![Devara-Mane](https://www.udayavani.com/wp-content/uploads/2024/07/Devara-Mane-415x249.jpg)
INLD ಅಧ್ಯಕ್ಷ ನಫೆ ಸಿಂಗ್ ರಾಠಿ ಅವರನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು
ಕನಿಷ್ಠ 40-50 ಸುತ್ತು ಗುಂಡು ಹಾರಿಸಲಾಗಿದೆ... ಬೆಚ್ಚಿಬಿದ್ದ ಹರ್ಯಾಣ
Team Udayavani, Feb 25, 2024, 7:30 PM IST
![1-aasddas](https://www.udayavani.com/wp-content/uploads/2024/02/1-aasddas-620x349.jpg)
ಬಹದ್ದೂರ್ಗಢ: ಭಾರತೀಯ ರಾಷ್ಟ್ರೀಯ ಲೋಕದಳ ಪಕ್ಷದ( INLD) ಹರ್ಯಾಣ ಅಧ್ಯಕ್ಷ ನಫೆ ಸಿಂಗ್ ರಾಠಿ ಅವರನ್ನು ಭಾನುವಾರ ಬಹದ್ದೂರ್ಗಢದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿಯಲ್ಲಿ ಪಕ್ಷದ ಮತ್ತೊಬ್ಬ ಕಾರ್ಯಕರ್ತ ಕೂಡ ಸಾವನ್ನಪ್ಪಿದ್ದಾರೆ.
ಹುಂಡೈ ಐ10 ನಲ್ಲಿದ್ದ ಶೂಟರ್ಗಳು ರಾಠಿ ಅವರ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ ಮತ್ತು ಮೂವರು ಭದ್ರತಾ ಸಿಬಂದಿಗೂ ಗಂಭೀರ ಗಾಯಗಳಾಗಿವೆ. ಕನಿಷ್ಠ 40-50 ಸುತ್ತು ಗುಂಡು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ರಾಠಿ ಎಸ್ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.
INLD ಹರಿಯಾಣದ ಪ್ರಮುಖ ರಾಜಕೀಯ ಪಕ್ಷವಾಗಿದೆ. ಕಾರ್ಯಕರ್ತರು ಹತ್ಯೆಯನ್ನು ಖಂಡಿಸಿ ವ್ಯಾಪಕ ಆಕ್ರೋಶ ಹೊರ ಹಾಕಲು ಆರಂಭಿಸಿದ್ದಾರೆ.
ಟಾಪ್ ನ್ಯೂಸ್
![Devara-Mane](https://www.udayavani.com/wp-content/uploads/2024/07/Devara-Mane-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.