಸಲು ನಿರ್ಧರಿಸಲಾಯಿತು. ಇಂತಹ ಆಚರಣೆಯಿಂದ ಭಾಷೆಗಳ ಉದ್ಧಾರದೆಡೆಗೆ ಯೋಜನೆಗಳನ್ನು ಹಾಕಿಕೊಳ್ಳಲಾಯಿತು. ಪ್ರತೀ ವರ್ಷವೂ ಒಂದೊಂದು ವಿಷಯವನ್ನಿಟ್ಟುಕೊಂಡು ಪ್ರತಿಯೊಂದು ಭಾಷೆಯ ಉಳಿಯುವಿಕೆ ಹಾಗೂ ಬೆಳವಣಿಗೆಯ ಬಗ್ಗೆ ಹೆಚ್ಚು ಒತ್ತು ಕೊಡಲಾಯಿತು.

ಹೀಗೆ ಮೊಟ್ಟಮೊದಲು ಅಂತಾರಾಷ್ಟ್ರೀಯ ಮಾತೃಭಾಷೆಯ ದಿನವನ್ನು ಆಚರಿಸುವ ಯೋಚನೆಯನ್ನು ಬಾಂಗ್ಲಾದೇಶವು ಹರಿಬಿಟ್ಟಿತ್ತು. 1999ರ ಯುನೆಸ್ಕೋ ಅಧಿವೇಶನದಲ್ಲಿ ಈ ಯೋಚನೆಯನ್ನು ಅನುಮೋದಿಸಲಾಯಿತು. ಅನಂತರದ ವರ್ಷ ಅಂದರೆ 2000ದಲ್ಲಿ ವಿಶ್ವವಿಡೀ ಅಂತಾರಾಷ್ಟ್ರೀಯ ಮಾತೃಭಾಷೆಯ ದಿನವನ್ನು ಆಚರಿಸಲಾಯಿತು. ಈ ದಿನವನ್ನು ಪ್ರತೀ ವರ್ಷ ಫೆಬ್ರವರಿ 21ರಂದು ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು ಹಾಗೂ ಪ್ರತೀ ವರ್ಷ ಒಂದು ವಿಷಯವನ್ನಿಟ್ಟುಕೊಂಡು ಆಚರಿಸಲಾಯಿತು. ಈ ವರ್ಷದ ವಿಷಯ ಬಹುಭಾಷಾ ಶಿಕ್ಷಣ ಪದ್ಧತಿಯು ಅಂತರ್‌ ಪೀಳಿಗೆಗಳ ಕಲಿಕೆಯ ಸ್ತಂಭ ಎನ್ನುವುದಾಗಿದೆ. ಬಹುಭಾಷೆಗಳ ಕಲಿಕೆಗೆ ಒತ್ತು ಕೊಟ್ಟು ಒಂದು ಪೀಳಿಗೆಯಿಂದ ಮತ್ತೂಂದು ಪೀಳಿಗೆಗೆ ಹರಿಯುವ ಭಾಷೆ, ಸಂಸ್ಕೃತಿಯನ್ನು ಇಮ್ಮಡಿಗೊಳಿಸಿ ಪೀಳಿಗೆಗಳ ನಡುವಿನ ಸಂಬಂಧವನ್ನು ಬಲಗೊಳಿಸುವುದೇ ಇದರ ಉದ್ದೇಶವಾಗಿದೆ.

ಬಹುಭಾಷಾ ಪದ್ಧತಿ ಮತ್ತು ಬಹುಸಂಸ್ಕೃತಿಯ ಸಮಾಜವು ಉಳಿಯಬೇಕಾದರೆ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಭಾಷೆಯು ಸಂಸ್ಕೃತಿಯ ಜ್ಞಾನವನ್ನು ಹಬ್ಬಿಸುವಲ್ಲಿ ಸಹಕಾರಿಯಾಗಿದೆ. ಇಂದು ಭಾಷಾ ವೈವಿಧ್ಯತೆಗೆ ಕುಂದು ಬಂದಿರುವುದಕ್ಕೆ ಕಾರಣ ಅನೇಕ ಭಾಷೆಗಳು ಕಣ್ಮರೆಯಾಗಿರುವುದಾಗಿದೆ.

ವಿಶ್ವದಾದ್ಯಂತ ಸುಮಾರು ಶೇ. 40 ಪ್ರತಿಶತ ಜನರು ತಮ್ಮ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವಲ್ಲಿ ವಿಫ‌ಲರಾಗುತ್ತಿದ್ದಾರೆ. ಬಹುಭಾಷೆಗಳ ಬಗ್ಗೆ ಜಾಗೃತಿ, ಅನ್ವಯ ಮಾಡಿದಾಗ್ಯೂ ಕೂಡ ಈ ರೀತಿಯ ಸಮಸ್ಯೆಗಳು ಸಮಾಜವನ್ನು ಕಾಡುತ್ತಿವೆ.

ಯುನೆಸ್ಕೊ ಮಾತೃಭಾಷೆಯನ್ನು ಉಳಿಸುವ ಹಾಗೂ ಅದರಲ್ಲೇ ಶಿಕ್ಷಣ ಕೊಡಿಸುವುದಕ್ಕಾಗಿ ಹೋರಾಡುವಾಗ ಜನರು ಬೇರೆ ಭಾಷೆಯನ್ನು ಕಲಿತು ಅದರಲ್ಲಿ ಶಿಕ್ಷಣವನ್ನು ಪಡೆದು ತಮ್ಮ ಭಾಷೆಯನ್ನು ಮರೆತು ಬೇರೆ ಭಾಷೆಯಲ್ಲೇ ಮುಂದುವರೆಯುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಪಡೆಯಲು ಅಥವಾ ಉದ್ಯೋಗ ಅರಸಲು ಅಲ್ಲಿಯ ಭಾಷೆಯನ್ನು ಕಲಿಯಲೇಬೇಕು ಹಾಗಾಗಿ ಜನರು ಬಹುಭಾಷಿಕರಾಗುತ್ತಿದ್ದಾರೆ.

ಮಗು ಶಾಲೆಯನ್ನು ಆರಂಭಿಸುವುದು ಇಂಗ್ಲಿಷ್‌ನಲ್ಲಿ, ಮುಂದುವರೆಯುವುದು ಫ್ರೆಂಚ್‌ನಲ್ಲಿ, ಅನಂತರ ಉದ್ಯೋಗಕ್ಕಾಗಿ ಜರ್ಮನ್‌ ಭಾಷೆಯನ್ನು ಕಲಿತ ಉದಾಹರಣೆಗಳು ಬಹಳಷ್ಟಿವೆ. ಹಾಗಾದರೆ ಪರಭಾಷೆಯನ್ನು ಕಲಿಯುವುದು ಸೂಕ್ತವಲ್ಲವೇ? ಹಾಗೇನಿಲ್ಲ ಇಂದು ನಾವು ತಾಂತ್ರಿಕ ಯುಗದಲ್ಲಿ ಯಾವ ದೇಶದ ಯಾವ ಮೂಲೆಯಲ್ಲಿದ್ದು ಕೆಲಸ ಮಾಡಬೇಕಾಗುತ್ತದೆಯೋ ಅದೇ ರೀತಿ ಜೀವನ ಮಾಡಬೇಕಾಗುತ್ತದೆಯೋ ಗೊತ್ತಿಲ್ಲ. ಹಾಗಾಗಿ ಭಾಷೆಗಳು ಗೊತ್ತಿದ್ದಷ್ಟು ನಾವು ಯಾವುದೇ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಬಹುದು.

ಆದರೆ ಮಾತೃಭಾಷೆಯನ್ನು ಮಾತ್ರ ಕಡೆಗಣಿಸಬಾರದು. ತಮ್ಮ ಮುಂದಿನ ಪೀಳಿಗೆಗೆ ಈ ಭಾಷೆ, ಸಂಸ್ಕೃತಿಯನ್ನು ಒಪ್ಪಿಸಲೇಬೇಕು. ನಾವೆಲ್ಲ ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಹಾಗೆ ವಿದೇಶಗಳಲ್ಲೂ ನಮ್ಮ ಮಾತೃಭಾಷೆ ಕಲಿಸುವ ವ್ಯವಸ್ಥೆಯಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿ ಕನ್ನಡಿಗರು ತಮ್ಮ ಹೆಜ್ಜೆಯ ಗುರುತನ್ನು ಮಾಡಿದ್ದಾರೆ. ಅದೇ ರೀತಿ ಕನ್ನಡದ ಕಂಪನ್ನೂ ಪಸರಿಸಿದ್ದಾರೆ. ಸಮಾನ ಮನಸ್ಕರು ಸೇರಿ ಕನ್ನಡ ಶಾಲೆಯನ್ನು ತೆರೆಯುವುದು, ಮಕ್ಕಳಿಗೆ ಕನ್ನಡ ಕಲಿಸುವುದು, ಕನ್ನಡ ಲೇಖಕರ ಗುಂಪು, ಕನ್ನಡ ಸಂಘಗಳು, ಕನ್ನಡ ಚಲನಚಿತ್ರಗಳ ಬಿಡುಗಡೆ ಹೀಗೆ ಹತ್ತು ಹಲವಾರು ರೀತಿಯಿಂದ ಕನ್ನಡದಕಂಪು ಎಲ್ಲೆಡೆ ಪಸರುತ್ತಿದೆ.

ನಾವೆಲ್ಲರೂ ಸೇರಿ ನಮ್ಮ ಮಾತೃಭಾಷೆಯನ್ನು ಉಳಿಸೋಣ, ಹಾಗೆಯೇ ಬೆಳೆಸೋಣ. ಪರಭಾಷೆಗಳಿಗೂ ಗೌರವ ಸಲ್ಲಿಸೋಣ. ಆವಶ್ಯಕತೆಯಿದ್ದಲ್ಲಿ ಅವರ ಭಾಷೆಯನ್ನು ನಾವೂ ಕಲಿಯೋಣ ಮತ್ತು ಅವರಿಗೂ ನಮ್ಮ ಭಾಷೆ ಕಲಿಸೋಣ. ಮಾತೃಭಾಷೆಯ ಮಮಕಾರವೆಂದೂ ತಪ್ಪದು. ಹಾಗೆಯೇ ನಮ್ಮಿಂದ ಪರಭಾಷೆಗಳಿಗೂ ಗೌರವ ತಪ್ಪದು. ನಾವೆಲ್ಲ ಸಹೋದರ ಸಹೋದರಿಯರಂತೆ ನಾಡು, ನುಡಿ ,ಸಂಸ್ಕೃತಿಯನ್ನು ಹಬ್ಬಿಸುವಲ್ಲಿ ಹಾಗೂ ಇತರರ ಸಂಸ್ಕೃತಿಗೆ ಧಕ್ಕೆ ಬಾರದ ಹಾಗೆ ನೋಡಿಕೊಳ್ಳುವುದರಲ್ಲಿ ನಿಪುಣರಾಗಿದ್ದೇವೆ. ಇನ್ನು ಇದನ್ನೆಲಾ ಮುಂದುವರೆಸುವುದು ಮಾತ್ರ ನಮ್ಮ ಧ್ಯೇಯವಾಗಬೇಕು. ಈ ಅಂತಾರಾಷ್ಟ್ರೀಯ ಮಾತೃಭಾಷೆಯ ದಿನದ ಉದ್ದೇಶದಂತೆ ಹಿಂದಿನ ಪೀಳಿಗೆ ಹಾಗೂ ಮುಂದಿನ ಪೀಳಿಗೆ ನಡುವಿನ ಸಂಬಂಧವನ್ನು ಗಟ್ಟಿಗೊಳಿಸೋಣ.

*ಜಯಾ ಛಬ್ಬೀ, ಮಸ್ಕತ್‌

ಟಾಪ್ ನ್ಯೂಸ್

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು

Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು

Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ

Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ

Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…

Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.